ಆ್ಯಪ್ನಗರ

ಡಿವೈಎಸ್ಪಿ ಪುತ್ರಿಯ ಮೊಬೈಲ್‌ ಕದ್ದ ಕಳ್ಳ

ಪಟ್ಟಣದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಮೊಬೈಲ್‌ನಲ್ಲಿ ಸಂಭಾಷಣೆ ಮಾಡಿಕೊಂಡು ಹೋಗುತ್ತಿದ್ದ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿನಿ ಕೈಯಿಂದ ಕಳ್ಳನೊಬ್ಬ ಬೆಲೆ ಬಾಳುವ ಮೊಬೈಲ್‌ ...

Vijaya Karnataka 4 Aug 2019, 8:48 am
ಚನ್ನಪಟ್ಟಣ: ಪಟ್ಟಣದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಮೊಬೈಲ್‌ನಲ್ಲಿ ಸಂಭಾಷಣೆ ಮಾಡಿಕೊಂಡು ಹೋಗುತ್ತಿದ್ದ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿನಿ ಕೈಯಿಂದ ಕಳ್ಳನೊಬ್ಬ ಬೆಲೆ ಬಾಳುವ ಮೊಬೈಲ್‌ ಕಿತ್ತು ಪರಾರಿಯಾಗಿದ್ದಾನೆ.
Vijaya Karnataka Web Mobile


ವಿದ್ಯಾರ್ಥಿನಿ ಶರ್ಮಿಳಾ ಮೊಬೈಲ್‌ ಕಳೆದುಕೊಂಡವರು. ಬೆಂಗಳೂರಿನ ವಿಜಯನಗರದ ಪೊಲೀಸ್‌ ಠಾಣೆಯ ಡಿವೈಎಸ್ಪಿ ಪುತ್ರಿಯಾದ ಆಕೆ ಪಟ್ಟಣದ ಕೆಂಪೇಗೌಡ ಬಡಾವಣೆಯಲ್ಲಿ ತನ್ನ ಸ್ನೇಹಿತೆಯ ಮನೆಗೆ ಬಂದು ನಂತರ ಬೆಂಗಳೂರಿಗೆ ಹೋಗಲು ಬಸ್ಸ್‌ ನಿಲ್ದಾಣದಲ್ಲಿರುವಾಗ ಈ ಘಟನೆ ನಡೆದಿದೆ.

ಬೆಂಗಳೂರಿಗೆ ಬಸ್ಸ್‌ ಹತ್ತಲು ಮೊಬೈಲ್‌ನಲ್ಲಿ ಸಂಭಾಷಣೆ ಮಾಡಿಕೊಂಡು ಬರುವಾಗ ಹಿಂಬದಿಯಿಂದ ಬಂದ ಯುವಕ ಏಕಾಎಕಿ ಮೊಬೈಲ್‌ ಕಿತ್ತು ಪರಾರಿಯಾಗಿದ್ದಾನೆ. ಈ ಘಟನೆಯಿಂದ ಬೆದರಿದ ಯುವತಿ ತನ್ನ ತಂದೆಗೆ ಕರೆ ಮಾಡಿ ತಿಳಿಸಿದ್ದಾಳೆ. ಸುಮಾರು 50 ಸಾವಿರ ರೂ, ಮೌಲ್ಯದ ಮೊಬೈಲ್‌ ಅಪಹರಣವಾಗಿದ್ದು, ತನ್ನ ತಂದೆಯ ಸೂಚನೆಯಂತೆ ಠಾಣೆಗೆ ದೂರು ನೀಡಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ