ಆ್ಯಪ್ನಗರ

ಪ್ರತಿಯೊಬ್ಬರಿಗೂ ಕರಾಟೆಯಂತಹ ಜೀವ ರಕ್ಷಕ ಕಲೆ ಅಗತ್ಯ

ಜೀವನದಲ್ಲಿಪ್ರತಿಯೊಬ್ಬರೂ ಕರಾಟೆಯಂತಹ ಆತ್ಮರಕ್ಷಣೆ ಕಲೆ ಕಲಿಯುವ ಅಗತ್ಯವಿದೆ ಎಂದು ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ನಂಜುಂಡ ಹೇಳಿದರು.

Vijaya Karnataka 29 Aug 2019, 3:45 pm
ಚನ್ನಪಟ್ಟಣ: ಜೀವನದಲ್ಲಿಪ್ರತಿಯೊಬ್ಬರೂ ಕರಾಟೆಯಂತಹ ಆತ್ಮರಕ್ಷಣೆ ಕಲೆ ಕಲಿಯುವ ಅಗತ್ಯವಿದೆ ಎಂದು ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ನಂಜುಂಡ ಹೇಳಿದರು.
Vijaya Karnataka Web everyone needs a life saving art like karate
ಪ್ರತಿಯೊಬ್ಬರಿಗೂ ಕರಾಟೆಯಂತಹ ಜೀವ ರಕ್ಷಕ ಕಲೆ ಅಗತ್ಯ


ಪಟ್ಟಣದ ಪುರಭವನದಲ್ಲಿಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದ ಆಶ್ರಯದಲ್ಲಿನ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ -2019ರ ಮಕ್ಕಳ ಕರಾಟೆ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾನಸಿಕ ಸ್ಥೈರ‍್ಯ:

ಕರಾಟೆಯಿಂದ ಕೇವಲ ಆತ್ಮರಕ್ಷಣೆಯಷ್ಟೇ ಉಪಯೋಗವಲ್ಲ, ಇದರಿಂದ ಮಾನಸಿಕ ಸ್ಥೈರ‍್ಯವೂ ಹೆಚ್ಚುತ್ತದೆ. ಶರೀರವೂ ಸದೃಢವಾಗುತ್ತದೆ. ಕರಾಟೆ ಕಲಿತರೆ ತಾವು ಮಾತ್ರವಲ್ಲದೇ ಅಪಾಯದಲ್ಲಿರುವ ಇತರರನ್ನೂ ರಕ್ಷಿಸಲು ಸಾಧ್ಯವಾಗುತ್ತದೆ ಎಂದರು.

ಸೋತರೆ ಕುಗ್ಗಬೇಡಿ:

ಸೋಲು, ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಸ್ಪರ್ಧೆಯಲ್ಲಿಸೋತಾಗ ಕುಗ್ಗಬಾರದು, ಗೆದ್ದಾಗ ಹಿಗ್ಗ ಬಾರದು. ಸೋಲೇ ಗೆಲುವಿನ ಸೋಪಾನ ಎಂದು ಸಾಧನೆಯತ್ತ ಮುಖ ಮಾಡಬೇಕು ಎಂದು ಕರಾಟೆ ಸ್ಪಧಿರ್ಧಿಗಳಿಗೆ ಕಿವಿ ಮಾತು ಹೇಳಿದರು.

ಗುರು, ಗುರಿಯಿಂದ ಯಶಸ್ಸು:

ನಿವೃತ್ತ ಪ್ರಭಾರ ದೈಹಿಕ ಪರಿವೀಕ್ಷಕ ಪ್ರದೀಪ್‌ಕುಮಾರ್‌ ಮಾತನಾಡಿ, ಶಿಕ್ಷಣದ ಜತೆಗೆ ಪೂರಕ ಶಿಕ್ಷಣವಾಗಿರುವ ಪ್ರತಿಯೊಂದು ಕ್ರೀಡೆಗಳು ಎಲ್ಲವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ. ಜೀವನಕ್ಕೆ ಗುರು,ಗುರಿ ಇರಬೇಕು ಹಾಗೂ ಸಾಧಿಧಿಸುವ ಛಲದ ಜತೆಗೆ ಸಂಯಮ, ಶ್ರಧ್ದೆ ಇದ್ದರೆ ಯಾವುದೇ ರಂಗದಲ್ಲಿಯಶಸ್ಸು ಸಾಧಿಸಬಹುದು ಎಂದರು.

ವ್ಯಂಗ್ಯಚಿತ್ರಕಾರ ಅಕ್ಕೂರ್‌ರಮೇಶ್‌ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತಗೆ ಹಲವಾರು ರೀತಿಯ ಕ್ರೀಡೆಗಳ ತರಬೇತಿ ನೀಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಮೊದಲು ತಮ್ಮ ಮಕ್ಕಳಿಗೆ ಸಂಸ್ಕಾರದ ಪಾಠವನ್ನು ಹೇಳಿಕೊಡುವುದು ಅತೀ ಅಗತ್ಯ ಎಂದರು.

ವೇದಿಕೆಯಲ್ಲಿಕರಾಟೆ ಶಿಕ್ಷಕರಾದ ಕೃಷ್ಣಮೂರ್ತಿ, ವಿರುಪಾಕ್ಷ ಆನಂದ್‌, ನವೀನ್‌, ಉಮೇಶ್‌, ದಯಾನಂದ್‌, ಷರೀಫ್‌, ಸತೀಶ್‌, ಲೋಕೇಶ್‌ ಹಾಗೂ ಇನ್ನೂ ಹಲವಾರು ಮಂದಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ