ಕನಕಪುರ: ಭಾರತದಲ್ಲಿ ದಲಿತ ವರ್ಗ ಬದಲಾವಣೆಯ ಹಾದಿಯಲ್ಲಿ ಸಾಗುತ್ತಿದ್ದು, ಚಿಂತನಾಕ್ರಮ, ವೈಚಾರಿಕತೆಯಲ್ಲಿ, ಮಾನಸಿಕವಾಗಿ ಬದಲಾವಣೆ ಬಯಸಿದ್ದು, ದಲಿತರು ದೇಶದ ಪ್ರಬಲ ಶಕ್ತಿಯಾಗುವ ಕಾಲ ಸನ್ನಿಹಿತವಾಗಿದೆ. ಅದಕ್ಕೆ ನಮಗೆಲ್ಲ ಹೆಮ್ಮೆ ಎನಿಸುತ್ತಿದೆ ಎಂದು ಖ್ಯಾತ ಕವಿ ಸಿದ್ದಲಿಂಗಯ್ಯ ಹೇಳಿದರು.
ಕನಕಪುರ ನಗರದ ಎಕ್ಸ್ಮುನ್ಸಿಪಲ್ ಶಾಲಾ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿಯಿಂದ ಆಚರಿಸಲಾದ 128 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೋರಾಟದ ಹಾದಿ: ''ದೇಶದಾದ್ಯಂತ ಮಲಗಿದ್ದ ದಲಿತರು ಇಂದು ಎದ್ದು ನಿಂತಿದ್ದಾರೆ. ಹೋರಾಟಕ್ಕೆ ಅಣಿಯಾಗಿದ್ದಾರೆ. ಘೋಷಣೆ ಕೂಗುತ್ತಿದ್ದಾರೆ, ಅವರು ಕುರಿ, ಕೋಳಿ, ಹೆಂಡ, ಬಟ್ಟೆ ಬರೆ ಬೇಡುವ ಮಾರಮ್ಮದೇವಿಯನ್ನು ಬಿಟ್ಟಿದ್ದಾರೆ. ನಾವು ಪೂಜೆ ಮಾಡುವ ಮಾರಮ್ಮ ದೇವಿಗೆ ನಮಗೇನು ಕೊಡಲು ಶಕ್ತಿ ಇಲ್ಲ. ಎಲ್ಲವನ್ನು ನಮ್ಮಿಂದ ಬೇಡಿ ಪಡೆಯುತ್ತಿದ್ದಾಳೆ. ನಮಗೇನು ನೀಡಲು ಅವಳ ಕೈಯಿಂದ ಸಾಧ್ಯವಿಲ್ಲ ಎಂಬುದನ್ನು ಅರಿತು ಇಂದು ಹೋರಾಟ ಮೂಲಕ ಪಡೆಯಲು ಸನ್ನದ್ಧರಾಗಿದ್ದಾರೆ,'' ಎಂದರು.
''ಮಾರಮ್ಮ ದೇವಿಯಿಂದ ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಕ್ಕೆ ಬದಲಾಗಿದ್ದು, ಶಿಕ್ಷ ಣ ಮತ್ತು ಹೋರಾಟದ ಮೂಲಕವೇ ನನ್ನ ಜನರನ್ನು ಬದಲಾಯಿಸಲು ಸಾಧ್ಯ ಎಂಬ ತತ್ವನ್ನು ಮನಗಂಡು ದಲಿತ ಶಕ್ತಿ ಹೊಸ ಹುರುಪಿನಿಂದ ಮುನ್ನಡೆಯುತ್ತಿದೆ,'' ಎಂದರು.
''ಅಂಬೇಡ್ಕರ್ ಅವರು ತಮ್ಮ ಬದುಕಿನ ಸಮಯಕ್ಕಿಂತ ಅವರ ಪರಿನಿಬ್ಬಾಣವಾದ ನಂತರವೇ ದೇಶದಲ್ಲಿ ಅವರ ಶಕ್ತಿಯ ಅನಾವರಣಗೊಂಡಿದ್ದು, ಅವರು ಬದುಕಿದ್ದಾಗ ಸಾಧ್ಯವಾಗದ್ದು ಅವರು ಇಹಲೋಕ ತ್ಯಜಿಸಿದ ನಂತರ ಅವರ ಅನಿವಾರ್ಯತೆಯನ್ನು ಮನಗಂಡು ಅವರ ಶಕ್ತಿ ಎಂತಹದ್ದು ಎಂಬುದರ ಅರಿವು ದೇಶಕ್ಕೆ ಅರಿಯಲು ಸಾಧ್ಯವಾಯಿತು. ಅವರು ಬದುಕಿದ್ದಾಗ ಅವರನ್ನು ಯಾರು ವಿರೋಧ ಮಾಡಿದರೂ ಅವರೇ ಇಂದು ಪ್ರಶಂಸಿಸುತ್ತಿದ್ದಾರೆ. ಅವರ ವಿಚಾರಧಾರೆಗಳನ್ನು ಇಂದು ಎಲ್ಲರು ಅಳವಡಿಸಿಕೊಳ್ಳುತ್ತಿದ್ದಾರೆ,'' ಎಂದರು.
''ಅಮರ್ಥ್ಯಸೇನ್ ಅವರು ಜಗತ್ತಿನ ಪ್ರಖ್ಯಾತ ಅರ್ಥಶಾಸ್ತ್ರಜ್ಞರು ಅವರು ದಲಿತೇತರರು ಅವರ ನೊಬೆಲ್ ಪ್ರಶಸ್ತಿಗೆ ಯಾರು ಪ್ರೇರಣೆಯಾಗಿದ್ದಾರೆ ಎಂಬ ಪ್ರಶ್ನೆಗೆ ಅಂಬೇಡ್ಕರ್ ಎಂದು ಉತ್ತರಿಸಿದ್ದರು. ಅವರ ಅರ್ಥಶಾಸ್ತ್ರದಲ್ಲಿ ಪಾರಂಗ್ಯತಕ್ಕೆ ಅಂಬೇಡ್ಕರ್ ಅವರು ತಂದೆಯಾಗಿದ್ದರು ಎನ್ನುವ ಮಾತು ಹೇಳಲು ಅವರು ಮರೆಯಲಿಲ್ಲ. ಒಬ್ಬ ನೋಬೆಲ್ ಪುರಸ್ಕೃತರು ಇಂತಹ ಮಾತು ಹೇಳಬೇಕಾದರೆ ಅವರ ಎಂತಹ ಮಹಾತ್ಮಜ್ಞಾನಿಯಾಗಿರಬೇಕು,'' ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವಿವಿದೊದ್ದೇಶ ಸಹಕಾರ ಸಂಘದ ಸ್ಥಾಪನೆಗೆ ಚಾಲನೆ ನೀಡಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಐಪಿಎಸ್ ಅಧಿಕಾರಿ ನಂಜುಂಡಸ್ವಾಮಿ, ಬೆಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗದ ಕುಲಪತಿ ಶಿವರಾಜು ಮಾತನಾಡಿದರು.
ಕನಕಪುರ ನಗರದ ಎಕ್ಸ್ಮುನ್ಸಿಪಲ್ ಶಾಲಾ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿಯಿಂದ ಆಚರಿಸಲಾದ 128 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೋರಾಟದ ಹಾದಿ: ''ದೇಶದಾದ್ಯಂತ ಮಲಗಿದ್ದ ದಲಿತರು ಇಂದು ಎದ್ದು ನಿಂತಿದ್ದಾರೆ. ಹೋರಾಟಕ್ಕೆ ಅಣಿಯಾಗಿದ್ದಾರೆ. ಘೋಷಣೆ ಕೂಗುತ್ತಿದ್ದಾರೆ, ಅವರು ಕುರಿ, ಕೋಳಿ, ಹೆಂಡ, ಬಟ್ಟೆ ಬರೆ ಬೇಡುವ ಮಾರಮ್ಮದೇವಿಯನ್ನು ಬಿಟ್ಟಿದ್ದಾರೆ. ನಾವು ಪೂಜೆ ಮಾಡುವ ಮಾರಮ್ಮ ದೇವಿಗೆ ನಮಗೇನು ಕೊಡಲು ಶಕ್ತಿ ಇಲ್ಲ. ಎಲ್ಲವನ್ನು ನಮ್ಮಿಂದ ಬೇಡಿ ಪಡೆಯುತ್ತಿದ್ದಾಳೆ. ನಮಗೇನು ನೀಡಲು ಅವಳ ಕೈಯಿಂದ ಸಾಧ್ಯವಿಲ್ಲ ಎಂಬುದನ್ನು ಅರಿತು ಇಂದು ಹೋರಾಟ ಮೂಲಕ ಪಡೆಯಲು ಸನ್ನದ್ಧರಾಗಿದ್ದಾರೆ,'' ಎಂದರು.
''ಮಾರಮ್ಮ ದೇವಿಯಿಂದ ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಕ್ಕೆ ಬದಲಾಗಿದ್ದು, ಶಿಕ್ಷ ಣ ಮತ್ತು ಹೋರಾಟದ ಮೂಲಕವೇ ನನ್ನ ಜನರನ್ನು ಬದಲಾಯಿಸಲು ಸಾಧ್ಯ ಎಂಬ ತತ್ವನ್ನು ಮನಗಂಡು ದಲಿತ ಶಕ್ತಿ ಹೊಸ ಹುರುಪಿನಿಂದ ಮುನ್ನಡೆಯುತ್ತಿದೆ,'' ಎಂದರು.
''ಅಂಬೇಡ್ಕರ್ ಅವರು ತಮ್ಮ ಬದುಕಿನ ಸಮಯಕ್ಕಿಂತ ಅವರ ಪರಿನಿಬ್ಬಾಣವಾದ ನಂತರವೇ ದೇಶದಲ್ಲಿ ಅವರ ಶಕ್ತಿಯ ಅನಾವರಣಗೊಂಡಿದ್ದು, ಅವರು ಬದುಕಿದ್ದಾಗ ಸಾಧ್ಯವಾಗದ್ದು ಅವರು ಇಹಲೋಕ ತ್ಯಜಿಸಿದ ನಂತರ ಅವರ ಅನಿವಾರ್ಯತೆಯನ್ನು ಮನಗಂಡು ಅವರ ಶಕ್ತಿ ಎಂತಹದ್ದು ಎಂಬುದರ ಅರಿವು ದೇಶಕ್ಕೆ ಅರಿಯಲು ಸಾಧ್ಯವಾಯಿತು. ಅವರು ಬದುಕಿದ್ದಾಗ ಅವರನ್ನು ಯಾರು ವಿರೋಧ ಮಾಡಿದರೂ ಅವರೇ ಇಂದು ಪ್ರಶಂಸಿಸುತ್ತಿದ್ದಾರೆ. ಅವರ ವಿಚಾರಧಾರೆಗಳನ್ನು ಇಂದು ಎಲ್ಲರು ಅಳವಡಿಸಿಕೊಳ್ಳುತ್ತಿದ್ದಾರೆ,'' ಎಂದರು.
''ಅಮರ್ಥ್ಯಸೇನ್ ಅವರು ಜಗತ್ತಿನ ಪ್ರಖ್ಯಾತ ಅರ್ಥಶಾಸ್ತ್ರಜ್ಞರು ಅವರು ದಲಿತೇತರರು ಅವರ ನೊಬೆಲ್ ಪ್ರಶಸ್ತಿಗೆ ಯಾರು ಪ್ರೇರಣೆಯಾಗಿದ್ದಾರೆ ಎಂಬ ಪ್ರಶ್ನೆಗೆ ಅಂಬೇಡ್ಕರ್ ಎಂದು ಉತ್ತರಿಸಿದ್ದರು. ಅವರ ಅರ್ಥಶಾಸ್ತ್ರದಲ್ಲಿ ಪಾರಂಗ್ಯತಕ್ಕೆ ಅಂಬೇಡ್ಕರ್ ಅವರು ತಂದೆಯಾಗಿದ್ದರು ಎನ್ನುವ ಮಾತು ಹೇಳಲು ಅವರು ಮರೆಯಲಿಲ್ಲ. ಒಬ್ಬ ನೋಬೆಲ್ ಪುರಸ್ಕೃತರು ಇಂತಹ ಮಾತು ಹೇಳಬೇಕಾದರೆ ಅವರ ಎಂತಹ ಮಹಾತ್ಮಜ್ಞಾನಿಯಾಗಿರಬೇಕು,'' ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವಿವಿದೊದ್ದೇಶ ಸಹಕಾರ ಸಂಘದ ಸ್ಥಾಪನೆಗೆ ಚಾಲನೆ ನೀಡಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಐಪಿಎಸ್ ಅಧಿಕಾರಿ ನಂಜುಂಡಸ್ವಾಮಿ, ಬೆಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗದ ಕುಲಪತಿ ಶಿವರಾಜು ಮಾತನಾಡಿದರು.