ಆ್ಯಪ್ನಗರ

ಬಾಳೆ ತೋಟಕ್ಕೆ ಆನೆಗಳ ದಾಳಿ: ಲಕ್ಷಾಂತರ ರೂ. ನಷ್ಟ

ತಾಲೂಕಿನ ಸಿಂಗರಾಜಿಪರ ಗ್ರಾಮದಲ್ಲಿ ರೈತರ ಬಾಳೆ ತೋಟಕ್ಕೆ ನುಗ್ಗಿದ ಆನೆಗಳು, ಕಟಾವಿಗೆ ಬಂದಿದ್ದ ಬಾಳೆ ಗಿಡ ಮತ್ತು ಗೊನೆ ತಿಂದು ಹಾಕಿ, ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶ ಮಾಡಿವೆ.

Vijaya Karnataka 26 Jul 2019, 5:00 am
ಚನ್ನಪಟ್ಟಣ: ತಾಲೂಕಿನ ಸಿಂಗರಾಜಿಪರ ಗ್ರಾಮದಲ್ಲಿ ರೈತರ ಬಾಳೆ ತೋಟಕ್ಕೆ ನುಗ್ಗಿದ ಆನೆಗಳು, ಕಟಾವಿಗೆ ಬಂದಿದ್ದ ಬಾಳೆ ಗಿಡ ಮತ್ತು ಗೊನೆ ತಿಂದು ಹಾಕಿ, ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶ ಮಾಡಿವೆ.
Vijaya Karnataka Web elephants attacks on banana plantation lakhs of rs loss
ಬಾಳೆ ತೋಟಕ್ಕೆ ಆನೆಗಳ ದಾಳಿ: ಲಕ್ಷಾಂತರ ರೂ. ನಷ್ಟ


ಸಿಂಗರಾಜಪುರ ಗ್ರಾಮದ ಶಿವಲಿಂಗಮ್ಮ ಮತ್ತು ಶಿವಲಿಂಗರ ಪಾಪಣ್ಣ ಎಂಬುವರ ತಲಾ ಎರಡು ಎಕರೆ ಜಮೀನಿನಲ್ಲಿ ಬಾಳೆ ತೋಟಕ್ಕೆ ನುಗ್ಗಿದ ಗಜ ಪಡೆ ಸುಮಾರು 500ಕ್ಕೂ ಹೆಚ್ಚು ಕಟಾವಿನ ಹಂತಕ್ಕೆ ಬಂದಿದ್ದ ಬಾಳೆ ಗೊನೆಗಳನ್ನು ತಿಂದುಹಾಕಿದ್ದು, ಸಂಪೂರ್ಣ ಬೆಳೆ ನಾಶ ಮಾಡಿ ದ್ವಂಸಗೊಳಿಸಿವೆ. ಇದರಿಂದ ರೈತರಿಗೆ ಎರಡು ಲಕ್ಷ ಕ್ಕೂ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಕಬ್ಬಾಳು ಅರಣ್ಯ ಪ್ರದೇಶದಿಂದ ಹನಿಯೂರು ಗ್ರಾಮದ ಮೂಲಕ ಬಂದಿರುವ ಹತ್ತಕ್ಕೂ ಹೆಚ್ಚು ಆನೆಗಳು ರೈತರ ತೋಟಗಳಿಗೆ ನುಗ್ಗಿ ದಾರಿಯಲ್ಲಿ ಸಿಕ್ಕಸಿಕ್ಕ ತೋಟಗಳಲ್ಲಿ ಹಲವಾರು ಬೆಳೆಗಳನ್ನು ತಿಂದು ತುಳಿದು ನಾಶ ಮಾಡಿವೆ. ಇದರಿಂದ ರೈತರು ಆರ್ಥಿಕ ನಷ್ಟದ ಜತೆಗೆ ತಾವು ಕಷ್ಟಪಟ್ಟು ಬೆಳೆದ ಬೆಳೆಗಳು ಕೈಸಿಕ್ಕಿಲ್ಲ. ತೋಟ ತುಡಿಕೆಗಳಿಗೆ ಹೋದರೆ ಯಾವ ಕ್ಷ ಣದಲ್ಲಿ ನಮ್ಮ ಮೇಲೆ ದಾಳಿ ಮಾಡಿ, ಪ್ರಾಣ ಕಳೆದುಕೊಳ್ಳುವ ಭಯದಿಂದ ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ನಿತ್ಯ ನಡೆಯುತ್ತಿರುವ ಆನೆ ದಾಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಿಲ್ಲ ಎಂದು ಆರೋಪಿಸಿದರು. ಇನ್ನು ಮುಂದಾದರು ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚಿನ ಪರಿಹಾರ ಕೊಡಿಸಿಕೊಡುವುದರ ಜತೆಗೆ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ