ರಾಮನಗರ: ಕುಡಿದ ಮತ್ತಿನಲ್ಲಿ ಈಜಲು ತೆರೆಳಿದ್ದ ಆರೋಗ್ಯ ನಿರೀಕ್ಷಕರೊಬ್ಬರು ಮರು ದಿನ ಶವವಾಗಿ ಪತ್ತೆಯಾಗಿರುವ ಪ್ರಕರಣದ ರಾಮನಗರದ ಸಿಂಗ್ರಬೋವಿದೊಡ್ಡಿ ಕೆರೆಯಲ್ಲಿ ನಡೆದಿದೆ.
ಮಾಗಡಿಯ ಬೈಚಾಪುರ ಗ್ರಾಮದ ನಿವಾಸಿ ಶಂಕರ್ (32) ಮೃತಪಟ್ಟಿದ್ದು, ಆತನ ಸ್ನೇಹಿತರು ಇದೀಗ ಪೊಲೀಸರ ಬಂಧನದಲ್ಲಿದ್ದಾರೆ.
ಏನಿದು ಪ್ರಕರಣ: ಬಿಡದಿಯ ಆರೋಗ್ಯ ಇಲಾಖೆಯಲ್ಲಿ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶಂಕರ್ ಬುಧವಾರ ಮಧ್ಯಾಹ್ನ ತನ್ನ ಮೂವರು ಜನ ಸ್ನೇಹಿತರೊಂದಿಗೆ ಮದ್ಯ ಸೇವಿಸಿದ್ದಾರæ. ಬಳಿಕ ಅಲ್ಲೇ ಸಮೀಪದಲ್ಲೇ ಇದ್ದ ಸಿಂಗ್ರಬೋವಿದೊಡ್ಡಿ ಕೆರೆಯಲ್ಲಿ ಒಟ್ಟು 4 ಮಂದಿ ಈಜಲು ಮುಂದಾಗಿದ್ದಾರೆ. ಈ ವೇಳೆ ಶಂಕರ್ ಅವರ ಕಾಲಿಗೆ ಗಿಡ ಸಿಲುಕಿಕೊಂಡಿದ್ದು, ಮತ್ತಿನಲ್ಲಿದ್ದ ಅವರು ನೀರಿನಲ್ಲಿ ಮುಳುಗಿದ್ದಾರೆ. ಇನ್ನುಳಿದ ನಾಲ್ವರು ಸ್ನೇಹಿತರು ಸಹ ಮತ್ತಿನಲ್ಲೇ ಇದ್ದ ಹಿನ್ನೆಲೆಯಲ್ಲಿ ಶಂಕರ್ ಅನ್ನು ರಕ್ಷಿಸಲು ಮುಂದಾಗಿಲ್ಲ.
ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಕೂಡಲೇ ರಕ್ಷಣ ತಂಡ ಕಾರ್ಯಪ್ರವೃತ್ತರಾದರೂ, ಗುರುವಾರ ಬೆಳಗ್ಗೆ ಶವ ಪತ್ತೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಮರಣೊತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಇನ್ನುಳಿದ ಮೂವರು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಗಿಲು ಮುಟ್ಟಿದ ಆಕ್ರಂದನ: ಸರಕಾರಿ ಉದ್ಯೋಗದಲ್ಲಿದ್ದ ಮಗ ಕುಡಿದ ಮತ್ತಿನಲ್ಲಿ ನೀರು ಪಾಲಾದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ಮುಂಭಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.