ಆ್ಯಪ್ನಗರ

ಕಸಾಯಿಖಾನೆಗೆ ಸಂತೆಯಲ್ಲಿ ರಾಸು ಖರೀದಿ

ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯಲ್ಲಿ ಅಂತಾರಾಜ್ಯದ ಕಸಾಯಿ ಖಾನೆಗೆ ರಾಜ್ಯದ ಸಾವಿರಾರು ಹಸು ಕರುಗಳ ಸಾಗಣೆ ಮಾಡಲಾಗುತ್ತದೆ ಎಂದು ಸ್ಥಳೀಯರು ವಾಹನಗಳ ತಡೆದು ಆಕ್ರೋಶ ವ್ಯಕ್ತಡಿಸಿದ್ದಾರೆ.

Vijaya Karnataka 20 Jul 2019, 5:08 pm
ಮರಳವಾಡಿ: ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯಲ್ಲಿ ಅಂತಾರಾಜ್ಯದ ಕಸಾಯಿಖಾನೆಗೆ ರಾಜ್ಯದ ಸಾವಿರಾರು ಹಸು ಕರುಗಳ ಸಾಗಣೆ ಮಾಡಲಾಗುತ್ತದೆ ಎಂದು ಸ್ಥಳೀಯರು ವಾಹನಗಳ ತಡೆದು ಆಕ್ರೋಶ ವ್ಯಕ್ತಡಿಸಿದ್ದಾರೆ.
Vijaya Karnataka Web cow calves transport to slaughterhouse
ಕಸಾಯಿಖಾನೆಗೆ ಸಂತೆಯಲ್ಲಿ ರಾಸು ಖರೀದಿ


ವಾರದ ಒಂದು ದಿನ ನಡೆಯುವ ಸಂತೆಯಲ್ಲಿ ಖರೀದಿ ಮಾಡಿ ಸಾಕಾಣೆ ಮಾಡುವ ನೆಪದಲ್ಲಿ ತಮಿಳುನಾಡಿನ ಕಸಾಯಿಖಾನೆ ತೆಗೆದುಕೊಂಡು ಹೋಗಲಾಗುತ್ತಿದೆ. ಪ್ರಮುಖವಾಗಿ ಎಳೆಯ ಕರುಗಳು, ವಿಮೆ ಇರುವ ಹಸುಗಳು, ಎಮ್ಮೆಗಳ ಖರೀದಿ ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಸಂತೆಯಲ್ಲಿ ಖರೀದಿ: ತೊಪ್ಪಗಾನಹಳ್ಳಿ ಸಂತೆ ವಾರಕ್ಕೆ ಒಂದು ದಿನ ನಡೆಯುತ್ತದೆ.ಅಲ್ಲಿಗೆ ಬರುವ ಅಂತಾರಾಜ್ಯ ರಾಸುಗಳನ್ನು ಪಡೆಯುವವರು ಸ್ಥಳೀಯ ರೈತರ ಹತ್ತಿರ ಸಾಕುವ ಮಾತು ಹೇಳಿ ಖರೀದಿ ಮಾಡುತ್ತಾರೆ. ಬರಗಾಲ ಮತ್ತು ಮೇವಿನ ಕೊರತೆ ಮನಗಂಡು ಮಾರಾಟ ಮಾಡುವ ರೈತರನ್ನು ಸ್ಥಳೀಯ ಬ್ರೋಕರ್‌ಗಳ ಮುಖಾಂತರ ಸಂತೆಯಲ್ಲಿ ಕರುಗಳನ್ನು ಖರೀದಿಸುತ್ತಾರೆ.

ಎಷ್ಟು ಖರೀದಿ ಮಾಡುವರು: ಸ್ಥಳೀಯರೊಬ್ಬರು ಹೇಳುವ ಪ್ರಕಾರ ವಾರದಲ್ಲಿ ಒಂದು ದಿನ ನಡೆಯುವ ಸಂತೆಯಲ್ಲಿ ಸರಿ ಸುಮಾರು ಹತ್ತು ಮಿನಿ ಟೆಂಪೋದಲ್ಲಿ ತುಂಬಿಕೊಂಡು ಹೋಗುವಷ್ಟು ಹಸು, ಎಳೆಯ ಕರು, ಎಮ್ಮೆಗಳ ಖರೀದಿ ಮಾಡಿ ಪಕ್ಕದ ರಾಜ್ಯ ತಮಿಳುನಾಡಿಗೆ ಸಾಗಣೆ ಮಾಡುತ್ತಾರೆ ಎನ್ನಲಾಗಿದೆ.

ಕುರಿಗಳಂತೆ ತುಂಬುತ್ತಾರೆ: ಸ್ಥಳೀಯರು ತಡೆದಿರುವ ಸಾಗಾಣೆ ಮಾಡುವ ವಾಹನ ನೋಡಿದ್ರೆ ಹಸು ಕರುಗಳನ್ನು ಕುರಿಯಂತೆ ತುಂಬಿರುವ ದೃಶ್ಯಗಳು ಕಂಡಬಂದಿವೆ. ಉಸಿರುಗಟ್ಟುವ ರೀತಿಯಲ್ಲಿ ಅವುಗಳು ಹಿಂಸೆ ನೀಡಿ ತುಂಬಲಾಗುತ್ತದೆ. ಪ್ರತಿ ವಾರ ಇದೇ ರೀತಿ ತುಂಬಿ ತೆಗೆದುಕೊಂಡು ಹೋಗುತ್ತಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಮೆ ಹೊಂದಿದ ರಾಸುಗಳ ಖರೀದಿ: ಪಶು ಇಲಾಖೆ ರಾಜ್ಯದ ಬಹಳಷ್ಟು ರಾಸುಗಳಿಗೆ ವಿಮೆಯ ಬಗ್ಗೆ ಜಾಗೃತಿ ವಹಿಸಿ ವಿಮೆ ಮಾಡಿಸಿದೆ. ವಾಹನಗಳಲ್ಲಿ ಅಂತಾರಾಜ್ಯಕ್ಕೆ ಸಾಗಾಣೆ ಮಾಡುವ ಬಹಳಷ್ಟು ರಾಸುಗಳಿಗೆ ಕಿವಿಯಲ್ಲಿ ವಿಮೆ ಮಾಡಿಸಿದ ಓಲೆ ಇದ್ದದ್ದು ಕಂಡು ಬಂದಿದೆ. ಪಶು ಇಲಾಖೆಯ ವೈದ್ಯರೊಬ್ಬರು ಹೇಳುವ ಪ್ರಕಾರ ಕಿವಿಯಲ್ಲಿ ರಾಸುಗಳ ಎಣಿಕೆಗೆ ಹಳದಿ ಬಣ್ಣದ ಓಲೆ ಹಾಕಲಾಗುತ್ತದೆ. ವಿಮೆ ಪ್ರತಿ ವರ್ಷ ಕಟ್ಟಬೇಕಾಗುತ್ತದೆ. ಓಲೆ ಕಿವಿಯಲ್ಲಿ ಇದೆ ಎಂದ ಮಾತ್ರಕೆ ವಿಮೆ ಹೊಂದಿದೆ ಎನ್ನಲಾಗದು.

ಸಾಕಾಣೆಕೆಗೋ ಕಾಸಾಯಿಖಾನೆಗೋ: ರೈತರು ಮೇವಿನ ತೊಂದರೆ, ಬರಗಾಲ, ರಾಸುಗಳು ಹೆಚ್ಚಿದ್ರೆ ಇವುಗಳ ತೊಂದರೆಯಿಂದ ಸಂತೆಗೆ ತಂದು ಮಾರಾಟ ಮಾಡುತ್ತಾರೆ. ಅಲ್ಲದೇ ಹಲವು ರೈತರು ಮಳೆ ಕ್ಷೀಣಿಸಿರುವುದರಿಂದ ಬೇರೆ ಕಡೆ ವಲಸೆ ಹೋಗುವುದರಿಂದ ರಾಸುಗಳ ಮಾರುತ್ತರೆ. ಕೆಲವು ದಲ್ಲಾಳಿಗಳು ಹೆಚ್ಚು ಲಾಭ ಮಾಡುವ ದೃಷ್ಟಿಯಿಂದ ಸಂತೆಯಿಂದ ಸಂತೆಗೆ ಮಾರಾಟ ಮಾಡುತ್ತಾರೆ. ಇದರಿಂದ ಅವರು ಖರೀದಿ ಮಾಡಿ ಸ್ವಲ್ಪ ದಿನ ಮೇಯಿಸಿ ಮಾರಾಟ ಮಾಡುತ್ತಾರೆ. ಅಲ್ಲದೇ ವಯಸ್ಸಾದ ರಾಸುಗಳನ್ನು ಮಾರಾಟ ನಡೆಸುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎಳೆ ಕರುಗಳನ್ನು ಖರೀದಿ ಮಾಡುತ್ತಾರೆ. ಇವುಗಳನ್ನು ಕಾಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಾರೆ. ಕೂಡಲೇ ಇಂತಹ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಮತ್ತು ಸಂತೆಯಿಂದ ಸಂತೆಗೆ ಮಾರುವರ ಮೇಲೆ ನಿಗಾವಹಿಸಬೇಕು. ಅಂತಾರಾಜ್ಯ ಮಾರಾಟಗಾರರು ರಾಸುಗಳನ್ನು ಕಾಸಾಯಿಖಾನೆಗೆ ಕಳುಹಿಸುವದನ್ನು ತಡೆಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

-----

ವಾರದಲ್ಲಿ ಒಂದು ದಿನ ಸುಮಾರು 10-15 ಮಿನಿ ಟೆಂಪೋದಲ್ಲಿ ಸಣ್ಣ ಕರುಗಳು ದೊಡ್ಡ ರಾಸುಗಳ ಮರಳವಾಡಿ ಮಾರ್ಗವಾಗಿ ತಮಿಳುನಾಡಿಗೆ ಸಾಗಾಣೆ ಮಾಡುತ್ತಾರೆ. ಕೇಳಿದ್ರೆ ಸಾಕಣೆ ಮಾಡಲು ಎಂದು ಹೇಳುತ್ತಾರೆ. ಕುರಿ ತುಂಬಿದ ಹಾಗೆ ತುಂಬಿಕೊಂಡು ಕಸಾಯಿಖಾನೆ ಹೋಗುತ್ತಾರೆ. ಪೊಲೀಸ್‌ ಇಲಾಖೆ ಇದರ ಬಗ್ಗೆ ಪರಶೀಲನೆ ಮಾಡಿ ಕ್ರಮ ಜರುಗಿಸಬೇಕು.

-ಕಿಶೋರ್‌, ಮರಳವಾಡಿ ನಿವಾಸಿ

ಸಂತೆಯಿಂದ ರಾಸುಗಳನ್ನು ಖರೀದಿ ಮಾಡಿ ರೈತರು ಸಾಕಾಣಿಕೆ ಮಾಡಲು ತೆಗೆದುಕೊಂಡು ಹೋಗುತ್ತಿಲ್ಲ. ಕಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆಂದು ತಿಳಿದು ಬಂದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು.

-ಧರ್ಮೇಗೌಡ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹಾರೋಹಳ್ಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ