ಆ್ಯಪ್ನಗರ

ಕದಳಿವನದಲ್ಲಿ ಮದ್ದಾನೆಗಳ ದಂಡು, ಬೆಳೆದು ನಿಂತಿದ್ದ ಫಸಲು ನಾಶ

ರೈತರ ಬಾಳೆ ತೋಟಕ್ಕೆ ನುಗ್ಗಿದ ಆನೆಗಳು, ಕಟಾವಿಗೆ ಬಂದಿದ್ದ ಬಾಳೆ ಗಿಡ ತಿಂದು ಹಾಕಿ ಲಕ್ಷಾಂತರ ರೂ ಮೌಲ್ಯದ ಬೆಳೆ ನಾಶ ಮಾಡಿವೆ...

Vijaya Karnataka 23 Jul 2019, 5:00 am
ಚನ್ನಪಟ್ಟಣ: ರೈತರ ಬಾಳೆ ತೋಟಕ್ಕೆ ನುಗ್ಗಿದ ಆನೆಗಳು, ಕಟಾವಿಗೆ ಬಂದಿದ್ದ ಬಾಳೆ ಗಿಡ ತಿಂದು ಹಾಕಿ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶ ಮಾಡಿವೆ.
Vijaya Karnataka Web elephants swarm in the field destroying the standing crop
ಕದಳಿವನದಲ್ಲಿ ಮದ್ದಾನೆಗಳ ದಂಡು, ಬೆಳೆದು ನಿಂತಿದ್ದ ಫಸಲು ನಾಶ


ತಾಲೂಕಿನ ವಿರುಪಸಂದ್ರ ಗ್ರಾಮದ ಮಾಸ್ತಿಗೌಡ ಎಂಬವರಿಗೆ ಸೇರಿದ ಎರಡು ಎಕರೆ ಬಾಳೆ ತೋಟ, ಮದ್ದಾನೆಗಳ ದಾಳಿಯಲ್ಲಿ ಸಂಪೂರ್ಣ ನಾಶಗೊಂಡಿದೆ. ಬಾಳೆ ತೋಟಕ್ಕೆ ನುಗ್ಗುವ ಭರದಲ್ಲಿ ಆನೆಗಳು ಕಬ್ಬಿಣದ ಗೇಟ್‌ ಮುರಿದು ಹಾಕಿವೆ.

ನಿತ್ಯ ಬೆಳೆ ನಾಶ:

ತಾಲೂಕಿನ ವಿರುಪಸಂದ್ರ, ಬೈರಶೆಟ್ಟಹಳ್ಳಿ, ಬಿ.ವಿ.ಹಳ್ಳಿ ಸುತ್ತಲಿನ ಗ್ರಾಮಗಳಲ್ಲಿನ ಹೊಲಗಳ ಮೇಲೆ ಆನೆಗಳು ನಿರಂತರ ದಾಳಿ ನಡೆಸುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ರೈತರಿಗೆ ಪೂರ್ತಿಯಾಗಿ ಬೆಲೆ ಕೈಗೆ ಸಿಕ್ಕಿದ್ದೇ ಇಲ್ಲ. ಕಷ್ಟಪಟ್ಟು ಬೆಳೆದಿದ್ದ ಜೋಳ, ಟೊಮೆಟೊ, ಮಾವು, ಬಾಳೆ, ಸಪೋಟ, ತೆಂಗನ್ನು ಆನೆಗಳು ತಿಂದು ತುಳಿದು ನಾಶಪಡಿಸುತ್ತಿವೆ.

ಕಾಡಿಗೆ ಅಟ್ಟಲು ವಿಫಲ:

ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿರುವ ಪ್ರಯತ್ನ ವಿಫಲವಾಗುತ್ತಿದೆ. ಕಷ್ಟಪಟ್ಟು ಕಾಡಿಗೆ ಅಟ್ಟಿದರೂ, ಎರಡು ದಿನಗಳೊಳಗೆ ಆನೆಗಳು ಮತ್ತೆ ವಾಪಸ್‌ ಬರುತ್ತಿವೆ. ಮೊದಲೆಲ್ಲಾ ಪಟಾಕಿ ಸದ್ದಿಗೆ ಹೆದರುತ್ತಿದ್ದ ಆನೆಗಳು ಈಗ ಅದಕ್ಕೂ ಬಗ್ಗುತ್ತಿಲ್ಲ. ರೈತರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸುತ್ತಿದ್ದರೆ ಇಂಪಾದ ಸಂಗೀತ ಕೇಳುತ್ತಾ ಊಟ ಮಾಡುವಂತೆ ನಿಶ್ಚಿಂತೆಯಿಂದ ಫಸಲು ಮೇಯುತ್ತಿವೆ.

ಏನಾದರೂ ಮಾಡಿ ಪ್ಲೀಸ್‌:

ಆನೆ, ಚಿರತೆ, ಕರಡಿ ದಾಳಿಗಳಿಮದ ಹೈರಾಣವಾಗಿ ಹೋಗಿರುವ ರೈತರು, ವನ್ಯಪ್ರಾಣಿಗಳ ಹಾವಳಿಯಿಂದ ಹೇಗಾದರೂ ರಕ್ಷಣೆ ನೀಡಿ ಎಂದು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಮೊರೆ ಇಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ