ರಾಮನಗರ: ಬೆಲೆ ಏರಿಕೆಯ ವಿಚಾರವಾಗಿ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವಿಪಕ್ಷ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಸಚಿವ ಡಾ.ಅಶ್ವತ್ಥ್ ನಾರಾಯಣ್, ಯುಪಿಎ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆ ಎಷ್ಟಿತ್ತು ಮತ್ತು ನಮ್ಮ ಸರ್ಕಾರದಲ್ಲಿ ಎಷ್ಟಿದೆ ಎನ್ನುವುದನ್ನು ಕೆಪಿಸಿಸಿ ಅಧ್ಯಕ್ಷರು ಅಂಕಿಅಂಶಗಳ ಸಮೇತ ಸಾಬೀತುಪಡಿಸಲಿ ಎಂದು ಸವಾಲೆಸೆದಿದ್ದಾರೆ. ಇದೇವೇಳೆ ಪವರ್ ಇದ್ದಾಗಲೇ ಪವರ್ ಕಟ್ ಮಾಡಿಕೊಂಡು ಕತ್ತಲೆಯಲ್ಲಿ ಬಜೆಟ್ ಮಾಡಿದವರು ಇವರು ಎಂದು ಹೇಳುವ ಮೂಲಕ ಉಚಿತ ವಿದ್ಯುತ್ ನೀಡುವ ಬಗ್ಗೆ ಕಾಂಗ್ರೆಸ್ ಮಾಡಿರುವ ಘೋಷಣೆಯನ್ನು ಮೂದಲಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಂದ ಸುಂಕ ವಸೂಲಿ ಮಾಡುತ್ತದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಉಕ್ರೇನ್ ಯುದ್ಧದ ನಡುವೆಯೂ ಬೆಲೆನಿಯಂತ್ರಣ
ಕಾಂಗ್ರೆಸ್ ನವರು ಅಂಕಿಅಂಶಗಳನ್ನ ತೋರಿಸಲಿ. ಯುಪಿಎ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆ ಎಷ್ಟಿತ್ತು? ನಮ್ಮ ಸರ್ಕಾರದ ಬೆಲೆ ಎಷ್ಟಿದೆ ಅನ್ನೋದನ್ನ ಬುದ್ದಿವಂತ ಕೆಪಿಸಿಸಿ ಅಧ್ಯಕ್ಷರು ತೋರಿಸಲಿ. ಅವರ ಸಮಯದಲ್ಲಿ ಯುದ್ಧ ನಡೆದಿರಲಿಲ್ಲ. ಇವತ್ತು ರಷ್ಯಾ, ಉಕ್ರೇನ್ ಯುದ್ಧ ನಡೆದಿದೆ. ಯುದ್ಧ, ಕೋವಿಡ್ ಸಮಸ್ಯೆ ನಡುವೆಯೂ ಬೆಲೆ ಏರಿಕೆ ನಿಯಂತ್ರಣದ ಕಡೆಗೆ ಗಮನ ಹರಿಸಿದ್ದೇವೆ. ಬೆಲೆ ಏರಿಕೆ ಬಗ್ಗೆಯೇ ಕಾಂಗ್ರೆಸ್ ಸನ್ಮಾನ್ಯರು ಹೇಳಲಿ ಎಂದು ಹೇಳಿದರು.
ಜನ ವಿರೋಧಿ, ರೈತ ವಿರೋಧಿ ಕೆಲಸ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಲೋಕಾಯುಕ್ತ ಸಂಸ್ಥೆ ಅಧಿಕಾರ ಮೊಟಕುಗೊಳಿಸಿದ್ದು ಭ್ರಷ್ಟಾಚಾರಕ್ಕೆ ಪೂರಕವಾಗಿದ್ದುದು ಕಾಂಗ್ರೆಸ್ ಸರ್ಕಾರ ಎಂದರು.
200 ಯೂನಿಟ್ ವಿದ್ಯುತ್ ಫ್ರೀ ವಿಚಾರವಾಗಿ ಮಾತನಾಡಿ, ಪವರ್ ಇದ್ದಾಗಲೇ ಪವರ್ ಕಟ್ ಮಾಡಿಕೊಂಡು ಕತ್ತಲೆಯಲ್ಲಿ ಬಜೆಟ್ ಮಾಡಿದವರವರು . ಇದು ಸಿದ್ದರಾಮಯ್ಯ ಅವರ ಸರ್ಕಾರದ ಸಾಧನೆ ಇದಾಗಿದೆ ಎಂದು ಕುಟುಕಿದರು.
ಕಾಂಗ್ರೆಸ್ ನವರು ರೇಟ್ ಕಾರ್ಡ್ ಇಟ್ಟು ಕೆಲಸ ಮಾಡುವವರುಇನ್ನು ಬಿಜೆಪಿಯಲ್ಲಿ ಸ್ಯಾಂಟ್ರೋ ರವಿ, ಪೈಟರ್ ರವಿ, ಸಿಟಿ ರವಿ ಇದ್ದಾರೆ ಎಂಬ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರವಾಗಿ, ಬಿ.ಕೆ ಹರಿಪ್ರಸಾದ್ ಕೀಳುಮಟ್ಟದ ಹೇಳಿಕೆಗೆ ಉತ್ತರ ಕೊಡದೇ ಇರೋದು ಒಳ್ಳೆಯದ್ದು. ಕಾಂಗ್ರೆಸ್ ಪಕ್ಷದ ತುಂಬೆಲ್ಲಾ ಇರುವುದೇ ದಲ್ಲಾಳಿಗಳು. ಕಾಂಗ್ರೆಸ್ ಪಕ್ಷ ದಲ್ಲಾಳಿ ಪಕ್ಷ. ಭ್ರಷ್ಟಾಚಾರ ಬೆಳೆಸಿದವರು, ರೇಟ್ ಕಾರ್ಡ್ ಇಟ್ಟುಕೊಂಡು ಕೆಲಸ ಮಾಡುವವರು ಇವರು. ಫ್ರೀಯಾಗಿ ಎಂದೂ ಕೆಲಸ ಮಾಡಿಲ್ಲ. ಪೇಮೆಂಟ್ ಕೊಟ್ಟರೆ ಮಾತ್ರ ಕೆಲಸ ಮಾಡಿದವರು ಎಂದು ಆರೋಪಿಸಿದರು.
ಇನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳ ಬಗ್ಗೆ, ಬಿಜೆಪಿಯಲ್ಲಿ ಪಕ್ಷವೇ ಬಲಿಷ್ಟವಾಗಿರೋದು. ಪಕ್ಷಕ್ಕಿಂತದೊಡ್ಡವರು ಯಾರೂ ಇಲ್ಲ ಎಂದು ಅಭಿಪ್ರಾಯಪಟ್ಟರು.
ಇಲ್ಯಾರೂ ಸೂಪರ್ ಲೀಡರ್ ಗಳಿಲ್ಲ
ಇಲ್ಲಿ ಯಾರೂ ಸೂಪರ್ ಲೀಡರ್ ಗಳು ಇಲ್ಲ. ಸೂಪರ್ ಲೀಡರ್ ನೋಡುವುದಾದ್ರೆ ಪ್ರತಿಪಕ್ಷಗಳಲ್ಲಿ ನೋಡಬೇಕು. ನಾವೆಲ್ಲರೂ ಪಕ್ಷದ ನೆರಳಿನಲ್ಲಿ ಇರುವವರು, ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಯತ್ನಾಳ್ ಯಾವ ಸ್ಥಾನದಲ್ಲಿದ್ದಾರೆ? ಅವರ ಶಕ್ತಿ ಏನು ಅನ್ನುವುದೂ ಜನಕ್ಕೆ ಈಗಾಗಲೇ ಗೊತ್ತಾಗಿದೆ. ಅವರ ಹೇಳಿಕೆಯಿಂದ ನಮ್ಮ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಇಲ್ಲ ಎಂದು ತಿಳಿಸಿದರು.
ಇನ್ನು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆಡಿಯೋ ಲೀಕ್ ವಿಚಾರವಾಗಿ ಮಾತನಾಡಲು ನಿರಾಕರಿಸಿದರು. ಅವರು ತಮ್ಮ ಆಡಿಯೋ ಅಲ್ಲ ಅಂತ ಹೇಳಿದ್ದಾರೆ ಅದರ ಬಗ್ಗೆ ಮಾತಾಡಲ್ಲ ಎಂದು ಹೇಳಿದರು.
ಉಕ್ರೇನ್ ಯುದ್ಧದ ನಡುವೆಯೂ ಬೆಲೆನಿಯಂತ್ರಣ
ಕಾಂಗ್ರೆಸ್ ನವರು ಅಂಕಿಅಂಶಗಳನ್ನ ತೋರಿಸಲಿ. ಯುಪಿಎ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆ ಎಷ್ಟಿತ್ತು? ನಮ್ಮ ಸರ್ಕಾರದ ಬೆಲೆ ಎಷ್ಟಿದೆ ಅನ್ನೋದನ್ನ ಬುದ್ದಿವಂತ ಕೆಪಿಸಿಸಿ ಅಧ್ಯಕ್ಷರು ತೋರಿಸಲಿ. ಅವರ ಸಮಯದಲ್ಲಿ ಯುದ್ಧ ನಡೆದಿರಲಿಲ್ಲ. ಇವತ್ತು ರಷ್ಯಾ, ಉಕ್ರೇನ್ ಯುದ್ಧ ನಡೆದಿದೆ. ಯುದ್ಧ, ಕೋವಿಡ್ ಸಮಸ್ಯೆ ನಡುವೆಯೂ ಬೆಲೆ ಏರಿಕೆ ನಿಯಂತ್ರಣದ ಕಡೆಗೆ ಗಮನ ಹರಿಸಿದ್ದೇವೆ. ಬೆಲೆ ಏರಿಕೆ ಬಗ್ಗೆಯೇ ಕಾಂಗ್ರೆಸ್ ಸನ್ಮಾನ್ಯರು ಹೇಳಲಿ ಎಂದು ಹೇಳಿದರು.
ಜನ ವಿರೋಧಿ, ರೈತ ವಿರೋಧಿ ಕೆಲಸ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಲೋಕಾಯುಕ್ತ ಸಂಸ್ಥೆ ಅಧಿಕಾರ ಮೊಟಕುಗೊಳಿಸಿದ್ದು ಭ್ರಷ್ಟಾಚಾರಕ್ಕೆ ಪೂರಕವಾಗಿದ್ದುದು ಕಾಂಗ್ರೆಸ್ ಸರ್ಕಾರ ಎಂದರು.
200 ಯೂನಿಟ್ ವಿದ್ಯುತ್ ಫ್ರೀ ವಿಚಾರವಾಗಿ ಮಾತನಾಡಿ, ಪವರ್ ಇದ್ದಾಗಲೇ ಪವರ್ ಕಟ್ ಮಾಡಿಕೊಂಡು ಕತ್ತಲೆಯಲ್ಲಿ ಬಜೆಟ್ ಮಾಡಿದವರವರು . ಇದು ಸಿದ್ದರಾಮಯ್ಯ ಅವರ ಸರ್ಕಾರದ ಸಾಧನೆ ಇದಾಗಿದೆ ಎಂದು ಕುಟುಕಿದರು.
ಕಾಂಗ್ರೆಸ್ ನವರು ರೇಟ್ ಕಾರ್ಡ್ ಇಟ್ಟು ಕೆಲಸ ಮಾಡುವವರುಇನ್ನು ಬಿಜೆಪಿಯಲ್ಲಿ ಸ್ಯಾಂಟ್ರೋ ರವಿ, ಪೈಟರ್ ರವಿ, ಸಿಟಿ ರವಿ ಇದ್ದಾರೆ ಎಂಬ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರವಾಗಿ, ಬಿ.ಕೆ ಹರಿಪ್ರಸಾದ್ ಕೀಳುಮಟ್ಟದ ಹೇಳಿಕೆಗೆ ಉತ್ತರ ಕೊಡದೇ ಇರೋದು ಒಳ್ಳೆಯದ್ದು. ಕಾಂಗ್ರೆಸ್ ಪಕ್ಷದ ತುಂಬೆಲ್ಲಾ ಇರುವುದೇ ದಲ್ಲಾಳಿಗಳು. ಕಾಂಗ್ರೆಸ್ ಪಕ್ಷ ದಲ್ಲಾಳಿ ಪಕ್ಷ. ಭ್ರಷ್ಟಾಚಾರ ಬೆಳೆಸಿದವರು, ರೇಟ್ ಕಾರ್ಡ್ ಇಟ್ಟುಕೊಂಡು ಕೆಲಸ ಮಾಡುವವರು ಇವರು. ಫ್ರೀಯಾಗಿ ಎಂದೂ ಕೆಲಸ ಮಾಡಿಲ್ಲ. ಪೇಮೆಂಟ್ ಕೊಟ್ಟರೆ ಮಾತ್ರ ಕೆಲಸ ಮಾಡಿದವರು ಎಂದು ಆರೋಪಿಸಿದರು.
ಇನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳ ಬಗ್ಗೆ, ಬಿಜೆಪಿಯಲ್ಲಿ ಪಕ್ಷವೇ ಬಲಿಷ್ಟವಾಗಿರೋದು. ಪಕ್ಷಕ್ಕಿಂತದೊಡ್ಡವರು ಯಾರೂ ಇಲ್ಲ ಎಂದು ಅಭಿಪ್ರಾಯಪಟ್ಟರು.
ಇಲ್ಯಾರೂ ಸೂಪರ್ ಲೀಡರ್ ಗಳಿಲ್ಲ
ಇಲ್ಲಿ ಯಾರೂ ಸೂಪರ್ ಲೀಡರ್ ಗಳು ಇಲ್ಲ. ಸೂಪರ್ ಲೀಡರ್ ನೋಡುವುದಾದ್ರೆ ಪ್ರತಿಪಕ್ಷಗಳಲ್ಲಿ ನೋಡಬೇಕು. ನಾವೆಲ್ಲರೂ ಪಕ್ಷದ ನೆರಳಿನಲ್ಲಿ ಇರುವವರು, ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಯತ್ನಾಳ್ ಯಾವ ಸ್ಥಾನದಲ್ಲಿದ್ದಾರೆ? ಅವರ ಶಕ್ತಿ ಏನು ಅನ್ನುವುದೂ ಜನಕ್ಕೆ ಈಗಾಗಲೇ ಗೊತ್ತಾಗಿದೆ. ಅವರ ಹೇಳಿಕೆಯಿಂದ ನಮ್ಮ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಇಲ್ಲ ಎಂದು ತಿಳಿಸಿದರು.
ಇನ್ನು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆಡಿಯೋ ಲೀಕ್ ವಿಚಾರವಾಗಿ ಮಾತನಾಡಲು ನಿರಾಕರಿಸಿದರು. ಅವರು ತಮ್ಮ ಆಡಿಯೋ ಅಲ್ಲ ಅಂತ ಹೇಳಿದ್ದಾರೆ ಅದರ ಬಗ್ಗೆ ಮಾತಾಡಲ್ಲ ಎಂದು ಹೇಳಿದರು.