ಆ್ಯಪ್ನಗರ

ರೇಷ್ಮೆ ಬೆಳೆಯ ಬೆಂಬಲ ಬೆಲೆ ನಿಗದಿಗೆ ರೈತರು ಒತ್ತಾಯ

ರೇಷ್ಮೆ ಬೆಳೆಗೆ ಬೆಂಬಲ ಬೆಲೆಯಾಗಿ ಕೆಜಿ ಗೂಡಿಗೆ 400 ರೂ ನಿಗದಿಪಡಿಸಬೇಕು ಎಂಬ ಬೇಡಿಕೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೇಷ್ಮೆ ಬೆಳೆಗಾರರ ಸಂಘದ ಪದಾಧಿಕಾರಿಗಳು ರಾಜ್ಯಾಧ್ಯಕ್ಷ ಜಿ. ಮಹೇಂದ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Vijaya Karnataka 24 Jun 2018, 3:24 pm
ರಾಮನಗರ: ರೇಷ್ಮೆ ಬೆಳೆಗೆ ಬೆಂಬಲ ಬೆಲೆಯಾಗಿ ಕೆಜಿ ಗೂಡಿಗೆ 400 ರೂ ನಿಗದಿಪಡಿಸಬೇಕು ಎಂಬ ಬೇಡಿಕೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೇಷ್ಮೆ ಬೆಳೆಗಾರರ ಸಂಘದ ಪದಾಧಿಕಾರಿಗಳು ರಾಜ್ಯಾಧ್ಯಕ್ಷ ಜಿ. ಮಹೇಂದ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Vijaya Karnataka Web farmers insist on price support for silk crop
ರೇಷ್ಮೆ ಬೆಳೆಯ ಬೆಂಬಲ ಬೆಲೆ ನಿಗದಿಗೆ ರೈತರು ಒತ್ತಾಯ


ಜವಳಿಯ ಧಾರಣೆ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್‌ ರಾಜೇಂದ್ರರಿಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು,'ರೇಷ್ಮೆ ಗೂಡು, ರೇಷ್ಮೆ ಹಾಗೂ ಜವಳಿಯ ಧಾರಣೆ ಸ್ಥಿರೀಕರಿಸಲು ಆವರ್ತ ನಿಧಿ ಸ್ಥಾಪಿಸಬೇಕು. ರೇಷ್ಮೆ ಧಾರಣೆ ಹೆಚ್ಚಳ ಮಾಡಿದಲ್ಲಿ ಅದರ ಬಹುಪಾಲು ಲಾಭವು ರೇಷ್ಮೆ ಬೆಳೆಯುವ ರೈತರಿಗೆ ದೊರೆಯುವಂತಿರಬೇಕು.ಯಾಕೆಂದರೆ ಶ್ರಮ ಒಬ್ಬರದು, ಲಾಭ ಇನ್ನೊಬರದು ಎಂಬ ಧೋರಣೆ ತೊಲಗಬೇಕು. ದುಡಿಮೆಗೆ ತಕ್ಕ ಫಲ ಸಿಕ್ಕಾಗ ಮಾತ್ರ ದೇಶಕ್ಕೆ ಬೆನ್ನೆಲುಬಾಗಿದ್ದ ರೈತನ ಉದ್ಧಾರವಾಗಲು ಸಾಧ್ಯ. ಆದ್ದರಿಂದ ಆವರ್ತ ನಿಧಿ ಸ್ಥಾಪನೆ ಮಾಡಬೇಕು,' ಎಂದು ಒತ್ತಾಯಿಸಿದರು.

ಕೃಷಿಕರ ಬದುಕು ಹಸನು: ' ಜಿಲ್ಲೆಯಲ್ಲಿ ರೇಷ್ಮೆಯೇ ಸಾಂಪ್ರದಾಯಿ ಬೆಳೆಯಾಗಿದೆ. ಇದು ನಮ್ಮ ಪೂರ್ವಿಕರು ನಮಗೆ ಬಳುವಳಿಯಾಗಿ ಬಿಟ್ಟುಹೋದ ಕೃಷಿಯಾಗಿದೆ. ಇಂದು ಇಂತಹ ಕೃಷಿ ವಿಧಾನಕ್ಕೆ ಕೆಲವು ದಲ್ಲಾಳಿಗಳಿಂದ ಕಂಟಕ ಎದುರಾಗಿದೆ. ಅದು ಅಧಿಕಾರಿಗಳು ವಲಯಕ್ಕೆ ಗೊತ್ತೇ ಇದೆ. ಇಂತಹ ಕಳಂಕ ತೊಡೆದು ಹಾಕಿದಾಗ ಮಾತ್ರ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಮಾತ್ರಲ್ಲ, ಕೃಷಿಕರ ಬದುಕೂ ಹಸನಾಗುತ್ತದೆ,'ಎಂದು ವ್ಯಾಖ್ಯಾನಿಸಿದರು.

ರೇಷ್ಮೆ ಗೂಡಿಗೆ ಬೆಲೆ ನಿಗದಿ :
'ರೇಷ್ಮೆ ಬೆಳೆಗಾರರ ಹಿತಾಸಕ್ತಿ ರಕ್ಷ ಣೆಗಾಗಿ ಜವಳಿ ಮತ್ತು ರೇಷ್ಮೆ ಸಚಿವರ ಅಧ್ಯP್ಷÜತೆಯಲ್ಲಿ ಸಮಿತಿ ರಚಿಸಬೇಕು. ರೇಷ್ಮೆ ಉದ್ದಿಮೆಯ ಎಲ್ಲಾ ಭಾಗಿದಾರರು ಅದರಲ್ಲಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸುವಂತಿರಬೇಕು. ಗುಣಮಟ್ಟ ಆಧರಿಸಿ, ರೇಷ್ಮೆ ಗೂಡಿಗೆ ಬೆಲೆ ನಿಗದಿ ಪಡಿಸಬೇಕು,'ಎಂದು ಒತ್ತಾಯಿಸಿದರು.

ಬಿಚ್ಚಾಣಿಕೆದಾರರ ಪ್ರತಿನಿಧಿ: 'ರೇಷ್ಮೆ ಗೂಡಿನ ಧಾರಣೆ ಕಡಿಮೆಯಾದಾಗ 400 ರೂಪಾಯಿ ಬೆಂಬಲ ಬೆಲೆ ನೀಡಬೇಕು. ಅದನ್ನು ಗೂಡು ಮಾರಾಟವಾದ ದಿನವೇ ಮಾರುಕಟ್ಟೆಯಲ್ಲಿ ರೈತರಿಗೆ ನೇರವಾಗಿ ವಿತರಿಸಬೇಕು. ಕೆಎಸ್‌ಎಂಬಿ ದರ ನಿಗದಿ ಪಡಿಸುವ ಸಮಿತಿಯಲ್ಲಿ ರೇಷ್ಮೆ ಬೆಳೆಗಾರರು ಮತ್ತು ನೂಲು ಬಿಚ್ಚಾಣಿಕೆದಾರರ ಪ್ರತಿನಿಧಿಗಳನ್ನು ಸೇರಿಸಬೇಕು,' ಎಂದು ಆಗ್ರಹಿಸಿದರು.

ರೇಷ್ಮೆ ಗೂಡು ಬೆಳೆಯುವ ರೈತರಿಗೆ ಸ್ಪರ್ಧಾತ್ಮಕ ಬೆಲೆಗಳು ಸಿಗಬೇಕಾದರೆ ಸಂತೆಮಾರಹಳ್ಳಿ , ಕೊಳ್ಳೇಗಾಲ, ಚಾಮರಾಜನಗರ, ಟಿ.ನರಸಿಪುರ ಹಾಗೂ ಚನ್ನಪಟ್ಟಣದ ಸ್ಪನ್‌ ಸಿಲ್ಕ್‌ ಮಿಲ್‌ ಗಳನ್ನು ಪುನಶ್ಚೇತನಗೊಳಿಸುವಂತೆ ಪದಾಧಿಕಾರಿಗಳು ಒತ್ತಾಯ ಮಾಡಿದರು. ಈ ವೇಳೆ ರೈತಸಂಘ ಅಧ್ಯP್ಷÜ ಲP್ಷÜ್ಮಣಸ್ವಾಮಿ, ಮುಖಂಡರಾದ ಕೂರಣಗೆರೆ ಗೋಪಾಲ್‌ , ಕಾರೇಗೌಡ, ಸಿಂಗ್ರಿಗೌಡ, ವೆಂಕಟೇಶ್‌ , ಎಸ್‌ .ಆರ್‌ .ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ