ಆ್ಯಪ್ನಗರ

ಜೂನ್‌ 3ರಿಂದ 17ರವರೆಗೆ ಅತಿಸಾರ ನಿಯಂತ್ರಣ ಪಾಕ್ಷಿಕ

ಮಕ್ಕಳಲ್ಲಿ ಬೇಧಿ ನಿಯಂತ್ರಣಕ್ಕಾಗಿ ಜೂನ್‌ 3ರಿಂದ 17ರವರೆಗೆ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ. ರಾಜೇಂದ್ರ ತಿಳಿಸಿದರು.

Vijaya Karnataka 29 May 2019, 5:00 am
ರಾಮನಗರ: ಮಕ್ಕಳಲ್ಲಿ ಬೇಧಿ ನಿಯಂತ್ರಣಕ್ಕಾಗಿ ಜೂನ್‌ 3ರಿಂದ 17ರವರೆಗೆ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ. ರಾಜೇಂದ್ರ ತಿಳಿಸಿದರು.
Vijaya Karnataka Web diarrheal control fortune from june 3 to 17
ಜೂನ್‌ 3ರಿಂದ 17ರವರೆಗೆ ಅತಿಸಾರ ನಿಯಂತ್ರಣ ಪಾಕ್ಷಿಕ


ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆಯೋಜಿಸಿರುವ ಪಾಕ್ಷಿಕದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಚ್ಛತೆಯೊಂದೇ ಮಂತ್ರ:
ಶುದ್ದ ಕುಡಿಯುವ ನೀರು, ಪರಿಸರ ನೈರ್ಮಲ್ಯ, ಎದೆ ಹಾಲು, ಸೂಕ್ತ ಆಹಾರ ಸೇವನೆ ಹಾಗೂ ಸ್ವಚ್ಚವಾಗಿ ಕೈತೊಳೆಯುವುದರ ಮೂಲಕ ಬೇಧಿ ತಡೆಯಬಹುದು ಎಂದರು.

ಆರೈಕೆ ಮಾಡಿ: ಓಆರ್‌ಎಸ್‌ ಮತ್ತು ಜಿಂಕ್‌ ಗಳನ್ನು ಶಿಶುಗಳಿಗೆ ನೀಡುವುದರಿಂದ ಬೇಧಿಯಿಂದ ಉಂಟಾಗುವ ಸಾವುಗಳನ್ನು ತಪ್ಪಿಸಬಹುದು. ಬೇಸಿಗೆ ಮತ್ತು ಪೂರ್ವ ಮುಂಗಾರು ತಿಂಗಳಲ್ಲಿ ಅಪ್ಟೌಕತೆಯಿಂದ 2 ವರ್ಷದೊಳಗಿನ ಮಕ್ಕಳು ಸಾವನ್ನಪ್ಪುವ ಸಂಭವ ಹೆಚ್ಚು ಎಂದು ಹೇಳಿದರು.

ಎಲ್ಲ ಮಕ್ಕಳಿಗೂ ಓಆರ್‌ಎಸ್‌: ಜಿಲ್ಲೆಯಲ್ಲಿ 5 ವರ್ಷದೊಳಗಿನ 82,583 ಮಕ್ಕಳಿದ್ದು, ಇವರೆಲ್ಲರಿಗೂ ಓಆರ್‌ಎಸ್‌ ನೀಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಎಎನ್‌ಎಂಗಳು, ಮೊಬೈಲ್‌ ದಳಗಳ ಮೂಲಕ ಎಲ್ಲ ತಾಲೂಕಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮುಂಜಾಗ್ರತೆಗೆ ಸೂಚನೆ: ನಗರಸಭೆ, ಪುರಸಭೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ನೀರಿನ ಸಂಗ್ರಹ ಜಾಗಗಳನ್ನು ಸ್ವಚ್ಛಗೊಳಿಸಿ ಕ್ಲೋರಿನೇಷನ್‌ ಮಾಡಲು ಕ್ಲೋರಿನ್‌ ಮಾತ್ರೆಗಳನ್ನು ತರಿಸಬೇಕು, ಪಂಚಾಯತಿ ಮಟ್ಟದಲ್ಲಿ ಎಲ್ಲ ಆರೋಗ್ಯ ಕೇಂದ್ರಗಳು ಹಾಗೂ ನೀರು ಸಂಗ್ರಹ ಘಟಕಗಳನ್ನು ಸ್ವಚ್ಚಗೊಳಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಹೇಳಿದರು.

ಮನೆ ಮನೆಗೆ ಭೇಟಿ, ಅರಿವು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಾತ್ರ ಪ್ರಮುಖವಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸ್ವಚ್ಚತೆ ಹಾಗೂ ಬೇಧಿ ನಿಯಂತ್ರಣ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು, ಎಲ್ಲ ಶಾಲೆಗಳ ಶಿಕ್ಷಕರು ಮಕ್ಕಳಲ್ಲಿ ಸ್ವಚ್ಚತೆ ಬಗ್ಗೆ ಮನದಟ್ಟು ಮಾಡಬೇಕು. ಎಲ್ಲಾ ತಾಲೂಕುಗಳ ಆರೋಗ್ಯಾಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಈ ಪಾಕ್ಷಿಕದ ಯಶಸ್ವಿಯಾಗಿ ಎಲ್ಲ ಕ್ರಮಗಳನ್ನು ವಹಿಸಬೇಕು ಎಂದರು.

ಶಾಲಾ ಮಕ್ಕಳಿಗೆ ಶುಚಿತ್ವದ ಅರಿವು: ಜಿಲ್ಲೆಯಲ್ಲಿ ಒಟ್ಟು 1472 ಶಾಲೆಗಳಿದ್ದು ಎಲ್ಲೆಡೆ ಮಕ್ಕಳಿಗೆ ಶುಚಿತ್ವದ ಕುರಿತು ಅರಿವು ಮೂಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಐಡಿಸಿಎಫ್‌ ಪ್ರಕಾರ ಜಿಲ್ಲೆಯಲ್ಲಿ 308 ಪ್ರದೇಶಗಳನ್ನು ಹೆಚ್ಚಿನ ಅತಿಸಾರ ಉಂಟಾಗುವ ಪ್ರದೇಶಗಳೆಂದು ಗುರುತಿಸಲಾಗಿದ್ದು ಅಲ್ಲಿನ ಮಕ್ಕಳಿಗೆ ಓಅರ್‌ಎಸ್‌ ನೀಡಲಾಗುತ್ತಿದೆ. ಪ್ರದೇಶದಲ್ಲಿನ ಜನರಿಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ.ಮುಲೈ ಮುಹಿಲನ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ. ಅಮರನಾಥ್‌, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಅರ್‌ಎನ್‌. ಲಕ್ಷ್ಮೀಪತಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ