ಆ್ಯಪ್ನಗರ

ಡಿ.24ರಂದು ವಿದ್ಯುತ್‌ ಸ್ಥಗಿತ

ಇಲ್ಲಿನ ಬೆಸ್ಕಾಂ ವತಿಯಿಂದ ನಗರ ಉಪ ವಿಭಾಗದ ಕಾರ್ಯ ಮತ್ತು ಪಾಲನಾ ಘಟಕ-02ರ ವ್ಯಾಪ್ತಿಯಲ್ಲಿರುವ ಸಿಪಿಟಿ-1ರ ಮಾರ್ಗದಲ್ಲಿ ಎನ್‌...

Vijaya Karnataka 23 Dec 2018, 5:00 am
ಚನ್ನಪಟ್ಟಣ: ಇಲ್ಲಿನ ಬೆಸ್ಕಾಂ ವತಿಯಿಂದ ನಗರ ಉಪ ವಿಭಾಗದ ಕಾರ್ಯ ಮತ್ತು ಪಾಲನಾ ಘಟಕ-02ರ ವ್ಯಾಪ್ತಿಯಲ್ಲಿರುವ ಸಿಪಿಟಿ-1ರ ಮಾರ್ಗದಲ್ಲಿ ಎನ್‌.ಎಚ್‌ ರಾಷ್ಟ್ರೀಯ ಹೆದ್ದಾರಿ ವಿದ್ಯುತ್‌ ಕಂಬಗಳನ್ನು ಸ್ಥಳಾಂತರ ಮಾಡುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
Vijaya Karnataka Web electricity breakdown on december 24
ಡಿ.24ರಂದು ವಿದ್ಯುತ್‌ ಸ್ಥಗಿತ


ಅದರಿಂದ ಡಿ. 24ರ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರ ವ್ಯಾಪ್ತಿಯ ಸಿ.ಪಿ.ಟಿ.-1ರ ಮಾರ್ಗಕ್ಕೆ ಸಂಬಂಧಿಸಿದ ಟಿಪ್ಪುನಗರ, ಕಲಾನಗರ, ತಟ್ಟೆಕೆರೆ, ಆರ್‌.ಎಂ.ಸಿ ಮಾರುಕಟ್ಟೆ, ಕೆಂಚಯ್ಯನದೊಡ್ಡಿ, ವಿನಾಯಕನಗರ, ವಂದಾರಗುಪ್ಪೆ, ಪಿ.ಟಿ.ಎಸ್‌, ಸೈಯದ್‌ ವಾಡಿ, ಹನುಮಂತನಗರ, ಅಬ್ಬೂರು ಫೀಡರ್‌ಗೆ ಸಂಬಂಧಪಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಚನ್ನಪಟ್ಟಣ ನಗರ ಉಪವಿಭಾಗದ ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ವಿಭಾಗದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ