ಆ್ಯಪ್ನಗರ

ಕಾಡಿನಲ್ಲಿ ಜನಿಸಿದ ಆನೆ ಮರಿ ಸಾವು

ಕಾಡಿನಲ್ಲಿ ಜನಿಸಿದ ಆನೆಮರಿಯೊಂದು ಸ್ವಲ್ಪ ಹೊತ್ತಿನ ನಂತರ ಮರಣ ಹೊಂದಿರುವ ಘಟನೆ ಕೋಡಿಹಳ್ಳಿ ಹೋಬಳಿ ಮುಗ್ಗೂರು ಕಾವೇರಿ ವನ್ಯಜೀವಿ ವಲಯದ ಬೆಣ್ಣೆಕೆರೆ ಸಮೀಪ ಸಂಭವಿಸಿದೆ...

Vijaya Karnataka 5 Jul 2019, 5:00 am
ಹಾರೋಹಳ್ಳಿ (ಕನಕಪುರ ತಾ.): ಕಾಡಿನಲ್ಲಿ ಜನಿಸಿದ ಆನೆಮರಿಯೊಂದು ಸ್ವಲ್ಪ ಹೊತ್ತಿನ ನಂತರ ಮರಣ ಹೊಂದಿರುವ ಘಟನೆ ಕೋಡಿಹಳ್ಳಿ ಹೋಬಳಿ ಮುಗ್ಗೂರು ಕಾವೇರಿ ವನ್ಯಜೀವಿ ವಲಯದ ಬೆಣ್ಣೆಕೆರೆ ಸಮೀಪ ಸಂಭವಿಸಿದೆ.
Vijaya Karnataka Web death of a baby elephant born in the wild
ಕಾಡಿನಲ್ಲಿ ಜನಿಸಿದ ಆನೆ ಮರಿ ಸಾವು


ಕಾಡಂಚಿನ ಸಮೀಪವಿರುವ ಮುಗ್ಗೂರು ಗ್ರಾಮದ ರೈತರ ಜಮೀನೊಂದರಲ್ಲಿ ಕಳೆದ ಎರಡು ದಿನಗಳ ಹಿಂದೆ ಆನೆಗಳು ದಾಳಿ ನಡೆಸಿ ಬೆಳೆಯನ್ನು ನಾಶಪಡಿಸಿದ್ದವು. ಅದೇ ಸ್ಥಳದಲ್ಲಿ ಆನೆಪ್ರಸವದಲ್ಲಿ ಜನಿಸಿದ ಮರಿ ಆನೆಯೊಂದು ಸ್ಥಳದಲ್ಲೇ ಸಾವನ್ನಪ್ಪಿ ಬಿದ್ದಿರುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿದ ಸಹಾಯಕ ಉಪ ಅರಣ್ಯ ಸಂರಕ್ಷ ಣಾಧಿಕಾರಿ ರಾಜು, ವಲಯ ಅರಣ್ಯಾಧಿಕಾರಿ ವಿಜಯ್‌, ಡಿ.ಆರ್‌.ಎಫ್‌.ಒ. ರಾಜೇಶ್‌ ಮತ್ತವರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಉಯ್ಯಂಬಳ್ಳಿ ಪಶು ವೈದ್ಯಾಧಿಕಾರಿ ಡಾ. ಗಿರೀಶ್‌ ಸಾವನ್ನಪ್ಪಿರುವ ಮರಿ ಆನೆಯ ಶವವನ್ನು ಪರಿಶೀಲನೆ ನಡೆಸಿ ಜನನವಾದ ಒಂದೆರಡು ಗಂಟೆಗಳ ನಂತರ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ತಾಯಿಗರ್ಭದಲ್ಲೇ ಮರಿಯೂ ಹೊಕ್ಕಳು ಬಳ್ಳಿಯ ಸಂಬಂಧವು ಕಡಿತಗೊಂಡಿರುವ ಕಾರಣ ನಿತ್ರಾಣವಾಗಿ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ