ಬರ: ರೈತರೊಂದಿಗೆ ಸಮಿತಿ ಸಂವಾದ
ಜಿಲ್ಲೆಗೆ ಬರ ಅಧ್ಯಯನಕ್ಕೆ ಆಗಮಿಸಿದ್ದ ರಾಜ್ಯ ಸಚಿವ ಸಂಪುಟ ಉಪಸಮಿತಿ, ಪಣ್ಣಯ್ಯನ ಪಾಳ್ಯ ಲಕ್ಷ್ಮೀಕಾಂತಪ್ಪ ಎಂಬುವರ ಜಮೀನಿನಲ್ಲಿ ರೈತನ ...
Vijaya Karnataka 11 Jan 2019, 5:00 am
ಮಾಗಡಿ ಗ್ರಾಮಾಂತರ: ಜಿಲ್ಲೆಗೆ ಬರ ಅಧ್ಯಯನಕ್ಕೆ ಆಗಮಿಸಿದ್ದ ರಾಜ್ಯ ಸಚಿವ ಸಂಪುಟ ಉಪಸಮಿತಿ, ಪಣ್ಣಯ್ಯನ ಪಾಳ್ಯ ಲಕ್ಷ್ಮೀಕಾಂತಪ್ಪ ಎಂಬುವರ ಜಮೀನಿನಲ್ಲಿ ರೈತನ ಸಂಕಷ್ಟ ಆಲಿಸಿತು. ಸಚಿವರ ತಂಡದೊಂದಿಗೆ ಮಾತನಾಡಿದ ರೈತ ಲಕ್ಷ್ಮೀಕಾಂತಪ್ಪ ''ಸ್ವಾಮಿ 30 ಸಾವಿರ ರೂ. ಬಂಡವಾಳ ಹಾಕಿ ಹುರುಳಿ ಧಾನ್ಯ ಬೆಳೆದಿದ್ದೇನೆ. ಮಳೆಯ ಅಭಾವದಿಂದ ಹುರುಳಿ ನಿರೀಕ್ಷಿತ ಫಸಲು ಬಂದಿಲ್ಲ,'' ಎಂದು ಕಷ್ಟ ಹೇಳಿಕೊಂಡರು.ಹುರುಳಿ ಧಾನ್ಯಕ್ಕೆ ಸೂಕ್ತ ಬೆಂಬಲ ಬೆಲೆ ನೀಡುವ ಭರವಸೆ ನೀಡಿ ತಂಡ ಬೆಂಗಳೂರಿನತ್ತ ತೆರಳಿತು.