ಆ್ಯಪ್ನಗರ

ಯುವಕನ ಹತ್ಯೆ ಮಾಡಿದ ಆರೋಪಿಗಳ ಬಂಧನ

ರವಿ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಮಾಗಡಿ ಪೊಲೀಸರು ಕೊಲೆಯಾದ ಮರುದಿನವೇ ಬಂಧಿಸಿದ್ದಾರೆ.

Vijaya Karnataka 3 Jul 2019, 5:00 am
ಮಾಗಡಿ: ರವಿ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಮಾಗಡಿ ಪೊಲೀಸರು ಕೊಲೆಯಾದ ಮರುದಿನವೇ ಬಂಧಿಸಿದ್ದಾರೆ.
Vijaya Karnataka Web detention of accused of murder of a youth
ಯುವಕನ ಹತ್ಯೆ ಮಾಡಿದ ಆರೋಪಿಗಳ ಬಂಧನ


ತಾಲೂಕಿನ ಮಾನಗಲ್‌ ಗ್ರಾಮದ ನಿವಾಸಿ ರವಿ ಎಂಬ ಯುವಕ ಪಟ್ಟಣದ ಬೈಚಾಪುರದ ನಾಗೇಶ್‌ ಎಂಬುವರ ಪುತ್ರಿಯನ್ನು ಪ್ರೀತಿಸುತ್ತಿದ್ದನು. ರವಿಗೆ ಬುದ್ಧಿ ಹೇಳುವಂತೆ ಯುವತಿಯ ತಂದೆ ನಾಗೇಶ್‌, ಪಟ್ಟಣದ ಹೊಸಪೇಟೆಯ ನಿವಾಸಿ ಲೋಕೇಶ್‌ ಎಂಬುವವರಿಗೆ ತಿಳಿಸಿದ್ದು, ಲೋಕೇಶ್‌ ಉದಯ್‌ ಹಾಗೂ ಇತರರು ಭಾನುವಾರ ರಾತ್ರಿ ರವಿಯನ್ನು ತಿರುಮಲೆ ರಸ್ತೆಯ ಲೋಕೋಪಯೋಗಿ ಉಪ ವಿಭಾಗ ಕಚೇರಿಯ ಮುಂಭಾಗ ನೂರಾರು ಸಾರ್ವಜನಿಕರ ಎದುರೇ ಹಾಕಿ ಬ್ಯಾಟ್‌ನಿಂದ ಹಿಗ್ಗಾಮುಗ್ಗಾ ಥಳಿಸಿ ಕತ್ತು ಕೊಯ್ದು ಹತ್ಯೆ ಮಾಡಿ ಮಾಗಡಿ ಗುಡೇಮಾರನಹಳ್ಳಿ ರಸ್ತೆ ಪಾರಂಗ ಶಾಲೆಯ ಬಳಿ ಇರುವ ಸೇತುವೆ ಕೆಳಗೆ ಎಸೆದು ಪರಾರಿಯಾಗಿದ್ದರು. ಮಾಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ತೀವ್ರ ಪ್ರಯತ್ನ ನಡೆಸಿದ್ದು, ನಾಲ್ವರು ಆರೋಪಿಗಳಾದ ಯುವತಿಯ ತಂದೆ ನಾಗೇಶ್‌, ಲೋಕೇಶ್‌, ಉದಯ್‌, ರವಿಕುಮಾರ್‌ ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್‌ ಕಸ್ಟಡಿಗೆ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ