ಆ್ಯಪ್ನಗರ

ಜಿಲ್ಲೆಯಲ್ಲಿ ಮುಂದುವರಿದ ಮಳೆ ಆರ್ಭಟ

ರಾಜ್ಯದಲ್ಲಿ ಮುಂಗಾರು ಪ್ರವೇಶಿಸಲು ಕೆಲವೇ ದಿನಬಾಕಿ ಇದ್ದು, ಮಳೆ ಆರ್ಭಟ ಮುಂದುವರಿದಿದೆ. ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸರಾಸರಿ 20 ಮಿ.ಮೀ ಮಳೆಯಾಗಿದೆ.

Vijaya Karnataka Web 4 Jun 2019, 5:00 am
ರಾಮನಗರ: ರಾಜ್ಯದಲ್ಲಿ ಮುಂಗಾರು ಪ್ರವೇಶಿಸಲು ಕೆಲವೇ ದಿನಬಾಕಿ ಇದ್ದು, ಮಳೆ ಆರ್ಭಟ ಮುಂದುವರಿದಿದೆ. ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸರಾಸರಿ 20 ಮಿ.ಮೀ ಮಳೆಯಾಗಿದೆ.
Vijaya Karnataka Web continuous rainfall in the district
ಜಿಲ್ಲೆಯಲ್ಲಿ ಮುಂದುವರಿದ ಮಳೆ ಆರ್ಭಟ


ಕಳೆದ ಮೂರು ವಾರಗಳಿಂದ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದೆ. ಭಾನುವಾರ ರಾತ್ರಿ 9 ಗಂಟೆಯ ವೇಳೆ ಆರಂಭವಾದ ಗುಡುಗು ಸಹಿತ ಬಾರಿ ಮಧ್ಯ ರಾತ್ರಿ 9ಗಂಟೆಯ ತನಕ ಸುರಿದಿದೆ. ಸತತ ಮಳೆಯಿಂದಾಗಿ ಜನತೆ ಹಾಗೂ ರೈತರ ಮೊಗದಲ್ಲಿ ಸಂತಸವನ್ನುಂಟು ಮಾಡಿದೆ.

ಭಾರಿ ಮಳೆಯ ಪರಿಣಾಮದಿಂದಾಗಿ ಅರ್ಕಾವತಿ ನದಿನೀರಿನ ಅರಿವು ಹೆಚ್ಚಾಗಿದೆ. ಕನಕಪುರ ತಾಲೂಕಿನ ಮರಳವಾಡಿ ಕೋಡಿ ಹಳ್ಳಿ ಹೋಬಳಿಯಲ್ಲಿ ಸತತ ಮೂರು ಗಂಟೆಗಳ ಕಾಲ ಮಳೆಯಾಗಿದೆ. ಚನ್ನಪಟ್ಟಣ ತಾಲೂಕಿನ ಸುತ್ತಮುತ್ತಲ ಪ್ರದೇಶದಲ್ಲಿ ಒಂದುಗಂಟೆ ಹೆಚ್ಚು ಮಳೆ ಸುರಿದಿದೆ.

ಕೆರೆ ಕಟ್ಟೆಗಳಲ್ಲಿ ನೀರು: ಮಾಗಡಿ ತಾಲೂಕಿನ ಸುತ್ತಮುತ್ತ ಪ್ರದೇಶದಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ರಾತ್ರಿ 7ರ ಸಮಯಕ್ಕೆ ಶುರುವಾದ ಮಳೆ ನಿರಂತರವಾಗಿ 11 ಗಂಟೆಯ ತನಕ ಸುರಿದಿದೆ.

ಕುದೂರು ಸೋಲೂರು ತಿಪ್ಪ ಸಂದ್ರ ಹೋಬಳಿಯ ಬಹುತೇಕ ಕರೆ ಕಟ್ಟೆಗಳು,ಗೋವಿನ ಕಟ್ಟೆ ,ಸಣ್ಣಪುಟ್ಟ ಚೆಕ್‌ ಡ್ಯಾಮಗಳಲ್ಲಿ ನೀರು ನಿಂತಿದೆ. ಇನ್ನುಳಿದಂತೆ ಕರೆಗಗಳಿಗೆ ನೀರಿನ ಅರಿವು ಹೆಚ್ಚಾಗಿದೆ.

ಎಸಿ ಕಚೇರಿಯಲ್ಲಿ ನೀರು: ಭಾನುವಾರರಾತ್ರಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಎಸಿ ಕಚೇರಿಯ ನೆಲಮಹಡಿಯಲ್ಲಿ ನೀರು ನಿಂತಿದೆ.

ಕಚೇರಿ ಕಾರ‍್ಯಕ್ಕೆ ಆಗಮಿಸಿದ ಸಾರ್ವಜನಿಕರು, ನಿಂತ ನೀರಿನಲ್ಲಿ ತಮ್ಮಕಾರ‍್ಯದಲ್ಲಿ ತೊಡಗಿಸಿಕೊಂಡಿದ್ದರು. ಅದರಲ್ಲೂ, ಈ ಭಾಗದಲ್ಲಿ ಹೆಚ್ಚಾಗಿ ಆಧಾರ್‌ಕಾರ್ಡ್‌ ಮತ್ತು ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಮಾಡಿಸಲು ಜನತೆ ಪ್ರತಿ ನಿತ್ಯ ಹೆಚ್ಚಾಗಿ ಆಗಮಿಸುತಾರೆ. ಇಂತಹ ವೇಳೆ ಮಳೆಯ ನೀರಿನಿಂದಾಗಿ ಕಷ್ಟಪಡುವಂತಾಗಿತ್ತು.

ತಾಲೂಕು ಮಳೆಪ್ರಮಾಣ

ಮಾಗಡಿ 42ಮಿ.ಮೀ

ರಾಮನಗರ 24ಮಿ.ಮೀ

ಚನ್ನಪಟ್ಟಣ 12 ಮಿ.ಮೀ

ಕನಕಪುರ 07ಮಿ.ಮೀ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ