ಆ್ಯಪ್ನಗರ

ಎಚ್‌ಡಿ ಕುಮಾರಸ್ವಾಮಿಗೆ ಯೋಗೇಶ್ವರ್‌ ಪಂಚಪ್ರಶ್ನೆ

ಖಾಸಗಿ ಬಸ್‌ನಿಲ್ದಾಣ ಯಾಕೆ ಪೂರ್ಣಗೊಳಿಸಿಲ್ಲ?, ಸ್ತ್ರೀಶಕ್ತಿ ಸಂಘದ ಸಾಲಮನ್ನಾ ಆಗಿದೆಯೇ?, ಮಹದೇಶ್ವರ ದೇವಾಲಯ ಉದ್ಘಾಟನೆ ಆಯ್ತಾ?, ಆನೆ ಹಾವಳಿಗೆ ಮುಕ್ತಿ ದೊರಕಿಸಿದಿರಾ..? ಮೂಲ ಸೌಕರ್ಯವನ್ನು ಎಲ್ಲರಿಗೂ ತಲುಪಿಸಿದಿರಾ..?

Vijaya Karnataka Web 10 May 2022, 10:10 pm
ಚನ್ನಪಟ್ಟಣ: ತಾಲೂಕಿನ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕರಾಗಿರುವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪಂಚಪ್ರಶ್ನೆಗಳನ್ನು ಕೇಳುವ ಮೂಲಕ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಟಾಂಗ್‌ ನೀಡಿದ್ದಾರೆ.
Vijaya Karnataka Web ಸಿಪಿ ಯೋಗೇಶ್ವರ್‌
ಸಿಪಿ ಯೋಗೇಶ್ವರ್‌


ಚನ್ನಪಟ್ಟಣ ತಾಲೂಕಿನ ಬಿ.ವಿ.ಪಾಳ್ಯ ಗ್ರಾಮದಲ್ಲಿಹಮ್ಮಿಕೊಂಡಿದ್ದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರ ಬಿಜೆಪಿ ಸೇರ್ಪಡೆ ಕಾರ‍್ಯಕ್ರಮದಲ್ಲಿ ವಿಪಕ್ಷದ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿದ್ದಾರಾ ಎಂದು 5 ಪ್ರಶ್ನೆಗಳು ಕೇಳಿದ್ದಾರೆ.

ಅವರ ಕರ್ಮಕಾಂಡಕ್ಕೆ ಪರ್ಮನೆಂಟ್‌ ಜಾಗ ತಿಹಾರ್‌ ಜೈಲು: ಡಿಕೆ ಶಿವಕುಮಾರ್‌ಗೆ ಅಶ್ವತ್ಥ್‌ ನಾರಾಯಣ ತಿರುಗೇಟು

ಪಂಚಪ್ರಶ್ನೆಗಳು

ಖಾಸಗಿ ಬಸ್‌ನಿಲ್ದಾಣ ಯಾಕೆ ಪೂರ್ಣಗೊಳಿಸಿಲ್ಲ?, ಸ್ತ್ರೀಶಕ್ತಿ ಸಂಘದ ಸಾಲಮನ್ನಾ ಆಗಿದೆಯೇ?, ಮಹದೇಶ್ವರ ದೇವಾಲಯ ಉದ್ಘಾಟನೆ ಆಯ್ತಾ?, ಆನೆ ಹಾವಳಿಗೆ ಮುಕ್ತಿ ದೊರಕಿಸಿದಿರಾ..? ಮೂಲ ಸೌಕರ್ಯವನ್ನು ಎಲ್ಲರಿಗೂ ತಲುಪಿಸಿದಿರಾ..? ಇವು ಕುಮಾರಸ್ವಾಮಿ ಅವರಿಗೆ ಯೋಗೇಶ್ವರ್‌ ಕೇಳಿರುವ ಪಂಚಪ್ರಶ್ನೆಗಳು.

ಬಿರುಗಾಳಿಯಂತೆ ಬಂದರು: ಬಿರುಗಾಳಿ ಬಂದು ಎಲ್ಲವನ್ನೂ ನಾಶ ಮಾಡುವಂತೆ ಕುಮಾರಸ್ವಾಮಿ ಅವರು ತಾಲೂಕಿಗೆ ಬಂದರು. ಬಂದವರು ಯಾವುದೇ ಅಭಿವೃದ್ಧಿ ಕಾರ‍್ಯವನ್ನು ಮಾಡಲಿಲ್ಲ. ಜನಸಾಮಾನ್ಯರು ಮತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ತಾಲೂಕನ್ನು ಸಮಸ್ಯೆಯ ಕೂಪ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲಗೊಂಡಿದ್ದಾರೆ ಎಂದು ಲೇವಡಿ ಮಾಡಿದರು.


ಜನರನ್ನು ಕೇವಲವಾಗಿ ಕಾಣುತ್ತಾರೆ: ನಾನು ಮಾಜಿ ಪ್ರಧಾನಿ ಮಗ ಎಂದು ಕುಮಾರಸ್ವಾಮಿ ಅವರು ತಾಲೂಕಿನ ಜನರನ್ನು ಗುಲಾಮರಂತೆ ಕಾಣುತ್ತಾರೆ. ನಮ್ಮ ತಾಲೂಕಿನ ಜನತೆ ಗುಲಾಮಗಿರಿಗೆ ಬಗ್ಗುವವರಲ್ಲ, ಈ ತಾಲೂಕಿನ ಜನತೆ ಸ್ವಾಭಿಮಾನಿಗಳು, ಪ್ರೀತಿ ವಿಶ್ವಾಸಕ್ಕೆ ಮಾತ್ರ ತಲೆಬಾಗುತ್ತಾರೆ ಎಂಬುದನ್ನು ಕುಮಾರಸ್ವಾಮಿ ಅರಿತುಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಮಹದೇಶ್ವರ ದೇವಾಲಯ ಉದ್ಘಾಟಿಸುತ್ತೇನೆ: ಮಹದೇಶ್ವರ ದೇವಾಲಯಕ್ಕೆ ಕುಮಾರಸ್ವಾಮಿ ಅವರ ಕೊಡುಗೆ ಏನೂ ಇಲ್ಲ. ಅವರು ನೂರು ರೂಪಾಯಿಯನ್ನೂ ಬಿಡುಗಡೆ ಮಾಡಿಸಿಲ್ಲ. ತಾಲೂಕಿನ ದೇವಾಲಯಗಳಿಗೆ 2 ಕೋಟಿ ರೂ. ಹಣವನ್ನು ಸಿಎಂ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಮಹದೇಶ್ವರ ದೇವಾಲಯಕ್ಕೆ ಒಂದು ಕೋಟಿ ರೂ. ತಾಲೂಕಿನ ಹತ್ತು ದೇವಾಲಯಗಳಿಗೆ ತಲಾ 10 ಲಕ್ಷ ರೂ. ಹಣನ್ನು ಬಿಡುಗಡೆ ಮಾಡಲಾಗಿದೆ. ಮಹದೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ‍್ಯವನ್ನು ಪೂರ್ಣಗೊಳಿಸಿ. ಉದ್ಘಾಟನೆ ಗೊಳಿಸಿ ಮುಂಬರುವ ಚುನಾವಣೇ ಎದುರಿಸುತ್ತೇನೆ ಎಂದು ತಿಳಿಸಿದರು.

ರಮೇಶ್ ಜಾರಕಿಹೊಳಿ, ಈಶ್ವರಪ್ಪ ಬಳಿಕ ಡಿಕೆಶಿಯ ಮುಂದಿನ ಟಾರ್ಗೆಟ್‌ ಅಶ್ವತ್ಥ್‌ ನಾರಾಯಣ್?

ಹಳ್ಳಿ ರಸ್ತೆಗೆ 50 ಕೋಟಿ ರೂ.: ತಾಲೂಕಿನ ಹಳ್ಳಿಗಳ ರಸ್ತೆ ಅಭಿವೃದ್ದಿಗಾಗಿ ನನ್ನ ಕೋರಿಕೆಯಂತೆ ಮಾನ್ಯ ಮುಖ್ಯಮಂತ್ರಿಗಳು ತಾಲೂಕಿಗೆ 50 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಈ ಅನುದಾನವನ್ನು ಬಿಡುಗಡೆ ಮಾಡದಂತೆ ಕುಮಾರಸ್ವಾಮಿ ಇನ್ನಿಲ್ಲದ ತೊಂದರೆ, ಅಡ್ಡಿ ಮಾಡಿದರು. ಆದರೂ ಪಟ್ಟು ಬಿಡದೇ ಪ್ರಯತ್ನ ಮಾಡಿದ ಫಲವಾಗಿ ಅನುದಾನ ಬಿಡುಗಡೆ ಆಗಿದೆ. ಮುಂದಿನ ದಿನಗಳಲ್ಲಿರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಯೋಗೇಶ್ವರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ