ಆ್ಯಪ್ನಗರ

ಯಾರೊಬ್ಬರೂ ಮೇಕೆದಾಟು ಯೋಜನೆಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ; ಡಾ.ಅಶ್ವತ್ಥ್‌ ನಾರಾಯಣ್

ನಮಗೆ ದೇಶ ಮುಖ್ಯ ಎಂದು ಹೇಳಿಕೆ ನೀಡಿರುವ ಸಿ.ಟಿ.ರವಿ ಅವರ ಹೇಳಿಗೆ ಪ್ರತಿಕ್ರಿಯೆ ನೀಡದ ಅವರು, ಮೇಕೆದಾಟು ಯೋಜನೆ ಬಗ್ಗೆ ನಮ್ಮ ನಿಲುವು ಎಂದಿಗೂ ಬದಲಾಗುವುದಿಲ್ಲ ಎಂದಷ್ಟೇ ಡಾ.ಸಿಎನ್‌ ಅಶ್ವತ್ಥ್ ನಾರಾಯಣ್ ಹೇಳಿದರು. ಅಲ್ಲದೇ ಮೇಕೆದಾಟು ವಿಚಾರದಲ್ಲಿ ನಮಗೆ ಸ್ಪಷ್ಟವಾದ ನಿಲುವಿದೆ. ಯಾರೊಬ್ಬರೂ ಈ ಯೋಜನೆಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ರಾಜ್ಯದ ಬಿಜೆಪಿ ಸರಕಾರ ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.

Vijaya Karnataka Web 13 Aug 2021, 11:42 am
ರಾಮನಗರ: ದೇಶದ ಕಾನೂನಿನಲ್ಲಿ ರಾಜ್ಯಕ್ಕಿರುವ ಹಕ್ಕುಗಳನ್ನಷ್ಟೇ ನಾವು ಕೇಳುತ್ತಿದ್ದೆವೆ. ಮೇಕೆದಾಟು ವಿಚಾರದಲ್ಲಿ ನಮಗೆ ಯಾವುದೇ ಆತಂಕ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿಎನ್‌ ಅಶ್ವತ್ಥ್ ನಾರಾಯಣ್ ತಿಳಿಸಿದರು.
Vijaya Karnataka Web CN Ashwath Narayana


ರಾಮನಗರ ಜಿಪಂ ಕಚೇರಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ನಮಗೆ ಸ್ಪಷ್ಟವಾದ ನಿಲುವಿದೆ. ಯಾರೊಬ್ಬರೂ ಈ ಯೋಜನೆಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ರಾಜ್ಯದ ಬಿಜೆಪಿ ಸರಕಾರ ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ಅಲ್ಲದೇ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಮಿಳುನಾಡಿನ ಅಭಿಪ್ರಾಯ ಕೇಳಬೇಕು ಎಂಬ ಕೇಂದ್ರದ ನಿಲುವನ್ನು ತಮಿಳುನಾಡು ಸರಕಾರ ಅನುಕೂಲ‌ ಪಡೆಯುತ್ತಿದೆ. ಟ್ರಿಬ್ಯೂನಲ್‌ನಲ್ಲಿ ಹೇಳಿರುವುದನ್ನಷ್ಟೆ ನಾವು ಕೇಳುತ್ತಿದ್ದೆವೆ. ನಮಗೆ ಮೇಕೆದಾಟು ಯೋಜನೆ ಜಾರಿಗೆ ಬರಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದರು.
ನಾಡಿನ ಹಿತದೃಷ್ಟಿಯಿಂದ ಸಿ.ಟಿ ರವಿಗೆ ಉತ್ತಮ ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸಲಿ; ದಿನೇಶ್ ಗುಂಡೂರಾವ್
ಇನ್ನು ನಮಗೆ ದೇಶ ಮುಖ್ಯ ಎಂದು ಹೇಳಿಕೆ ನೀಡಿರುವ ಸಿ.ಟಿ.ರವಿ ಅವರ ಹೇಳಿಗೆ ಪ್ರತಿಕ್ರಿಯೆ ನೀಡದ ಅವರು, ಮೇಕೆದಾಟು ಯೋಜನೆ ಬಗ್ಗೆ ನಮ್ಮ ನಿಲುವು ಎಂದಿಗೂ ಬದಲಾಗುವುದಿಲ್ಲ ಎಂದಷ್ಟೇ ಹೇಳಿದರು. ಇದೇವೇಳೆ ರಾಜಕೀಯದಲ್ಲಿ ಸ್ಥಾನಮಾನ ಬಯಸುವುದು ಸರ್ವೇ ಸಾಮಾನ್ಯ. ಹೀಗಾಗಿ ಸಚಿವ ಸ್ಥಾನದ ಪೈಪೋಟಿಯು ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕು ಎಂದರು. ಅಲ್ಲದೇ ನಮಗೆ ಉತ್ತಮವಾದ ಕೆಲಸ ಮಾಡಬೇಕು ಎಂಬ ಆಸೆ ಎಲ್ಲರಿಗು ಇರುತ್ತದೆ. ಪ್ರಜಾಪ್ರಭುತ್ವದಲ್ಲಿ ಜನರ ಸೇವೆ ಮಾಡುವ ಉದ್ದೇಶವನ್ನು ಟೀಕಿಸುವುದು ಸರಿಯಲ್ಲ. ಇದರೊಂದಿಗೆ ರಾಮನಗರ ಜಿಲ್ಲಾ ಉಸ್ತುವಾರಿ ಪಟ್ಟಕ್ಕೆ ಪೈಪೋಟಿ ಇಲ್ಲ. ಕೆಲಸದಲ್ಲಿ ಮಾತ್ರವೇ ಪೈಪೋಟಿ ಇದೆ ಎಂದರು.

ಇನ್ನು ಶಾಸಕ ಸತೀಶ್ ರೆಡ್ಡಿ ಅವರ ಕಾರಿಗೆ ಬೆಂಕಿ ಇಟ್ಟಿರುವ ಪ್ರಕರಣ ಆಶ್ಚರ್ಯ ತಂದಿದೆ. ಅವರಿಗೆ ಯಾರೊಬ್ಬರು ವೈರಿಗಳೇ ಇಲ್ಲ. ಇಂತಹ ದುಷ್ಕರ್ಮಿಗಳನ್ನು ಪತ್ತೆ ಮಾಡುವ ಕೆಲಸ ನಡೆಯುತ್ತಿದೆ. ಸಿಸಿಟಿವಿ ವಿಡಿಯೋ ಇದೆ. ಕಿಡಿಗೇಡಿಗಳನ್ನು ಶೀಘ್ರವಾಗಿ ಬಂಧಿಸುವ ಕೆಲಸವಾಗಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ