ಆ್ಯಪ್ನಗರ

ರೊಚ್ಚಿಗೆದ್ದ ರೈತರಿಂದ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ

ದಿನವಿಡೀ ತಾಲೂಕು ಕಚೇರಿಯಲ್ಲಿ ವಿದ್ಯುತ್‌ ಕೈಕೊಟ್ಟ ಪರಿಣಾಮ ಕಚೇರಿ ಕೆಲಸ ಕಾರ್ಯಗಳು ಸೋಮವಾರ ಸ್ಥಗಿತಗೊಂಡಿದ್ದವು. ಇದರಿಂದ ರೊಚ್ಚಿಗೆದ್ದ ನೂರಾರು ರೈತರು ಸಂಜೆ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 25 Jun 2019, 5:00 am
ಕರೆಂಟಿಲ್ಲದೇ ದಿನವಿಡೀ ಕೆಲಸ ಕಾರ‍್ಯಗಳಿಲ್ಲದೇ ಕಳೆದ ಕಚೇರಿ ಸಿಬ್ಬಂದಿ
Vijaya Karnataka Web farmers strike in front of tehsildars office
ರೊಚ್ಚಿಗೆದ್ದ ರೈತರಿಂದ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ


ರಾಮನಗರ: ದಿನವಿಡೀ ತಾಲೂಕು ಕಚೇರಿಯಲ್ಲಿ ವಿದ್ಯುತ್‌ ಕೈಕೊಟ್ಟ ಪರಿಣಾಮ ಕಚೇರಿ ಕೆಲಸ ಕಾರ್ಯಗಳು ಸೋಮವಾರ ಸ್ಥಗಿತಗೊಂಡಿದ್ದವು. ಇದರಿಂದ ರೊಚ್ಚಿಗೆದ್ದ ನೂರಾರು ರೈತರು ಸಂಜೆ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ವಾರದ ಮೊದಲ ದಿನವಾದ ಸೋಮವಾರ ಹತ್ತಾರು ಕಿ.ಮೀ. ದೂರದ ಗ್ರಾಮಗಳಿಂದ ಖಾತೆ, ಪಹಣಿ ಮತ್ತಿತರ ಪ್ರತಿಗಳನ್ನು ಪಡೆಯಲು ತಾಲೂಕು ಕಚೇರಿಗೆ ರೈತರು ಬಂದಿದ್ದರು. ಮಾಮೂಲಿಯಂತೆ ಬೆಳ್ಳಂ ಬೆಳಗ್ಗೆ ಸರದಿಯಲ್ಲಿ ನಿಂತು ಕಾಯುತ್ತಿದ್ದರು. ಆದರೆ ತಾಲೂಕು ಕಚೇರಿಯ ಕಟ್ಟಡಕ್ಕೆ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡು ಗಣಕ ಯಂತ್ರಗಳು ಸ್ಥಗಿತಗೊಂಡಿದ್ದವು. ಇದರಿಂದ ಕಾದು ಕಾದು ಸುಸ್ತಾಗಿದ್ದ ರೈತರು ಸಂಜೆ ತಹಸೀಲ್ದಾರ್‌ ಕಚೇರಿ ಮುಂದೆ ಜಮಾಯಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರೈತರು ಕಚೇರಿಗೆ ಮುತ್ತಿಗೆ ಹಾಕಿರುವುದನ್ನು ತಿಳಿದ ತಹಸೀಲ್ದಾರ್‌ ಎಸ್‌.ಕೆ.ರಾಜು ಅವರು ತಕ್ಷ ಣ ತಮ್ಮ ಕಚೇರಿಗೆ ಆಗಮಿಸಿದರು. ಭಾನುವಾರ ಮಳೆ ಬಿದ್ದ ಸಂದರ್ಭದಲ್ಲಿ ಕಚೇರಿಯಲ್ಲಿ ಶಾರ್ಟ್‌ ಸರ್ಕೀಟ್‌ ಉಂಟಾಗಿ ಕರೆಂಟ್‌ ಪೂರೈಕೆ ಸ್ಥಗಿತಗೊಂಡಿತ್ತು. ಇದರಿಂದ ಗಣಕ ಯಂತ್ರಗಳು ಕಾರ್ಯನಿರ್ವಹಿಸದ ಕಾರಣ ರೈತರಿಗೆ ಸಮಸ್ಯೆಯಾಗಿದೆ.

ರೈತರಿಗೆ ಆದ ತೊಂದರೆ ಕ್ಷಮೆ ಕೋರುತ್ತೇನೆ, ಬೆಸ್ಕಾಂ ಇಲಾಖೆಗೆ ಈಗಾಗಲೇ ವಿಷಯ ತಿಳಿಸಿದ್ದು, ಮಂಗಳವಾರದ ಹೊತ್ತಿಗೆ ಎಲ್ಲವೂ ಸರಿಯಾಗಲಿದೆ ಎಂದು ತಹಸೀಲ್ದಾರ್‌ ಭರವಸೆ ನೀಡಿದ ಬಳಿಕ ಸಮಾಧಾನಗೊಂಡ ರೈತರು ಅಲ್ಲಿಂದ ತೆರಳಿದರು.

ತಹಸೀಲ್ದಾರ್‌ ಕಚೇರಿಯಲ್ಲಿ ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲದ ಬಗ್ಗೆ ರೈತರ ದೂರಿಗೆ ಸ್ಪಂದಿಸಿದ ರಾಜು, ಶೀಘ್ರವೇ ನೆಲ ಮಹಡಿಯಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಭರವಸೆ ನೀಡಿದರು.

ಆಧಾರ್‌ ನೋಂದಣಿ ಮಾಡದವರಿಗೆ ನೋಟಿಸ್‌ :

ದಿನವಿಡೀ ತಾಲೂಕು ಕಚೇರಿಯಲ್ಲಿ ವಿದ್ಯುತ್‌ ಕೈಕೊಟ್ಟ ಪರಿಣಾಮ ಕಚೇರಿ ಕೆಲಸ ಕಾರ್ಯಗಳು ಸೋಮವಾರ ಸ್ಥಗಿತಗೊಂಡಿದ್ದವು. ಇದರಿಂದ ರೊಚ್ಚಿಗೆದ್ದ ನೂರಾರು ರೈತರು ಸಂಜೆ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಆಧಾರ್‌ ನೋಂದಣಿಗಾಗಿ 8 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಆಧಾರ್‌ ನೋಂದಣಿಗೆ ಸಹಕರಿಸದ ಹಾಗೂ ನಿರಾಕರಿಸುವ ಸಿಬ್ಬಂದಿಗೆ ನೋಟಿಸ್‌ ನೀಡಲಾಗುವುದು ಎಂದು ಅವರು ಹೇಳಿದರು.

ಆಧಾರ್‌ ಕೇಂದ್ರಗಳಿರುವ ಸ್ಥಳಗಳು:

ರಾಮನಗರ ತಾಲೂಕು ವ್ಯಾಪ್ತಿಯ ಬಿಡದಿ, ಕೈಲಾಂಚ, ತಾಲೂಕು ಕಚೇರಿ, ಸಿಂಡಿಕೇಟ್‌ ಬ್ಯಾಂಕ್‌, ಕಾರ್ಪೊರೇಷನ್‌ ಬ್ಯಾಂಕ್‌, ಅಂಚೆ ಕಚೇರಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ಗಳಲ್ಲಿ ಆಧಾರ್‌ ನೋಂದಣಿಗೆ ಅವಕಾಶವಿದೆ. ಮೇಲಿನ ಕೇಂದ್ರಗಳಲ್ಲಿ ನೋಂದಣಿಗೆ ನಿರಾಕರಿಸಿದರೆ ತಕ್ಷ ಣ ದೂರು ನೀಡುವಂತೆ ತಹಸೀಲ್ದಾರ್‌ ರಾಜು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ