ಆ್ಯಪ್ನಗರ

ರೈತರ ನೀರಾವರಿ ಪಂಪ್‌ಸೆಟ್‌ಗಳ ಸಮೀಕ್ಷೆ: ಅಗತ್ಯ ದಾಖಲೆ ಒದಗಿಸಲು ಬೆಸ್ಕಾಂ ಮನವಿ

ಕರ್ನಾಟಕ ಸರಕಾರ ರೈತರಿಗೆ ರಿಯಾಯಿತಿ ದರದಲ್ಲಿ ನೀಡಿರುವ ನೀರಾವರಿ ಪಂಪ್‌ಸೆಟ್‌ಗಳ ಸಮೀಕ್ಷೆ ನಡೆಸುತ್ತಿದ್ದು, ಅಗತ್ಯ ದಾಖಲೆಗಳನ್ನು ರೈತರು ಕೂಡಲೇ ಒದಗಿಸುವಂತೆ ಬೆಸ್ಕಾಂ ವತಿಯಿಂದ ಮನವಿ ಮಾಡಲಾಗಿದೆ.

Vijaya Karnataka Web 22 Jan 2020, 5:48 pm
ಕುದೂರು: ಕರ್ನಾಟಕ ಸರಕಾರ ರೈತರಿಗೆ ರಿಯಾಯಿತಿ ದರದಲ್ಲಿ ನೀಡಿರುವ ನೀರಾವರಿ ಪಂಪ್‌ಸೆಟ್‌ಗಳ ಸಮೀಕ್ಷೆ ನಡೆಸುತ್ತಿದ್ದು, ಅಗತ್ಯ ದಾಖಲೆಗಳನ್ನು ರೈತರು ಕೂಡಲೇ ಒದಗಿಸುವಂತೆ ಬೆಸ್ಕಾಂ ವತಿಯಿಂದ ಮನವಿ ಮಾಡಲಾಗಿದೆ.
Vijaya Karnataka Web pumpset


ಕುದೂರು ಬೆಸ್ಕಾಂ ಉಪಕೇಂದ್ರ ವ್ಯಾಪ್ತಿಯ ರೈತರು ಕೂಡಲೇ ಬೆಸ್ಕಾಂ ಶಾಖಾ ಕಚೇರಿ ಇಲ್ಲವೇ ಸಿಬ್ಬಂದಿಗಳೇ ಮನೆ ಬಳಿ ಬಂದಾಗ ಐ ಪಿ ನಂಬರ್‌ (ಆರ್‌ ಆರ್‌ ನಂಬರ್‌) ಮತ್ತು ಹೆಸರು, ಆಧಾರ್‌ ಗುರುತಿನ ಸಂಖ್ಯೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ, ರೇಷನ್‌ ಕಾರ್ಡ್‌ ಸಂಖ್ಯೆ, ಮೊಬೈಲ್‌ ಸಂಖ್ಯೆಯನ್ನು ನೀಡಬೇಕು.

ಮೇಲಿನ ಮಾಹಿತಿಯನ್ನು ಬೆಸ್ಕಾಂ ಸಮೀಕ್ಷೆ ಮೂಲಕ ಸರಕಾರಕ್ಕೆ ಸಲ್ಲಿಸುವುದು ಅಗತ್ಯವಾಗಿರುತ್ತದೆ. ನೀರಾವರಿ ಪಂಪ್‌ ಸೆಟ್‌ಗಳ ವಿದ್ಯುತ್‌ ನಿಲುಗಡೆಯನ್ನು ತಡೆಯಲು ಮಾಹಿತಿ ಅಗತ್ಯವಾಗಿರುತ್ತದೆ. ಒಂದು ವೇಳೆ ಮಾಹಿತಿಯನ್ನು ನೀಡದೇ ಇದ್ದಲ್ಲಿಅಂತಹ ರೈತರ ಅನುದಾನವನ್ನು ಸರಕಾರ ಹಿಂಪಡೆದು ಪಂಪ್‌ಸೆಟ್‌ಗಳ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ಆದ್ದರಿಂದ ರೈತರು ಜರೂರಾಗಿ ಮಾಹಿತಿ ಒದಗಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕುದೂರು ಹೋಬಳಿಯ ರೈತರು/ಗ್ರಾಹಕರು 9880676440, 9449873935, ಸೋಲೂರು ಹೋಬಳಿಯ ರೈತರು/ಗ್ರಾಹಕರು 9731702290, 9008448445, ತಿಪ್ಪಸಂದ್ರ ಹೋಬಳಿಯ ರೈತರು/ಗ್ರಾಹಕರು 9741982168, 9353179763 ಸಂಪರ್ಕಿಸಲು ಬೆಸ್ಕಾಂ ವತಿಯಿಂದ ಪ್ರಕಟಣೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ