ಆ್ಯಪ್ನಗರ

ಪತ್ನಿ ಹಂತಕ ಆರೆಸ್ಟ್‌

ಜೀವನ ಪೂರ್ತಿ ಜತೆಯಾಗುವೆ ಎಂಬ ಭರವಸೆ ನೀಡಿ ಸಪ್ತಪದಿ ತುಳಿದು ಕೇವಲ ಒಂಬತ್ತು ತಿಂಗಳಿಗೆ ಪತ್ನಿಯನ್ನು ಮಸಣ ಸೇರಿಸಿದ ಹಂತಕ ಪತಿ ಕೊನೆಗೂ ಪೊಲೀಸರಿಗೆ ಸೆರೆ ...

Vijaya Karnataka 23 Aug 2019, 5:00 am
ಮಾಗಡಿ: ಜೀವನ ಪೂರ್ತಿ ಜತೆಯಾಗುವೆ ಎಂಬ ಭರವಸೆ ನೀಡಿ ಸಪ್ತಪದಿ ತುಳಿದು ಕೇವಲ ಒಂಬತ್ತು ತಿಂಗಳಿಗೆ ಪತ್ನಿಯನ್ನು ಮಸಣ ಸೇರಿಸಿದ ಹಂತಕ ಪತಿ ಕೊನೆಗೂ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.
Vijaya Karnataka Web detention of wife assassin
ಪತ್ನಿ ಹಂತಕ ಆರೆಸ್ಟ್‌


ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದ ಮಾಗಡಿ ತಾಲೂಕಿನ ಹಾಲಶೆಟ್ಟಿಹಳ್ಳಿಯ ನಾಗರಾಜ್‌ನನ್ನು ಪೊಲೀಸರು ಕೃತ್ಯ ನಡೆದ 24 ಗಂಟೆಗಳ ಒಳಗೆ ಬಂಧಿಸಿದ್ದಾರೆ.

ಪೂರ್ಣಿಮಾ ಎಂಬವರನ್ನು ಹಂತಕ ನಾಗರಾಜ್‌ ನವೆಂಬರ್‌ನಲ್ಲಿಮದುವೆಯಾಗಿದ್ದ. ಮದುವೆಯಾದ ದಿನದಿಂದಲೂ ಆಕೆಯ ಶೀಲದ ಬಗ್ಗೆ ಶಂಕಿಸಿ ಜಗಳ ತೆಗೆಯುತ್ತಿದ್ದ ನಾಗರಾಜ್‌, ಬುಧವಾರವೂ ಜಗಳ ತೆಗೆದಿದ್ದ. ಜಗಳ ತಾರಕಕ್ಕೇರಿದಾಗ ಸಿಟ್ಟಿನಿಂದ ಮಚ್ಚಿನಿಂದ ತಲೆಗೆ ಹೊಡೆದ ಕೊಲೆ ಮಾಡಿ, ಮನೆಗೆ ಬೀಗ ಜಡಿದು ಪರಾರಿಯಾಗಿದ್ದ. ಪೂರ್ಣಿಮಾ ಸಂಬಂಧಿಕರೊಬ್ಬರು ಮನೆಗೆ ಬಂದು ನೋಡಿದಾಗ ಆಕೆ ಹತ್ಯೆಯಾಗಿರುವುದು ಬೆಳಕಿಗೆ ಬಂದಿತ್ತು. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಪತಿಯೇ ಹತ್ಯೆ ಮಾಡಿರಬಹುದು ಎಂದು ಶಂಕಿಸಿ ಆತನಿಗೆ ಶೋಧ ನಡೆಸಿದ್ದರು. ತುಮಕೂರು ಜಿಲ್ಲೆಯ ಹುಲಿಯೂರು ದುರ್ಗದಲ್ಲಿಅವಿತಿದ್ದ ನಾಗರಾಜನನ್ನು ಹೆಡೆಮುರಿಕಟ್ಟಿ ತಂದು ವಿಚಾರಣೆ ನಡೆಸಿದಾಗ ಪತ್ನಿಯನ್ನು ಕೊಲೆ ಮಾಡಿದ ವಿಷಯವನ್ನು ಆತ ಒಪ್ಪಿಕೊಂಡಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ