ಆ್ಯಪ್ನಗರ

ಕೆಂಪಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಾಧನೆ

ರೈತರು ಮನಸು ಮಾಡಿದರೆ ಸರಕಾರವೇ ನಾಚುವಂತ ಕೆಲಸಮಾಡಬಹುದು ಎಂಬುದಕ್ಕೆ ಸೋಲೂರು ಹೋಬಳಿ ಕೆಂಪಚಿಕ್ಕನಹಳ್ಳಿ ಹೈನುಗಾರಿಕೆ ನಂಬಿಕೊಂಡ ಕುಟುಂಬಗಳೇ ಸಾಕ್ಷಿಯಾಗಿದೆ.

Vijaya Karnataka 16 Mar 2019, 5:00 am
ಮಾಗಡಿ ಗ್ರಾಮಾಂತರ: ರೈತರು ಮನಸು ಮಾಡಿದರೆ ಸರಕಾರವೇ ನಾಚುವಂತ ಕೆಲಸಮಾಡಬಹುದು ಎಂಬುದಕ್ಕೆ ಸೋಲೂರು ಹೋಬಳಿ ಕೆಂಪಚಿಕ್ಕನಹಳ್ಳಿ ಹೈನುಗಾರಿಕೆ ನಂಬಿಕೊಂಡ ಕುಟುಂಬಗಳೇ ಸಾಕ್ಷಿಯಾಗಿದೆ.
Vijaya Karnataka Web creamy bean milk producers performance
ಕೆಂಪಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಾಧನೆ


ಹೈನುಗಾರಿಕೆಯಿಂದ ಬಂದ ಆದಾಯದ ಹಣ ಶೇಖರಿಸಿ ರೈತರೇ ಮುಂದೆ ನಿಂತು ತಮ್ಮ ಊರಿನಲ್ಲಿ ಸಮುದಾಯ ಭವನವನ್ನು ಕಟ್ಟಿ ಗುರುವಾರ ಲೋಕಾರ್ಪಣೆ ಮಾಡಿದ್ದಾರೆ.

ಸೋಲೂರು ಹೋಬಳಿ ಲಕ್ಕೇನಹಳ್ಳಿ ಗ್ರಾಮಪಂಚಾಯಿತಿಗೆ ಸೇರಿದ ಕೆಂಪಚಿಕ್ಕನಹಳ್ಳಿ ಬಹುಪಾಲು ಹೈನುಗಾರಿಕೆಯ ನಂಬಿಕುಳಿತ ಸಮುದಾಯದ ಹಾಲು ಉತ್ಪಾದಕರು. ಅಲ್ಲಿನ 13.30 ಲಕ್ಷ ವೆಚ್ಚದ ಕಟ್ಟಡದ ಉದ್ಘಾಟನೆ ಮಾಡಿ ಇತರ ಹಾಲು ಉತ್ಪಾದ ಸಂಘಗಳಿಗೆ ಮಾದರಿಯಾಗಿದ್ದಾರೆ.

ಗ್ರಾಮದಲ್ಲಿ 50 ಮನೆಗಳಿವೆ. 53 ಸದಸ್ಯರಿಂದ ನಿತ್ಯ 950 ರಿಂದ 1000 ಲೀಟರ್‌ ಹಾಲು ಉತ್ಪಾದನೆಯಿದೆ.ತಿಂಗಳಿಗೆ ಏಳೂವರೆಯಿಂದ ಎಂಟುಲಕ್ಷ ಮೌಲ್ಯದ ವಹಿವಾಟು ನಡೆಯುತ್ತದೆ. ಲಾಭದಾಯಕ ಹಾಲು ಉತ್ಪಾದನೆ ಮಾಡುವ ಸಂಘದ ಕಟ್ಟಡ ಉತ್ತಮವಾಗಿದೆ ಈಗ ಸಮುದಾಯ ಭವನದ ಖ್ಯಾತಿಯ ಗರಿಮೆಯೂ ಬಂದಿದೆ.

ಇದೇ ಸಮಯದಲ್ಲಿ ಮಾತನಾಡಿದ ಹಿರಿಯ ಜಿ.ಕಾಂತರಾಜು ಪ್ರತಿಕ್ರಿಯಿಸಿ, ''ನಮ್ಮ ಗ್ರಾಮದ ಹಾಲು ಉತ್ಪಾದಕರ ಸಂಘ ಬಹುಪಾಲು ಆದಾಯದಲ್ಲಿದೆ. ಇಲ್ಲಿನ ಜನರ ಬೆವರ ಶ್ರಮಕ್ಕೆ ಪ್ರತಿಫಲವೂ ದೊರೆತಿದೆ,'' ಎಂದರು.

ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷೆ ಶೋಭಾನರಸಿಂಹಯ್ಯ ಮಾತನಾಡಿ, ''ನಮ್ಮೂರು ನಮಗೆ ಅಂದ ನಮ್ಮೂರ ಹಸುಗಳ ಹಾಲು ಪರ ಊರಿಗೆ ಚೆಂದ'' ಎಂದು ಕಾವ್ಯಮಯವಾಗಿ ಹಾಲು ಉತ್ಪಾದಕರನ್ನು ಹಾಡಿಹೊಗಳಿದರು. ಈ ಸಂದರ್ಭದಲ್ಲಿ ಮಾಜಿ ಪಿಡಿಒ ಚಂದ್ರ ಶೇಖರಯ್ಯ,ಸಂಘದ ಅಧ್ಯಕ್ಷ ನಂಜುಂಡಯ್ಯ,ಚಿಕ್ಕಣ್ಣ, ಅಶ್ವತ್ಥನಾರಾಯಣ, ಕಾರ್ಯದರ್ಶಿ ಕೆ.ಎನ್‌.ನಾಗರಾಜು, ಲೋಕೇಶ್‌, ನಾಗರಾಜು, ಸುಚಿಕರ್‌, ಗೌರಮ್ಮ, ಗಂಗಮ್ಮ, ಸುರೇಶ್‌, ಶಿವಕುಮಾರ್‌ ಹಾಗೂ ಕೆಂಪಚಿಕ್ಕನಹಳಿ ರೈತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ