ಆ್ಯಪ್ನಗರ

ದನ ಕಾಯುವ ವ್ಯಕ್ತಿ ಮೇಲೆ ಆನೆ ದಾಳಿ: ತೀವ್ರ ಗಾಯ

ಕಾಡಂಚಿನ ಜಮೀನೊಂದರಲ್ಲಿ ದನ ಮೇಯಿಸುತ್ತಿದ್ದ ದನಗಾಹಿ ಮೇಲೆ ಕಾಡನೆಯೊಂದು ಏಕಾಎಕಿ ದಾಳಿ ನಡೆಸಿದ್ದು, ಹಿಂದಿನಿಂದ ಬಂದು ಸೊಂಡಿಲಿನಿಂದ ಎತ್ತಿ ಬಿಸಾಕಿದ್ದರ ಪರಿಣಾಮ ಆತನ ಕಾಲೊಂದು ಮುರಿದುಕೊಂಡಿದೆ. ತೀವ್ರ ಗಾಯಗೊಂಡಿರುವ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Vijaya Karnataka 7 Jul 2018, 3:47 pm
ಸಾತನೂರು: ಕಾಡಂಚಿನ ಜಮೀನೊಂದರಲ್ಲಿ ದನ ಮೇಯಿಸುತ್ತಿದ್ದ ದನಗಾಹಿ ಮೇಲೆ ಕಾಡನೆಯೊಂದು ಏಕಾಎಕಿ ದಾಳಿ ನಡೆಸಿದ್ದು, ಹಿಂದಿನಿಂದ ಬಂದು ಸೊಂಡಿಲಿನಿಂದ ಎತ್ತಿ ಬಿಸಾಕಿದ್ದರ ಪರಿಣಾಮ ಆತನ ಕಾಲೊಂದು ಮುರಿದುಕೊಂಡಿದೆ. ತೀವ್ರ ಗಾಯಗೊಂಡಿರುವ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
Vijaya Karnataka Web elephant attack on cattle waiting person severe injury
ದನ ಕಾಯುವ ವ್ಯಕ್ತಿ ಮೇಲೆ ಆನೆ ದಾಳಿ: ತೀವ್ರ ಗಾಯ


ಕೊಡಿಹಳ್ಳಿ ಹೋಬಳಿಯ ಹುಣಸನಹಳ್ಳಿ ಗ್ರಾಮದ ಚಿನ್ನಮಾರಯ್ಯ ಉರುಫ್‌ ಕೂರಣ್ಣ ಗಂಭೀರ ಗಾಯಗೊಂಡವರು.

ಬನ್ನೇರುಘಟ್ಟ ರಾಷ್ಟ್ರೀಯಾ ಉದ್ಯಾನವನದ ಕೋಡಿಹಳ್ಳಿ ವಲಯಾರಣ್ಯದ ನೇರಳಹಟ್ಟಿ ಹುಣಸನಹಳ್ಳಿ ಅರಣ್ಯ ಪ್ರದೇಶದ ಬಳಿ ದನಮೇಯಿಸಲು ಹೋದಾಗ ಗುರುವಾರ ಘಟನೆ ನಡೆದಿದ್ದು, ಸ್ಥಳೀಯರು ಬೊಬ್ಬೆ ಹಾಕಿದ್ದರಿಂದ ಕಾಡಾನೆಯಿಂದ ಆಗಬಹುದಾದ ಹೆಚ್ಚಿನ ಅನಾಹುತ ತಪ್ಪಿದೆ. ಎಡಗಾಲು ಮುರಿದಿದ್ದು, ಕನಕಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬೆಂಗಳೂರಿನ ಸಂಜಯ್‌ಗಾಂಧಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೂರು ದಾಖಲು: ಘಟನೆ ಸಂಬಂಧ ಕೋಡಿಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆ ದಾಳಿಯಿಂದ ಚಿನ್ನಮಾರಯ್ಯ ಅವರ ಎಡಗಾಲುಮುರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಕುಟುಂಬಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಬಿ.ಎಸ್‌.ಪಿ. ರಾಜ್ಯ ಪ್ರಧಾನ ಕಾರ‍್ಯದರ್ಶಿ ಮಲ್ಲಿಕಾರ್ಜುನ್‌ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ