ಆ್ಯಪ್ನಗರ

ವಿದ್ಯುತ್‌ ಸ್ಪರ್ಶ: ಎಲೆಕ್ಟ್ರಿಷಿಯನ್‌ ಸಾವು

ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬಂಕ್‌ನಲ್ಲಿ ಅಳವಡಿಸಿದ್ದ ಜಾಹಿರಾತು ಬೋರ್ಡ್‌ ತೆರವುಗೊಳಿಸಲು ಕ್ರೇನ್‌ ಮೂಲಕ ಏರಿದ್ದ ಎಲೆಕ್ಟ್ರಿಷಿಯನ್‌ ಒಬ್ಬ ವಿದ್ಯುತ್‌ ಸ್ಪರ್ಶದಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಣಮಿಣಿಕೆ ಸಮೀಪ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Vijaya Karnataka 11 Mar 2019, 5:00 am
ಬಿಡದಿ: ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬಂಕ್‌ನಲ್ಲಿ ಅಳವಡಿಸಿದ್ದ ಜಾಹಿರಾತು ಬೋರ್ಡ್‌ ತೆರವುಗೊಳಿಸಲು ಕ್ರೇನ್‌ ಮೂಲಕ ಏರಿದ್ದ ಎಲೆಕ್ಟ್ರಿಷಿಯನ್‌ ಒಬ್ಬ ವಿದ್ಯುತ್‌ ಸ್ಪರ್ಶದಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಣಮಿಣಿಕೆ ಸಮೀಪ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
Vijaya Karnataka Web electric touch electrician death
ವಿದ್ಯುತ್‌ ಸ್ಪರ್ಶ: ಎಲೆಕ್ಟ್ರಿಷಿಯನ್‌ ಸಾವು


ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿರುವ ವ್ಯಕ್ತಿ ಜೇಮ್ಸ್‌(30) ಎಂದು ಗುರುತಿಸಲಾಗಿದ್ದು, ಈತ ಇಂಡಿಯಲ್‌ ಆಯಿಲ್‌ ಕಂಪೆನಿಯ ನೌಕರ ಎಂದು ಹೇಳಲಾಗಿದೆ. ಬಿಡದಿ ಹೋಬಳಿ ಹೆಜ್ಜಾಲದ ಸಮೀಪ ಇರುವ ಕಣಿಮಿಣಿಕೆ ಗ್ರಾಮದ ಸರ್ಕಲ್‌ನಲ್ಲಿರುವ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ಗೆ ಸೇರಿದ ರಸ್ತೆ ಬದಿಯಲ್ಲಿ ಅಳವಡಿಸಿದ್ದ ಜಾಹಿರಾತು ಫಲಕವನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.

ಭಾನುವಾರ ಸಂಜೆ 7 ಗಂಟೆ ಸಮಯದಲ್ಲಿ ಜಾಹಿರಾತಿ ಬೋರ್ಡ್‌ ತೆರವುಗೊಳಿಸಲು ಎಲೆಕ್ಟ್ರೀಷಿಯನ್‌ ಜೇಮ್ಸ್‌ ಎಂಬ ವ್ಯಕ್ತಿಯು ಕ್ರೇನ್‌ ಮೂಲಕ ಮೇಲೆರಿದ್ದ ಸಮಯದಲ್ಲಿ ಬೋರ್ಡ್‌ ಪಕ್ಕದಲ್ಲಿಯೇ ಹಾದುಹೋಗಿದ್ದ ಹೈವೋಲ್ಟಜ್‌ ವಿದ್ಯುತ್‌ ಲೈನ್‌ ತಗುಲಿ ಜೇಮ್ಸ್‌ ಸ್ಥಳದಲ್ಲಿಯೇ ಸಾವನ್ನಪ್ಪಿರುತ್ತಾನೆ. ಘಟನೆ ನಡೆದ ಕೂಡಲೇ ಪೆಟ್ರೋಲ್‌ ಬಂಕ್‌ನ ಸಿಬ್ಬಂದಿ ಜಾಗ ಖಾಲಿ ಮಾಡಿದ್ದು, ಸುಮಾರು ಎರಡು ಗಂಟೆಗಳ ಕಾಲ ಮೃತ ಜೇಮ್ಸ್‌ನ ದೇಹ ಬೋರ್ಡ್‌ ಮೇಲೆ ಒರಗಿದ ಸ್ಥಿತಿಯಲ್ಲಿತ್ತು.

ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಮಗ್ಗುಲ್ಲಿಯೇ ಘಟನೆ ನಡೆದಿದ್ದರಿಂದ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ವಾಹನಗಳನ್ನು ನಿಲ್ಲಿಸಿ ಮೃತ ವ್ಯಕ್ತಿಯ ಮೃತದೇಹವನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಇದರಿಂದ ಹೆದ್ದಾರಿಯಲ್ಲಿ ಸಂಚಾರ ಕೆಲಕಾಲ ಅಸ್ತವ್ಯಸ್ತವಾಯಿತು. ಸುದ್ಧಿ ತಿಳಿದ ಕುಂಬಳಗೂಡು ಪೊಲೀಸರು ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳ ಸಿಬ್ಬಂದಿ ಮೂಲಕ ಮೃತದೇಹವನ್ನು ಕೆಳಗಿಳಿಸುವ ಕಾರ್ಯ ಕೈಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ