ಆ್ಯಪ್ನಗರ

ರೇಷ್ಮೆ ಸೀರೆ, ಚನ್ನಪಟ್ಟಣ ಆಟಿಕೆಗಳ ಪ್ರದರ್ಶನ; ಪ್ರವಾಸೋದ್ಯಮ ಇಲಾಖೆಯಿಂದ ವಿನೂತನ ಟ್ರಿಪ್‌!

ಕೆಎಸ್‌ಟಿಡಿಸಿ ಮೂಲಕ ಪ್ರವಾಸಿಗರನ್ನು ಜಿಲ್ಲೆಗೆ ಕರೆತಂದು, ಏಷ್ಯದ ಅತೀ ದೊಡ್ಡ ಮಾರುಕಟ್ಟೆಯಾದ ರಾಮನಗರ ರೇಷ್ಮೆ ಮಾರುಕಟ್ಟೆಯ ಪರಿಚಯ, ಪಿಲೆಚೆರಿಗಳ ದರ್ಶನ, ಗೊಂಬೆಗಳ ಇತಿಹಾಸ ತಿಳಿಸುವ ಮೂಲಕ ಪ್ರವಾಸೋಧ್ಯಮ ಅಭಿವೃದ್ಧಿ ಹಾಗು ಜಿಲ್ಲೆಯ ಹೆಸರು ಇನ್ನಷ್ಟು ಪ್ರಸಿದ್ದಿಗೊಳ್ಳಲಿದೆ.

Vijaya Karnataka 20 Nov 2021, 2:48 pm
ರಾಮನಗರ: ರೇಷ್ಮೆ ಸೀರೆ ಬಗ್ಗೆ ಬಹುತೇಕರಿಗೆ ತಿಳಿದಿದೆ. ಜತೆಗೆ, ಚನ್ನಪಟ್ಟಣದ ಆಟಿಕೆ ಬಗ್ಗೆಯು ಕೇಳಿದ್ದಾರೆ. ಆದರೆ, ಅವುಗಳನ್ನು ಸಿದ್ದಪಡಿಸುವುದು ಹೇಗೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅದರ ಹಿಂದಿನ ಶ್ರಮದ ಬಗ್ಗೆ ಅರಿವಿಲ್ಲ. ಹೀಗಾಗಿ ರೇಷ್ಮೆ ಖ್ಯಾತಿಯ ರಾಮನಗರದಲ್ಲಿ ಇವುಗಳನ್ನು ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಹೊಸ ಪ್ರವಾಸದ ಪ್ಯಾಕೇಜ್‌ ಸಿದ್ದಗೊಳ್ಳುತ್ತಿದೆ.
Vijaya Karnataka Web ಚನ್ನಪಟ್ಟಣ ಟಾಯ್ಸ್
ಸಾಂದರ್ಭಿಕ ಚಿತ್ರ


ಜನರ ಜೀವನವಾದ ರೇಷ್ಮೆ
ಜಿಲ್ಲೆಯಲ್ಲಿ 26 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ಚನ್ನಪಟ್ಟಣದಲ್ಲಿ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಕುಶಲ ಕಲೆಗಳ ಮೂಲಕ ಗೊಂಬೆಗಳನ್ನು ತಯಾರಿಸುತ್ತಿದ್ದಾರೆ. ಇದರೊಂದಿಗೆ ನೂರಾರು ಪಿಲೇಚೆರಿಗಳ ಮೂಲಕ ಸಾವಿರಾರು ಮಂದಿ ಜೀವನ ಕಟ್ಟಿಕೊಂಡಿದ್ದಾರೆ. ಇವರುಗಳ ಹಾಗು ರೇಷ್ಮೆ - ಚನ್ನಪಟ್ಟಣದ ಗೊಂಬೆಗಳ ಪರಿಚಯದ ಮೂಲಕ ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಅಭಿವೃದ್ದಿ ಪಡಿಸಲು ಇಲಾಖೆ ಮುಂದಾಗಿದೆ.

ರೇಷ್ಮೆ ಇತಿಹಾಸ ಪರಿಚಯ
ಕೆಎಸ್‌ಟಿಡಿಸಿ ಮೂಲಕ ಪ್ರವಾಸಿಗರನ್ನು ಜಿಲ್ಲೆಗೆ ಕರೆತಂದು, ಏಷ್ಯದ ಅತೀ ದೊಡ್ಡ ಮಾರುಕಟ್ಟೆಯಾದ ರಾಮನಗರ ರೇಷ್ಮೆ ಮಾರುಕಟ್ಟೆಯ ಪರಿಚಯ, ಪಿಲೆಚೆರಿಗಳ ದರ್ಶನ, ಗೊಂಬೆಗಳ ಇತಿಹಾಸ ತಿಳಿಸುವ ಮೂಲಕ ಪ್ರವಾಸೋಧ್ಯಮ ಅಭಿವೃದ್ಧಿ ಹಾಗು ಜಿಲ್ಲೆಯ ಹೆಸರು ಇನ್ನಷ್ಟು ಪ್ರಸಿದ್ದಿಗೊಳ್ಳಲಿದೆ.
ಹರವೆ ಹೋಬಳಿಯಲ್ಲೂ ರೇಷ್ಮೆ ಕೃಷಿ ಅವಲಂಬನೆ; ರೇಷ್ಮೆ ಬೆಳೆಯಿಂದ ಅಧಿಕ ಆದಾಯ ಪಡೆಯೋದು ಹೇಗೆ?!
ಹೇಗಿರಲಿದೆ ಪ್ರವಾಸ?
ಕೆಎಸ್‌ಟಿಡಿಸಿ ಮೂಲಕ ಬೆಂಗಳೂರು ಮಂದಿಗೆ ಒಂದು ದಿನದ ಟ್ರಿಪ್‌ ರೂಪುಗೊಳ್ಳಲಿದೆ. ಪ್ರವಾಸಿಗರನ್ನು ಬೆಂಗಳೂರಿನ ಕುಮಾರಕೃಪಾ ಗೃಹದಿಂದ ಬಸ್‌ ಮೂಲಕ ರಾಮನಗರಕ್ಕೆ ಕರೆತಂದು ಬಸವನಪುರ, ಮಾದಾಪುರ ಸೇರಿದಂತೆ ಇನ್ನಿತರ ಪ್ರದೇಶ ಹಿಪ್ಪು ನೇರಳೆ ತೋಟ, ಹಾಗೂ ರೇಷ್ಮೆ ಹುಳುವಿನ ಮನೆಯ ದರ್ಶನ ಮಾಡಿಸಲಾಗುವುದು. ರೇಷ್ಮೆ ಹುಳುಗಳನ್ನು ಸಾಕುವುದನ್ನು ವಿವರಿಸಲಾಗುವುದು. ನಂತರ ರೇಷ್ಮೆ ಮಾರುಕಟ್ಟೆ, ಇಲ್ಲಿನ ಹರಾಜು ಪ್ರಕ್ರಿಯೆ, ಬಳಿಕ ಪಿಲೇಚರಿಗಳ ಮೂಲಕ ರೇಷ್ಮೆ ನೂಲು ಬಿಚ್ಚುವ ಪ್ರಕ್ರಿಯೆಗಳನ್ನು ವಿವರಿಸಲಾಗುವುದು. ಬಳಿಕ ಚನ್ನಪಟ್ಟಣದ ಸೀರೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ, ಸ್ಪನ್‌ ಸಿಲ್ಕ್ ಮಿಲ್ಕ್ ಆವರಣದಲ್ಲಿರುವ ಮೈಸೂರು ಸಿಲ್ಕ್ ಸೀರೆ ಮಾರಾಟ ಮಳಿಗೆ ಮೂಲಕ ಸೀರೆ ಖರೀದಿಗು ಅವಕಾಶ ನೀಡಲಾಗುವುದು. ಇದೇ ವೇಳೆ ಚನ್ನಪಟ್ಟಣದ ಗೊಂಬೆಗಳ ದರ್ಶನ, ಆಟಿಕೆಗಳ ಕ್ಲಸ್ಟರ್‌ಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ. ಇಲ್ಲಿಯು ಸಹ ಚನ್ನಪಟ್ಟಣದ ಗೊಂಬೆಗಳ ಖರೀದಿಗು ಉತ್ತೇಜನ ನೀಡಲಾಗುವುದು.
ಸತತ ಜಡಿಮಳೆಯಿಂದ ಕೈಕೊಟ್ಟ ರೇಷ್ಮೆ ಬೆಳೆ! ಬೆಳೆಗಾರ ಕಂಗಾಲು!
ಮಧ್ಯಾಹ್ನದ ಊಟ
ಇದರೊಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಇಲಾಖೆಯೇ ಮಾಡಲಿದೆ. ಕಡೆಯದಾಗಿ ಜಾನಪದ ಲೋಕದ ದರ್ಶನವನ್ನು ಮಾಡಿಸಲಿದೆ. ಇದಕ್ಕಾಗಿ ಒಂದು ದಿನ ಟೂರ್‌ ಆಯೋಜನೆಗೊಳ್ಳಲಿದ್ದು, 1750 ರೂ.ಗಳ ದರ ನಿಗಧಿ ಪಡಿಸಲಾಗಿದೆ. ಆದರೆ, ಇಲ್ಲಿ 750 ರೂ,ಗಳನ್ನು ರೇಷ್ಮೆ ಕೃಷಿ ಹಾಗೂ ಚನ್ನಪಟ್ಟಣದ ಗೊಂಬೆಗಳ ಬಗ್ಗೆ ಮಾಹಿತಿ ನೀಡುವ ರೈತರು, ಕುಶಲಕರ್ಮಿಗಳಿಗೆ ನೀಡಲಾಗುವುದು.

ಇದು ಉತ್ತಮ ಯೋಜನೆ
ಈ ಹಿಂದೆಯೇ ಈ ಯೋಜನೆ ಜಾರಿಯಾಗಬೇಕಿತ್ತು. ಕೋವಿಡ್‌ನಿಂದ ಸ್ಥಗಿತಗೊಂಡಿತ್ತು. ಈಗ ಮತ್ತೆ ಯೋಜನೆ ಪ್ರಾರಂಭಗೊಳ್ಳಲಿದ್ದು, ಇನ್ನೊಂದು ವಾರದಲ್ಲಿ ಮೊದಲ ಪ್ರವಾಸ ಆಯೋಜನೆಗೊಳ್ಳಲಿದೆ. ಒನ್‌ ಡೆ ಟೂರ್‌ನಲ್ಲಿ ಈ ಮೊದಲು ಪ್ರವಾಸಿ ತಾಣಗಳನ್ನಷ್ಟೆ ತೋರಿಸಲಾಗುತ್ತಿತು. ಆದರೆ, ಈ ವಿಶೇಷ ಟೂರ್‌ ಮೂಲಕ ಜಿಲ್ಲೆಯ ಇತಿಹಾಸ, ಜಿಲ್ಲೆಯ ಗೊಂಬೆ, ರೇಷ್ಮೆ ಬೆಳೆಗಳ ಪರಿಚಯವು ಪ್ರವಾಸಿಗರಿಗೆ ಆಗಲಿದೆ.
ಸ್ಥಗಿತಗೊಂಡ ಚೀನಾದ ಪೂರೈಕೆ, ವಾರಣಾಸಿಗೆ ಇನ್ಮುಂದೆ ಕರ್ನಾಟಕದಿಂದ ರೇಷ್ಮೆ ?
ಈ ಯೋಜನೆಯನ್ನು ಬೆಂಗಳೂರು ಪ್ರವಾಸಿಗರನ್ನೇ ಕೇಂದ್ರಿಕರಿಸಿ ರೂಪಿಸಲಾಗಿದೆ. ಕೆಎಸ್‌ಟಿಡಿಸಿ ಸಹ ಸಹಕಾರ ನೀಡಿದ್ದು, ಇನ್ನೆನ್ನು ಅನುಷ್ಠಾನಗೊಳ್ಳಲಿದೆ. ಇದರಿಂದ ಜಿಲ್ಲೆಯ ಪ್ರಖ್ಯಾತ ಕೃಷಿ ಹಾಗೂ ಉದ್ದಿಮೆ ಸಹ ಪರಿಚಯವಾಗಲಿದೆ.
ಎಂ.ಎನ್‌.ಹರೀಶ್‌, ಸಹಾಯಕ ನಿರ್ದೇಶಕ
ಪ್ರವಾಸೋದ್ಯಮ ಇಲಾಖೆ, ರಾಮನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ