ಆ್ಯಪ್ನಗರ

ಕಲುಷಿತ ನೀರು ಸ್ಮಶಾನಕ್ಕೆ ಹರಿದು ತೊಂದರೆ: ಗ್ರಾಮಸ್ಥರ ಆಕ್ರೋಶ

ಚನ್ನಪಟ್ಟಣ ತಾಲೂಕಿನ ಅಪ್ಪಗೆರೆ ಗ್ರಾಮದ ಸ್ಮಶಾನಕ್ಕೆ ಪಟ್ಟಣದ ಅಂಬೇಡ್ಕರ್‌ನಗರ ಹಾಗೂ ಸಿಎಂಸಿ ಲೇಔಟ್‌ನ ಕಲುಷಿತ ನೀರು ಹರಿದು ಬರುತ್ತಿರುವುದರಿಂದ ಶವ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

Vijaya Karnataka 26 Apr 2019, 5:00 am
ಚನ್ನಪಟ್ಟಣ: ತಾಲೂಕಿನ ಅಪ್ಪಗೆರೆ ಗ್ರಾಮದ ಸ್ಮಶಾನಕ್ಕೆ ಪಟ್ಟಣದ ಅಂಬೇಡ್ಕರ್‌ನಗರ ಹಾಗೂ ಸಿಎಂಸಿ ಲೇಔಟ್‌ನ ಕಲುಷಿತ ನೀರು ಹರಿದು ಬರುತ್ತಿರುವುದರಿಂದ ಶವ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
Vijaya Karnataka Web contaminated water tearing to cemetery the villagers outrage
ಕಲುಷಿತ ನೀರು ಸ್ಮಶಾನಕ್ಕೆ ಹರಿದು ತೊಂದರೆ: ಗ್ರಾಮಸ್ಥರ ಆಕ್ರೋಶ


ರಾಂಪುರ ಗ್ರಾಮ ಪಂಚಾಯಿತಿ ನಗರಸಭೆ ವ್ಯಾಪ್ತಿಯ ಅಪ್ಪಗೆರೆ ಗ್ರಾಮದಲ್ಲಿರುವ ಸ್ಮಶಾನಕ್ಕೆ ಕಾಂಪೌಂಡ್‌ ಮತ್ತು ತಡೆಗೋಡೆಯಿಲ್ಲದ ಕಾರಣ ಅಂಬೇಡ್ಕರ್‌ನಗರ ಹಾಗೂ ಸಿಎಂಸಿ ಲೇಔಟ್‌ ಮನೆಗಳ ಶೌಚಾಲಯ ಮತ್ತು ಗಲೀಜು ನೀರು ಸ್ಮಶಾನಕ್ಕೆ ನುಗ್ಗುತ್ತಿದ್ದು, ಇದರಿಂದ ಶವಸಂಸ್ಕಾರ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸುತ್ತಮುತ್ತಲು ಗಬ್ಬು ವಾಸನೆಯಿಂದ ಕೂಡಿದ್ದರೂ ಇಲ್ಲಿಯವರೆಗೂ ನಗರಸಭೆ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ಗಮನ ನೀಡುತ್ತಿಲ್ಲ ಎಂದು ಗ್ರಾಮದ ಯುವ ಮುಖಂಡರಾದ ಕಿರಣ್‌, ಗೋಪಿನಾಥ್‌, ಸಿದ್ದು, ಚೇತನ್‌ ಹಾಗೂ ಗ್ರಾಪಂ ಸದಸ್ಯ ವೆಂಕಟರಾಮು ಪ್ರಸಾದ್‌, ಶಶಾಂಕ್‌, ಸಿದ್ದಲಿಂಗಯ್ಯ ಸೇರಿದಂತೆ ಹಲವಾರು ಮುಖಂಡರು ಆರೋಪಿಸಿದ್ದಾರೆ.

ಸ್ಮಶಾನಕ್ಕೆ ಹರಿದ ಶೌಚಾಲಯ ನೀರು: ಶತಮಾನಗಳಿಂದ ಅಪ್ಪಗೆರೆ ಗ್ರಾಮದಲ್ಲಿ ಶವಸಂಸ್ಕಾರ ಮಾಡುತ್ತಾ ಬರಲಾಗಿದ್ದು ಇಲ್ಲಿಯವರೆಗೂ ಯಾವುದೇ ತೊಂದರೆಯಿಲ್ಲದೆ ನಡೆಯುತ್ತಿತ್ತು. ಆದರೆ ಇತ್ತಿಚಿನ ವರ್ಷಗಳಲ್ಲಿ ಬಡಾವಣೆಗಳು ನಿರ್ಮಾಣವಾಗಿದ್ದು ಅಲ್ಲಿ ವಾಸವಾಗಿರುವ ಮನೆಗಳಲ್ಲಿನ ಶೌಚಾಲಯ ಮತ್ತು ಉಪಯೋಗಿಸುವ ಕುಲಷಿತ ನೀರು ಕಾಲುವೆಯ ಮೂಲಕ ಹರಿದು ಸ್ಮಶಾನಕ್ಕೆ ಸೇರುತ್ತಿದೆ. ಇದರಿಂದ ತೊಂದರೆಯಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ನಗರಸಭೆ ಆಯುಕ್ತರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಮಶಾನದ ಅಭಿವೃದ್ಧಿಯ ಬಗ್ಗೆ ಗಮನ ನೀಡಿ ಅನುಕೂಲ ಕಲ್ಪಿಸಿ ಕೊಡಲಿ ಎಂದು ನಗರಸಭೆಗೆ ಏಳು ತಿಂಗಳ ಹಿಂದೆ ಅರ್ಜಿ ಸಲ್ಲಿಸಿ ಮನವಿ ಪತ್ರ ನೀಡಲಾಗಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಗಳ ಬಗ್ಗೆ ನಾಟಕವಾಡಲು ಮುಂದಾಗಿದ್ದಾರೆ ಎಂದರು.

ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ: ಇಲ್ಲಿನ ಸುತ್ತಮುತ್ತಲ ಜನರೆಲ್ಲರು ಇದೇ ಜಾಗದಲ್ಲಿ ಶವಗಳನ್ನು ಮಣ್ಣು ಮಾಡುತ್ತಿದ್ದು, ಶವ ಸಂಸ್ಕಾರಕ್ಕೆಂದು ಬರುವ ಸಂಬಂಧಿಕರು ಇಲ್ಲಿನ ಗಲೀಜು ನೀರಿನಲ್ಲಿ ನಿಲ್ಲಲಾಗದೆ, ಜತೆಗೆ ಅದರಿಂದ ಬರುವ ಗಬ್ಬು ವಾಸನೆ ಸಹಿಸಲಾಗದೆ ಹಿಡಿಶಾಪ ಹಾಕುತ್ತಿದ್ದರೂ ನಗರಸಭೆ ಅಧಿಕಾರಿಗಳು ಇದಕ್ಕೂ, ತಮಗೂ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಸ್ಮಶಾನದಲ್ಲಿ ಮೂಲಭೂತ ಸೌಕರ್ಯವಿಲ್ಲದೆ ತೊಂದರೆ ಅನುಭವಿಸುವಂತಾಗಿರುವ ಗ್ರಾಮಸ್ಥರನ್ನು ಕಡೆಗಣಿಸುತ್ತಿರುವ ಪ್ರತಿನಿಧಿಗಳಾಗಲಿ ಹಾಗೂ ಅಧಿಕಾರಿಗಳಾಗಲಿ ಕೂಡಲೇ ಸೌಕರ್ಯ ಒದಗಿಸಲು ಮುಂದಾಗದಿದ್ದರೆ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ