ಆ್ಯಪ್ನಗರ

ಸರಕಾರಿ ಶಾಲೆಗಳಿಂದ ಪ್ರತಿಭಾವಂತರ ಸೃಷ್ಟಿ

ಸರಕಾರಿ ಶಾಲೆಗಳು ಪ್ರತಿಭಾವಂತರನ್ನು ತಯಾರು ಮಾಡುವ ಕಾರ್ಖಾನೆಗಳಿದ್ದಂತೆ ಎಂದು ಡಿವೈಎಸ್ಪಿ ಮಲ್ಲೇಶ್‌ ತಿಳಿಸಿದರು.

Vijaya Karnataka 20 Jan 2019, 5:00 am
ಚನ್ನಪಟ್ಟಣ: ಸರಕಾರಿ ಶಾಲೆಗಳು ಪ್ರತಿಭಾವಂತರನ್ನು ತಯಾರು ಮಾಡುವ ಕಾರ್ಖಾನೆಗಳಿದ್ದಂತೆ ಎಂದು ಡಿವೈಎಸ್ಪಿ ಮಲ್ಲೇಶ್‌ ತಿಳಿಸಿದರು.
Vijaya Karnataka Web creating talent from government schools
ಸರಕಾರಿ ಶಾಲೆಗಳಿಂದ ಪ್ರತಿಭಾವಂತರ ಸೃಷ್ಟಿ


ಪಟ್ಟಣದ ಸಾತನೂರು ಸರ್ಕಲ್‌ನಲ್ಲಿರುವ ಉರ್ದು ಡೈರಾ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಸಾಮಾರ್ಥ್ಯ‌ ಕಾರ್ಯಾಗಾರದಲ್ಲಿ ಮಾತನಾಡಿ, ''ದೇಶದ ಪ್ರತಿಷ್ಠಿತ ಐಎಎಸ್‌, ಐಪಿಎಸ್‌ ಹಾಗೂ ಉನ್ನತ ಮಟ್ಟದ ಆಧಿಕಾರಿಗಳಲ್ಲಿ ಬಹುಪಾಲು ಮಂದಿ ಅಧಿಕಾರಿಗಳು ಸರಕಾರಿ ಶಾಲಾ ಕಾರ್ಖಾನೆಯಿಂದ ನಿರ್ಮಾಣವಾದ ಪ್ರತಿಭಾವಂತರು ಎಂಬುದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಶಾಲೆಯ ಎಲ್ಲ ವಿದ್ಯಾರ್ಥಿಗಳು ಶ್ರಮಪಟ್ಟು ಓದಿ ಈ ಭಾರಿಯ ಹತ್ತನೇ ತರಗತಿ ಉತ್ತಮ ಫಲಿತಾಂಶ ತರಬೇಕು,'' ತಿಳಿಸಿದರು.

''ಸರಕಾರಿ ಶಾಲೆ ಎಂದು ಕೀಳಿರಿಮೆ ಬೇಡ ತಾನು ಕೂಡ ಮದ್ದೂರು ತಾಲೂಕಿನ ಕುಗ್ರಾಮ ತೈಲೂರಿನ ರೈತ ಮಗನಾಗಿ ಜನಿಸಿದೆ. ನನ್ನೂರಿನ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಸೋಮನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ನಂತರ ಕಾಲೇಜು ವಿದ್ಯಾಭ್ಯಾಸವನ್ನು ಸರಕಾರಿ ಕಾಲೇಜಿನಲ್ಲಿ ಮುಂದುವರಿಸಿ, ಈ ಮಟ್ಟಕ್ಕೆ ತಲುಪಿದ್ದೇನೆ. ಕೇವಲ ವಿದ್ಯಾಭ್ಯಾಸ ಮಾಡುತ್ತೇವೆ ಎಂದು ಪುಸ್ತಕ ಹಿಡಿದರೆ ಸಾಲದು ಪುಸ್ತಕದಲ್ಲಿರುವ ಪ್ರತಿಯೊಂದು ಸಾಲುಗಳು ತಮ್ಮ ನೆನಪಿನ ಬುತ್ತಿಯಾಗಿರುವ ಮೆದುಳಿನಲ್ಲಿ ಸೇರಿಕೊಂಡಾಗ ಮಾತ್ರ ಯಾವುದೇ ಪರೀಕ್ಷೆಯಲ್ಲಿ ಗುಣಮಟ್ಟದ ಫಲಿತಾಂಶ ಪಡೆಯಲು ಸಾಧ್ಯ,'' ಎಂದರು.

''ಸರಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ. ತೋರಿಕೆಗೆ ವಿದ್ಯಾಭ್ಯಾಸ ಮಾಡಬಾರದು ಏಕಾಗ್ರತೆ, ಶ್ರದ್ಧೆ, ಪರಿಶ್ರಮದ ಮುಖಾಂತರ ವಿದ್ಯಾಭ್ಯಾಸ ಮಾಡಿ ಶಿಕ್ಷ ಣ ಕ್ಷೇತ್ರದಲ್ಲಿ ಸಾಧನೆ ಮಾಡಿ,'' ಎಂದ ಅವರು, ಸರಕಾರಿ ಶಾಲಾ, ಕಾಲೇಜುಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಶಾಲೆಯ ಶಿಕ್ಷ ಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ