ಆ್ಯಪ್ನಗರ

‘ಜೆಡಿಎಸ್ ಪಕ್ಷ ಬಿಡಲು ತೀರ್ಮಾನಿಸಿದ್ದೇನೆ’ ಎಂದ ಶಾಸಕ ಪುಟ್ಟಣ್ಣ

ನಾನು ಜೆಡಿಎಸ್ ಪಕ್ಷವನ್ನು ಬಿಡಲು ತೀರ್ಮಾನಿಸಿದ್ದೇನೆ. ಆದರೆ ಮುಂದಿನ ದಿನಗಳಲ್ಲಿ ಅದನ್ನು ಪ್ರಕಟ ಮಾಡುತ್ತೇನೆ ಎಂಬುದಾಗಿ ಹಾಲಿ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ರಾಮನಗರದಲ್ಲಿ ಹೇಳಿದ್ದಾರೆ.

Vijaya Karnataka Web 30 Oct 2019, 3:42 pm
ರಾಮನಗರ: ಆಪರೇಷನ್‌ ಕಮಲಕ್ಕೆ ಮೂವರು ಶಾಸಕರು ಬಲಿಯಾದ ನಂತರ ಇದೀಗ ಮತ್ತೊಂದಿಷ್ಟು ಶಾಸಕರು ಜೆಡಿಎಸ್‌ ಪಕ್ಷವನ್ನು ತೊರೆಯುವ ತೀರ್ಮಾನಕ್ಕೆ ಬಂದಿದ್ದಾರೆ.
Vijaya Karnataka Web MLCPuttanna


ನಾನು ಜೆಡಿಎಸ್ ಪಕ್ಷವನ್ನು ಬಿಡಲು ತೀರ್ಮಾನಿಸಿದ್ದೇನೆ. ಆದರೆ ಮುಂದಿನ ದಿನಗಳಲ್ಲಿ ಅದನ್ನು ಪ್ರಕಟ ಮಾಡುತ್ತೇನೆ ಎಂಬುದಾಗಿ ಹಾಲಿ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಹೇಳಿದ್ದಾರೆ. 2017ರಿಂದಲೇ ಅವರು ಜೆಡಿಎಸ್‌ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಮೇಲಿಂದ ಮೇಲೆ ಕೇಳಿ ಬರುತ್ತಲೇ ಇವೆ. ಇದೀಗ ಅವರೇ ತಾವು ಜೆಡಿಎಸ್‌ ತೊರೆಯುತ್ತಿರುವುದಾಗಿ ಹೇಳಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, “ನನಗೆ ಸಹಕಾರ ಕೊಟ್ಟಿರುವ ಶಿಕ್ಷಕರಿದ್ದಾರೆ. ಅವರ ಜೊತೆಗೆ ನಾನು ಚರ್ಚೆ ಮಾಡುತ್ತೇನೆ. ಬಹುತೇಕ ಎಲ್ಲಾ ಜೆಡಿಎಸ್ ವಿಧಾನ ಪರಿಷತ್‌ ಸದಸ್ಯರು ಇದೇ ತೀರ್ಮಾನ ಮಾಡಿದ್ದಾರೆ. ಹೊರಟ್ಟಿಯವರು ಈ ಬಗ್ಗೆ ಮಾತನಾಡಿದ್ದಾರೆ. ಚರ್ಚೆ ಮಾಡೋಣ ಎಂದಿದ್ದಾರೆ. ಆದರೆ ಈಗಲೇ ನಾನು ಎಲ್ಲವನ್ನು ಹೇಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವನ್ನು ಸ್ಪಷ್ಟಪಡಿಸುತ್ತೇನೆ,” ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.

ಪಕ್ಷದಲ್ಲಿ ಆದ ನೋವಿನ ಬಗ್ಗೆ ವರಿಷ್ಠರಿಗೆ ಹೇಳಿದ್ದೀರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಕೆಲವರಿಗೆ ಯಾರಿಗೆ ನೋವಾದ್ರು, ಯಾರು ಸತ್ತರೂ ಏನು ಅನಿಸಲ್ಲ,” ಎಂಬುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೆಸರು ಹೇಳದೆ ಟಾಂಗ್ ನೀಡಿದರು.

ಒಟ್ಟಿನಲ್ಲಿ ವಿಧಾನಸಭಾ ಸದಸ್ಯರ ಬಳಿಕ ಇದೀಗ ಒಂದಷ್ಟು ಮಂದಿ ವಿಧಾನ ಪರಿಷತ್‌ ಸದಸ್ಯರು ಜೆಡಿಎಸ್‌ ಪಕ್ಷವನ್ನು ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ