ಆ್ಯಪ್ನಗರ

ರೇಷ್ಮೆ ಬೆಳೆಗಾರರಿಗೆ ಗುಡ್ ನ್ಯೂಸ್: ಸರ್ಕಾರಿ ರೇಷ್ಮೆ ಮಾರುಕಟ್ಟೆಯಲ್ಲಿ ಇ-ಪೇಮೆಂಟ್‌ ಜಾರಿ!

ರಾಜ್ಯದ ಎಲ್ಲಾ ಸರಕಾರಿ ರೇಷ್ಮೆ ಮಾರುಕಟ್ಟೆಯಲ್ಲಿ ಇ ಪೇಮೆಂಟ್ ಜಾರಿಗೊಳಿಸುವಂತೆ ಸರ್ಕಾರ ಆದೇಶ ನೀಡಿದ್ದು, ಸರಕಾರದ ಈ ಆದೇಶದಿಂದ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಕೆಲ ಕಾಲ ಗೊಂದಲ ಏರ್ಪಟ್ಟ ಘಟನೆ ನಡೆಯಿತು.

Vijaya Karnataka Web 21 Jan 2021, 1:11 pm
ರಾಮನಗರ: ರಾಜ್ಯದ ಎಲ್ಲಾ ಸರಕಾರಿ ರೇಷ್ಮೆ ಮಾರುಕಟ್ಟೆಯಲ್ಲಿ ಬುಧವಾರದಿಂದ ಇ ಪೇಮೆಂಟ್‌ ಜಾರಿಗೊಳಿಸುವಂತೆ ರಾಜ್ಯ ಸರಕಾರ ಆದೇಶ ನೀಡಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಗೂಡು ವಹಿವಾಟಿನ ವೇಳೆ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು, ಇ ಪೇಮೆಂಟ್‌ ವ್ಯವಸ್ಥೆ ಜಾರಿಗೆ ಬರಬೇಕು ಎಂದು ರೇಷ್ಮೆ ಇಲಾಖೆ ಆಯುಕ್ತರು ಮತ್ತು ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.

ಗೊಂದಲ-ಗಲಾಟೆ- ಸಮಾಧಾನ
ಸರಕಾರದ ಈ ಆದೇಶದಿಂದ ಬುಧವಾರ ರೇಷ್ಮೆ ಮಾರುಕಟ್ಟೆಯಲ್ಲಿ ಕೆಲ ಕಾಲ ಗೊಂದಲ ಏರ್ಪಟ್ಟಿತ್ತು. ಮಾರುಕಟ್ಟೆಯಲ್ಲಿ ಎಂದಿನಂತೆ ವಹಿವಾಟು ನಡೆಯುತ್ತಿತ್ತು. ಬೆಳೆಗಾರರಿಗೆ ಗೂಡು ಖರೀದಿಸಿದ ರೀಲರ್ಸ್‌ಗಳಿಗೆ ಇ ಪೇಮೆಂಟ್‌ ಮೂಲಕವೇ ರೈತರಿಗೆ ಹಣ ಸಂದಾಯ ಮಾಡುವಂತೆ ಅಧಿಕಾರಿಗಳು ತಾಕೀತು ಮಾಡಿದರು. ಅದುವರೆಗೆ ಗೂಡು ಖರೀದಿಗೆ ಅವಕಾಶವಿಲ್ಲ ಎಂದು ಖಂಡತುಂಡವಾಗಿ ಹೇಳಿದರು. ಇದರಿಂದ ಬೇಸತ್ತ ರೀಲರ್ಸ್ ಗಳು, ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಮಾರುಕಟ್ಟೆಯಿಂದ ಹೊರ ನಡೆದರು. ಗೂಡು ಮಾರಾಟವಾಗದೇ ಉಳಿದಿದ್ದನ್ನು ಗಮನಿಸಿದ ರೈತರು, ಸಿಟ್ಟಿಗೆದ್ದು ಬೆಂಗಳೂರು-ಮೈಸೂರು ಹೆದ್ದಾರಿ ತಡೆಗೆ ಮುಂದಾದರು. ತಕ್ಷಣವೇ ಮಧ್ಯ ಪ್ರವೇಶಿಸಿದ ಅಧಿಕಾರಿಗಳು ರೈತರನ್ನು ಸಮಾಧಾನಪಡಿಸಿದರು.

ರೀಲರ್ಸ್ ಗಳ ಆಕ್ರೋಶ
ಅಧಿಕಾರಿಗಳ ವರ್ತನೆಯಿಂದ ಆಕ್ರೊಶಗೊಂಡ ರೀಲರ್ಸ್ ಗಳು, ರೇಷ್ಮೆ ಬೆಳೆಗಾರರ ಸಮಸ್ಯೆ ಆಲಿಸುವಂತೆಯೇ ಸರಕಾರ ನಮ್ಮ ಸಮಸ್ಯೆಯನ್ನೂ ಆಲಿಸಿ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಅಷ್ಟೇ ಅಲ್ಲದೇ, ರೇಷ್ಮೆ ಇಲಾಖೆಯ ಆಯುಕ್ತರು ಹಾಗೂ ಕಾರ‍್ಯದರ್ಶಿಗಳನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿದರು. ಬಳಿಕ ರೇಷ್ಮೆ ಮಾರುಕಟ್ಟೆಯಲ್ಲಿ ಆಫ್‌ಲೈನ್‌ನಲ್ಲೇ ವಹಿವಾಟು ನಡೆಯಿತು.
ರಾಮನಗರದಲ್ಲಿ ರೇಷ್ಮೆ ಮಾರುಕಟ್ಟೆಗೆ ಡಿಪಿಆರ್‌ ಸಿದ್ಧ: ಡಿಸಿಎಂ ಅಶ್ವತ್ಥ ನಾರಾಯಣ
ಮಾರುಕಟ್ಟೆಯಲ್ಲಿ ಇ ಪೇಮೆಂಟ್‌ ಜಾರಿ ತರುವ ಕುರಿತು ಕಳೆದ 10 ದಿನಗಳಿಂದ ಪ್ರಚಾರ ನಡೆಸಲಾಗಿದೆ. ಹಣ ಪಾವತಿ ಕುರಿತು ಸಾಕಷ್ಟು ಮಾಹಿತಿ ನೀಡಲಾಗಿದೆ.
ಮುನ್ಷಿ ಬಸಯ್ಯ, ಉಪನಿರ್ದೇಶಕ, ಸರಕಾರಿ ರೇಷ್ಮೆ ಮಾರುಕಟ್ಟೆ, ರಾಮನಗರ
ರೇಷ್ಮೆ ಗೂಡು ಧಾರಣೆ ಕುಸಿತ, ಹಿಪ್ಪು ನೇರಳೆ ಸೊಪ್ಪು ಕೇಳುವವರೇ ಇಲ್ಲ: ಸಂಕಷ್ಟದಲ್ಲಿ ಬೆಳೆಗಾರ!ಗೂಡು ಮಾರಾಟ ಮಾಡುವ ದಿನವೇ ಹಣ ರೈತರ ಖಾತೆಗೆ ಬರುವ ವ್ಯವಸ್ಥೆ ಮಾಡಬೇಕು ಎಂಬ ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ರೈತರಿಗೆ ನೇರವಾಗಿ ಹಣಕೊಟ್ಟು ಗೋಡನ್ನು ಖರೀದಿಸುವ ರೀಲರ್ಸ್ ಗಳಿಗೆ ರೈತರ ಬ್ಯಾಂಕ್‌ ಖಾತೆಗೆ ಹಣ ಹಾಕಲು ತೊಂದರೆ ಏನು ಎಂಬುದು ತಿಳಿಯುತ್ತಿಲ್ಲ.
ಗೌತಮ್‌ ಗೌಡ, ರೇಷ್ಮೇ ಮಾರುಕಟ್ಟೆ ಇಂಟಲಿಜೆನ್ಸ್‌ನ ರಾಜ್ಯ ಸಮಿತಿ ಸದಸ್ಯ, ರಾಮನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ