ಆ್ಯಪ್ನಗರ

ನನ್ನ ಮಗನಿಗೆ ಬೆಂಬಲ ಕೊಡಿ, ಸಂಕಷ್ಟ ಕಾಣಿಸುತ್ತಿಲ್ಲವೇ? ಅವನು ಏನು ಮಾಡಿಲ್ಲ: ಡಿಕೆಶಿ ತಾಯಿ ಗೌರಮ್ಮ ಕಣ್ಣೀರು

ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಡಿಕೆ ಶಿವಕುಮಾರ್‌ ಕುಟುಂಬ ಸದಸ್ಯರು ದುಃಖದ ಮಡುವಿನಲ್ಲಿದ್ದಾರೆ. ಡಿಕೆಶಿ ತಾಯಿಯನ್ನು ಎಚ್‌ಡಿ ಕುಮಾರಸ್ವಾಮಿ ಸಂತೈಸಿದರು.

Vijaya Karnataka Web 6 Sep 2019, 7:14 pm
ರಾಮನಗರ: ಅಯೋ... ಬನ್ನಿ.... ನನ್ನ ಮಗನಿಗೆ ನೈತಿಕ ಬೆಂಬಲ ನೀಡಿ. ಅವನು ಏನು ಮಾಡಿಲ್ಲ. ನನ್ನ ಮಗನಿಗೆ ಇಂತಹ ಸಂಕಷ್ಟ ನೀಡುತ್ತಿದ್ದಾರೆ ಎಂದು ಗದ್ಗದಿತ ಧ್ವನಿಯಲ್ಲೇ ಕಣ್ಣಿರಿಟ್ಟಿದ್ದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ.
Vijaya Karnataka Web ಡಿಕೆಶಿ ತಾಯಿ, ಎಚ್‌ಡಿಕೆ
ಡಿಕೆಶಿ ತಾಯಿ, ಎಚ್‌ಡಿಕೆ


ನೀವೇ ನಮ್ಮ ಮಕ್ಕಳಿಗೆ ಧೈರ್ಯ ಹೇಳಬೇಕು. ಯಾವ ತಪ್ಪನ್ನು ಮಾಡದವನಿಗೆ ಇಂತಹ ಸಂಕಷ್ಟ ಬಂದಿದೆ. ನೀವೇ ಅತನನ್ನು ಕರೆದುಕೊಂಡು ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದೆ ಕೈ ಮುಗಿದು ನಿಂತಿದ್ದರು.

ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿನ ಸಂಸದ ಡಿ.ಕೆ.ಸುರೇಶ್ ಅವರ ನಿವಾಸದಲ್ಲಿದ್ದ ಗೌರಮ್ಮ ಅವರನ್ನು ಭೇಟಿ ಮಾಡಲು ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ ಅವರನ್ನೇ ಎದುರು ನೋಡುತ್ತಿದ್ದ, ಡಿಕೆಶಿ ಅವರ ತಾಯಿ ಎಚ್.ಡಿ.ಕೆ ಅವರನ್ನು ಕಂಡೊಡನೆ ಕಣ್ಣೀರು ಹರಿಸಿದರು. ಕೈ ಮುಗಿದು ನಿಂತು, ತಮ್ಮ ಮಗನ ಪರಿಸ್ಥಿತಿ ನೆನೆದು ಬಾವುಕರಾದರು.

ಮನೆಯೊಳಗೆ ಕಾಲಿಟ್ಟ ಎಚ್.ಡಿ.ಕೆ ಮೊದಲು ಗೌರಮ್ಮ ಅವರ ಕಾಲಿಗೆ ನಮಸ್ಕರಿಸಿ, ತಮ್ಮ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡುವಂತೆ ಹೇಳಿ, ಪಕ್ಕದಲ್ಲೇ ಇದ್ದ ಸೋಫಾ ಮೇಲೆ ಗೌರಮ್ಮ ಅವರನ್ನು ಕೂರಿಸಿಕೊಂಡು 15 ನಿಮಿಷಗಳ ಕಾಲ ಸಂತೈಸಿದರು.

ಮನುಷ್ಯತ್ವ ಇರೋವನು ನಾವು. ಭಾವನಾತ್ಮಕ ಕುಟುಂಬದಿಂದ ಬಂದವನು ನಾನು. ಜನ್ಮ ಕೊಟ್ಟ ತಾಯಿ ಹೃದಯದಲ್ಲಿನ ನೋವಿಗೆ ಸಾಂತ್ವನ ಹೇಳೋಕೆ ಬಂದಿದ್ದೇನೆ. ರಾಜಕೀಯ ಬೆಂಬಲ ಬೇರೆ. ಕಾನೂನು ವ್ಯಾಪ್ತಿಯಲ್ಲಿ ಹೋರಾಡಬೇಕು ಅವರ ಜತೆಗೆ ನೈತಿಕವಾಗಿ ಎಲ್ಲಾ ರೀತಿಯ ಹೋರಾಟಕ್ಕೂ ಬೆಂಬಲವಾಗಿ ನಾನಿದ್ದೇನೆ
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ನೀವು ನಮ್ಮ ತಾಯಿ ಇದ್ದಂತೆ. ನೀವು ಅಳಬಾರದು. ಸಮಾಧಾನವಾಗಿರಿ. ನಿಮ್ಮ ಮಗ ಎಂತಹ ದೊಡ್ಡ ಹೋರಾಟಗಳನ್ನೇ ಗೆದ್ದು ಬಂದಿದ್ದಾರೆ. ಇದು ಯಾವ ಲೆಕ್ಕ. ನೀವು ಒಬ್ಬಂಟಿ ಅಲ್ಲ. ನಿಮ್ಮೊಂದಿಗೆ ನಾವಿದ್ದೇವೆ ಎಂಬುದನ್ನು ತೋರಿಸುವುದಕ್ಕಾಗಿಯೇ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೇನೆ ಎಂದರು

ನಿಮ್ಮ ಪುತ್ರ ಹುಟ್ಟು ಹೋರಾಟಗಾರ. ಅವರನ್ನು ಏನು ಮಾಡಲು ಸಾಧ್ಯವಿಲ್ಲ ಇಲ್ಲ. ನೀವು ‘ಧೈರ್ಯವಾಗಿರಬೇಕು ಎಂದು ಎಚ್‌ಡಿ ಕುಮಾರಸ್ವಾಮಿ ಸಮಧಾನದ ಮಾತುಗಳನ್ನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ