ಆ್ಯಪ್ನಗರ

ಚುನಾವಣೆಯಲ್ಲಿ ಯಾವುದೇ ಪಕ್ಷ ಬೆಂಬಲಿಸದಿರಲು ರೈತಸಂಘ ನಿರ್ಧಾರ

ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷವನ್ನು ಬೆಂಬಲಿಸದಿರಲು ರೈತ ಸಂಘ ನಿರ್ಧರಿಸಿದೆ. ರೈತ ಸಂಘ ಕೂಡ ಸ್ವಂತ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಅಷ್ಟೇ ಅಲ್ಲ, ರೈತ ಸಂಘದ ಹೆಸರನ್ನು ಯಾವುದೇ ಪಕ್ಷ ಬಳಸಿಕೊಳ್ಳದಿರುವಂತೆ ಎಚ್ಚರಿಕೆಯನ್ನೂ ನೀಡಲಾಯಿತು.

Vijaya Karnataka 28 Mar 2019, 5:00 am
ಕನಕಪುರ: ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷವನ್ನು ಬೆಂಬಲಿಸದಿರಲು ರೈತ ಸಂಘ ನಿರ್ಧರಿಸಿದೆ. ರೈತ ಸಂಘ ಕೂಡ ಸ್ವಂತ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಅಷ್ಟೇ ಅಲ್ಲ, ರೈತ ಸಂಘದ ಹೆಸರನ್ನು ಯಾವುದೇ ಪಕ್ಷ ಬಳಸಿಕೊಳ್ಳದಿರುವಂತೆ ಎಚ್ಚರಿಕೆಯನ್ನೂ ನೀಡಲಾಯಿತು.
Vijaya Karnataka Web farmers decision to not support any party in the election
ಚುನಾವಣೆಯಲ್ಲಿ ಯಾವುದೇ ಪಕ್ಷ ಬೆಂಬಲಿಸದಿರಲು ರೈತಸಂಘ ನಿರ್ಧಾರ


ಲೋಕಸಭೆ ಚುನಾವಣೆ ಕುರಿತಂತೆ ಕನಕಪುರ ಕೃಷಿಉತ್ಪನ್ನ ಮಾರುಕಟ್ಟೆಯ ಸಭಾಂಗಣದಲ್ಲಿ ರೈತರ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ರಾದ ಚೀಲೂರು ಮುನಿರಾಜು ಅವರ ನೇತೃತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳ ಸಭೆ ನಡೆಯಿತು.

ರೈತ ಸಂಘಟನೆ ರಾಜಕೀಯ ಪಕ್ಷ ಗಳಿಂದ ಪ್ರತ್ಯೇಕವಾಗಿದ್ದು, ಮುಂದಿನ ಚುನಾವಣೆಯಲ್ಲಿ ರೈತಸಂಘದ ಹೆಗ್ಗುರುತಾದ ಹಸಿರುಬಣ್ಣದ ಟವೆಲ್‌ನಡಿ ಅಭ್ಯರ್ಥಿಯನ್ನು ಹಾಕಲು ನಿರ್ಧರಿಸಲಾಯಿತು.

ಇಷ್ಟ ಬಂದವರಿಗೆ ಮತ ಚಲಾಯಿಸಿ:

ರೈತರು ತಮಗೆ ಇಷ್ಟ ಬಂದ ಅಭ್ಯರ್ಥಿಗೆ ಮತ ಚಲಾಯಿಸಲು ಸ್ವತಂತ್ರರು. ರೈತ ಸಂಘದ ವತಿಯಿಂದ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗೆ ಬೆಂಬಲವಿಲ್ಲ ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಕೃಷಿ ಮೇಳದಲ್ಲಿ ಪಾಲ್ಗೊಳ್ಳಲು ಮನವಿ:

ರವಿಶಂಕರ ಗುರೂಜಿ ಅವರ ಆರ್ಟ್‌ ಅಫ್‌ ಲಿವಿಂಗ್‌ ಆಶ್ರಮದಲ್ಲಿ ಮಾ.30ರ ಶನಿವಾರ ಕೃಷಿ ಮೇಳ ಆಯೋಜನೆ ಮಾಡಲಾಗಿದ್ದು, ಇದರಲ್ಲಿ ಪ್ರತಿಯೊಬ್ಬ ರೈತರೂ ಪಾಲ್ಗೊಂಡು ವೈಜ್ಞಾನಿಕ ಕೃಷಿ ಬಗ್ಗೆ ತಿಳಿದುಕೊಳ್ಳಬೇಕು ಎಂದು ಮನವಿ ಮಾಡಲಾಯಿತು.

ಬೆಸ್ಕಾಂ ವಿರುದ್ಧ ಪ್ರತಿಭಟನೆಗೆ ನಿರ್ಣಯ:

ತಾಲೂಕಿನಲ್ಲಿ ಟ್ರಾನ್ಸ್‌ಫಾರ್ಮರ್‌ ಸಮಸ್ಯೆ ಸಹಿತ ವಿದ್ಯುತ್‌ ಸಮಸ್ಯೆ ತೀವ್ರಗೊಂಡಿದ್ದು, ರೈತರ ಕೃಷಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಬೆಸ್ಕಾಂ ವಿರುದ್ದ ಪ್ರತಿಭಟನೆಗೆ ಸನ್ನದ್ಧರಾಗಲು ರೈತರಿಗೆ ಕರೆ ನೀಡಲಾಯಿತು.

ರೈತರ ಕೈಸೇರದ ಸಬ್ಸಿಡಿ:

ಇನ್ನು ಕಳೆದ ಬಜೆಟ್‌ನಲ್ಲಿ ಘೋಷಣೆಯಾದ ರೇಷ್ಮೆ ಬೆಳೆಯುವ ರೈತರಿಗೆ ಸಬ್ಸಡಿ ಹಣ ಇನ್ನೂ ಕೈಸೇರಿಲ್ಲ. ಅದು ಬರುವ ಲಕ್ಷಣವೂ ಇಲ್ಲ. ರೈತರ ಕಣ್ಣೊರೆಸಲು ಬಜೆಟ್‌ನಲ್ಲಿ ಘೊಷಿಸಿ ನಂತರ ಸುಮ್ಮನಾಗಿದ್ದು ಇದು ರೈತರಿಗೆ ಮಾಡಿದ ವಂಚನೆಯಾಗಿದೆ. ಈ ಬಗ್ಗೆ ಜಿಲ್ಲೆವ್ಯಾಪಿ ಆಂದೋಲನ ಆರಂಬಿಸಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು.

ಸಭೆಯಲ್ಲಿ ಜಿಲ್ಲಾಕಾರ್ಯಧ್ಯಕ್ಷ ಮುನಿರಾಜು, ತಾಲೂಕು ಕಾರ್ಯಧ್ಯಕ್ಷ ಬಸವರಾಜು, ಕೋಡಿಹಳ್ಳಿ ಹೋಬಳಿ ಅಧ್ಯಕ್ಷ ರವಿಕುಮಾರ್‌, ಮಹೇಶ್‌, ಪುಟ್ಟಸ್ವಾಮಿಗೌಡ, ಹರೀಶ್‌, ತಾಲೂಕು ಸಂಘದ ಯುವ ಘಟಕದ ಉಪಾಧ್ಯಕ್ಷ ಸಂತೋಷ್‌, ಮಲ್ಲೇಶ್‌, ಸೇರಿದಂತೆ ಅನೇಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ