ಆ್ಯಪ್ನಗರ

ಕಂಪ್ಲಿ ಶಾಸಕನಿಗೆ ಮುಂದುವರಿದ ಹುಡುಕಾಟ

ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಶಾಸಕರಿಬ್ಬರ ಬಡಿದಾಟ ಪ್ರಕರಣದ ಆರೋಪಿಯಾಗಿರುವ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

Vijaya Karnataka 29 Jan 2019, 5:00 am
ರಾಮನಗರ: ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಶಾಸಕರಿಬ್ಬರ ಬಡಿದಾಟ ಪ್ರಕರಣದ ಆರೋಪಿಯಾಗಿರುವ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
Vijaya Karnataka Web continuous search for the complaint mla
ಕಂಪ್ಲಿ ಶಾಸಕನಿಗೆ ಮುಂದುವರಿದ ಹುಡುಕಾಟ


ಶಾಸಕರ ಬೆನ್ನಟ್ಟಿ ಮುಂಬಯಿನಿಂದ ಪುಣೆಗೆ ಹೋಗಿರುವ ಬಿಡದಿ ಪೊಲೀಸರ ತಂಡ, ಕಳೆದ ಮೂರು ದಿನಗಳಿಂದಲ್ಲೂ ಪುಣೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಇನ್ನೊಂದು ತಂಡ ಗೋವಾ ಕಡೆಗೆ ಪ್ರಯಾಣಿಸಿದ್ದರೆ, ಇನ್ನುಳಿದ ಎರಡು ತಂಡ ಸ್ಥಳೀಯವಾಗಿ ಪತ್ತೆ ಕಾರ‍್ಯದಲ್ಲಿ ತೊಡಗಿಕೊಂಡಿವೆ.

ಸುಳ್ಳಾದ ನಿರೀಕ್ಷೆ: ರಾಮನಗರದ ನ್ಯಾಯಾಲಯದಲ್ಲಿ ಆರೋಪಿ ಶಾಸಕರ ಪರ ವಕೀಲರು ಸೋಮವಾರವು ಸಹ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡಿಲ್ಲ. ಕಳೆದ 1 ವಾರದಿಂದಲೂ ಅರ್ಜಿ ಸಲ್ಲಿಕೆ ಕಾರ‍್ಯ ಮುಂದೂಡುತ್ತಿರುವುದು ವಿಶೇಷ. ರಾಜಿ ಸಂಧಾನಗಳ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಸಮ್ಮಿಶ್ರ ಸರಕಾರವೇ ಮಧ್ಯಸ್ಥಿಕೆ ವಹಿಸಿದೆ ಎಂಬ ವದಂತಿಗಳು ದಟ್ಟವಾಗಿವೆ.

ಬಂಧನದ ವದಂತಿ: ಈ ಮಧ್ಯೆ, ಗೋವಾದಲ್ಲಿ ಗಣೇಶ್‌ ಬಂಧನವಾಗಿದೆ ಎಂಬ ವದಂತಿ ಸೋಮವಾರ ದಟ್ಟವಾಗಿ ಹಬ್ಬಿತ್ತು. ಆದರೆ, ಬಂಧನ ಸುದ್ದಿ ಸುಳ್ಳು ಎಂದು ಶಾಸಕ ಗಣೇಶ್‌ ಅವರ ಕುಟುಂಬದ ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?: ಆಪರೇಷನ್‌ ಕಮಲದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ಶಾಸಕರು ಬಿಡಾರ ಹೂಡಿದ್ದ ವೇಳೆ ವಿಜಯಪುರ ಶಾಸಕ ಆನಂದ್‌ ಸಿಂಗ್‌, ಕಂಪ್ಲಿ ಶಾಸಕ ಗಣೇಶ್‌ ಬಡಿದಾಡಿಕೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆನಂದ್‌ ಸಿಂಗ್‌ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ