- ತಿ.ನಾ ಪದ್ಮನಾಭ, ಮಾಗಡಿ
ರಾಮನಗರ: ಕೇಂದ್ರ ಸರಕಾರದ ಇಂಧನ ಇಲಾಖೆಯ ಅಧೀನದಲ್ಲಿರುವ ಎಲ್ಪಿಜಿ ಸಿಲಿಂಡರ್ ರಿಫಿಲ್ಲಿಂಗ್ ಘಟಕದಲ್ಲೇ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳು ಹಳಿತಪ್ಪಿವೆ. ರಾಮನಗರ ಜಿಲ್ಲೆಯ ಮಾಗಡಿಯ ಸೋಲೂರಿನಲ್ಲಿರುವ ರಾಜ್ಯದ ಎಂಟು ಜಿಲ್ಲೆಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವ ಭಾರತ್ ಪೆಟ್ರೋಲಿಯಂನ ಗ್ಯಾಸ್ ರಿಫಿಲ್ಲಿಂಗ್ ಘಟಕದಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವರು ಕೆಲಸ ಹಾಗೂ ವಿಶ್ರಾಂತಿ ವೇಳೆ ಸಾಮಾಜಿಕ ಅಂತರ ಪಾಲಿಸುತ್ತಿಲ್ಲ, ಸ್ಯಾನಿಟೈಸರ್ ಸೇರಿದಂತೆ ಸೋಂಕು ನಿರೋಧಕ ಕ್ರಮಗಳನ್ನು ಅನುಸರಿಸುತ್ತಿಲ್ಲ. ಅಷ್ಟೇ ಅಲ್ಲ, ರಿಫಿಲ್ಲಿಂಗ್ ಆದ ಸಿಲಿಂಡರ್ಗಳನ್ನು ಕ್ರಿಮಿನಾಶಕ ಸಿಂಪಡಿಸಿ ಸ್ವಚ್ಛಗೊಳಿಸುವ ಕೆಲಸವೂ ನಡೆಯುತ್ತಿಲ್ಲ.
ಗ್ಯಾಸ್ ರಿಫಿಲ್ಲಿಂಗ್ ಘಟಕಕ್ಕೆ ಕೊರೊನಾ ಸೋಂಕು ಹೆಚ್ಚಿರುವ ಕೇರಳದ ಕೊಚ್ಚಿನ್ ಹಾಗೂ ಮಂಗಳೂರಿನಿಂದ ನಿತ್ಯ 30ಕ್ಕೂ ಅಧಿಕ ಟ್ಯಾಂಕರ್ಗಳು ಗ್ಯಾಸ್ ಪೂರೈಸುತ್ತಿವೆ. ಈ ಲಾರಿಗಳಲ್ಲಿ ಬರುವ ಚಾಲಕರು ಕೂಡ ಸೋಂಕು ಹೆಚ್ಚಿರುವ ಕೇರಳ, ಮಹಾರಾಷ್ಟ್ರ,ಗೋವಾಕ್ಕೆ ಸೇರಿದ್ದು, ಯಾವುದೇ ಮುನ್ನೆಚ್ಚರಿಕೆ ಅಥವಾ ತಪಾಸಣೆಗೊಳಪಡದೇ ಘಟಕದ ಕೆಲಸಗಾರರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದಾರೆ.
90 ಲಕ್ಷ ಕುಟುಂಬಗಳಿಗೆ ಸೋಂಕಿನ ಭೀತಿ
ಇದೇ ಘಟಕದಿಂದ ದಿನವೂ 100ರಿಂದ 150 ಲಾರಿಗಳು ಗ್ಯಾಸ್ ತುಂಬಿದ ಸಿಲಿಂಡರ್ಗಳನ್ನು ತುಂಬಿಕೊಂಡು ಬೆಂಗಳೂರು ನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ ಜಿಲ್ಲೆಗಳಿಗೆ ನಿತ್ಯ ಸಿಲಿಂಡರ್ ಪೂರೈಸುತ್ತಿವೆ ಅಲ್ಲಿಂದ ರಾಜ್ಯದ ಸುಮಾರು 90 ಲಕ್ಷ ಮನೆಗಳಿಗೆ ಸಿಲಿಂಡರ್ ಪೂರೈಕೆಯಾಗುತ್ತಿದೆ. ಅಪ್ಪಿತಪ್ಪಿ ಈ ಘಟಕದಲ್ಲಿ ಯಾರಾದರೂ ಒಬ್ಬರಿಗೆ ಸೋಂಕು ತಗುಲಿದರೂ, ಅದು 90 ಲಕ್ಷ ಮನೆಗಳಿಗೆ ವ್ಯಾಪಿಸುವುದು ಖಚಿತ.
ಕೊರೊನಾ ವೈರಸ್ ಮತ್ತು ಲಾಕ್ಡೌನ್ ಕಲಿಸಿದ ಬದುಕಿನ ಪಾಠ, ನೆನಪಾಗುತ್ತಿರುವ ಹಿರಿಯರ ಉಪದೇಶ!
ಚಾಲಕರ ಅಶಿಸ್ತು
ಕೊರೊನಾ ತಡೆಗೆ ಸ್ವಚ್ಛತೆ ಕಾಪಾಡಿಕೊಳ್ಳುವುದು ತುಂಬಾ ಅಗತ್ಯವಾಗಿದ್ದರೂ, ಗ್ಯಾಸ್ ತುಂಬಿಕೊಂಡು ಬರುವ ಟ್ಯಾಂಕರ್ಗಳ ಚಾಲಕರು, ಪಾನ್ ಜಿಗಿದು ಎಲ್ಲೆಂದರಲ್ಲಿ ಉಗುಳುವ ಜತೆಗೆ ಬೀಡಿ ಸೇದಿ ಎಲ್ಲೆಡೆ ಎಸೆಯುತ್ತಿದ್ದಾರೆ. ಗುಂಪಾಗಿ ಕುಳಿತು ಊಟ ಮಾಡುತ್ತಿದ್ದಾರೆ. ಕೊರೊನಾ ಸೋಂಕು ತೀವ್ರವಾಗಿರುವ ಕೇರಳದಲ್ಲೂ ಇವರು ಇದೇ ರೀತಿ ವರ್ತಿಸಿ ಸೋಂಕನ್ನು ಎಲ್ಲೆಡೆ ಹರಡುವ ಭೀತಿ ಇದೆ.
ಒಂದೇ ಮನೆಯಲ್ಲಿ 35 ಜನ
ಹೊರ ರಾಜ್ಯಗಳಿಂದ ಟ್ಯಾಂಕರ್ಗಳೊಂದಿಗೆ ಬಂದ ಚಾಲಕರ ತಂಗಲು ಏಜೆನ್ಸಿಗಳು ಬಾಡಿಗೆ ಮನೆ ವ್ಯವಸ್ಥೆ ಮಾಡಿದ್ದು, ಇಕ್ಕಟ್ಟಾದ ಮನೆಯಲ್ಲಿ 35ಕ್ಕೂ ಹೆಚ್ಚು ಮಂದಿ ಮಲಗುತ್ತಿದ್ದಾರೆ.
ಲಾಕ್ಡೌನ್ ಸಂಕಷ್ಟದ ನಡುವೆ ಪರಿಹಾರವಾಗಿ ಬಂದ ಪಡಿತರ ಅಕ್ಕಿಯಲ್ಲೂ ಮಾಡ್ತಿದ್ದಾರೆ ಮೋಸ!
ಪಂಚಾಯತ್ ಎಚ್ಚರಿಕೆ
ಸೋಲೂರು ಗ್ರಾಮಪಂಚಾಯಿತಿ ಅಧ್ಯಕ್ಷ ರಾಜೇಶ್ ಮತ್ತು ಪಿಡಿಒ ಈಗಾಲೇ ಘಟಕಕ್ಕೆ ಭೇಟಿ ನೀಡಿ, ಘಟಕದಲ್ಲಿರುವ ಅವ್ಯವಸ್ಥೆ ಬಗ್ಗೆ ಘಟಕದ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಅವರು ಘಟಕದ ಸಿಬ್ಬಂದಿಯ ಹೊಣೆಯಷ್ಟೇ ನಮ್ಮದು, ಚಾಲಕರಿಗೆ ನಾವೇನೂ ಹೇಳಲಾಗದು ಎಂದು ನುಣುಚಿಕೊಳ್ಳುತ್ತಿದ್ದಾರೆ.
ಗ್ಯಾಸ್ ಸಿಲಿಂಡರ್ ತುಂಬಿಸುವ ಘಟಕದಲ್ಲಿ ಅವ್ಯವಸ್ಥೆ ಮನೆ ಮಾಡಿದೆ. ಈ ಕುರಿತು ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಘಟಕದ ಮ್ಯಾನೇಜರ್ಗೂ ತಿಳಿಸಿದ್ದೇವೆ. ಮುಂಜಾಗ್ರತೆ ವಹಿಸಲು ಇಂಧನ ಇಲಾಖೆ ಮಿನಮೇಷ ಎಣಿಸುತ್ತಿರುವುದು ಸರಿಯಲ್ಲ.
- ನಾಜಿಯಾ ಖಾನಂ ಜವಹಾರ್, ಜಿಪಂ ಸದಸ್ಯೆ ಸೋಲೂರು.
ಬಿಸಿಲ ತಾಪಕ್ಕೆ ಉದುರುತ್ತಿವೆ ಮಾವಿನ ಹೂವು-ಹೀಚು, ಬೇಡಿಕೆಯಿದೆ ಇಳುವರಿಯಿಲ್ಲ!
ರಾಮನಗರ: ಕೇಂದ್ರ ಸರಕಾರದ ಇಂಧನ ಇಲಾಖೆಯ ಅಧೀನದಲ್ಲಿರುವ ಎಲ್ಪಿಜಿ ಸಿಲಿಂಡರ್ ರಿಫಿಲ್ಲಿಂಗ್ ಘಟಕದಲ್ಲೇ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳು ಹಳಿತಪ್ಪಿವೆ. ರಾಮನಗರ ಜಿಲ್ಲೆಯ ಮಾಗಡಿಯ ಸೋಲೂರಿನಲ್ಲಿರುವ ರಾಜ್ಯದ ಎಂಟು ಜಿಲ್ಲೆಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವ ಭಾರತ್ ಪೆಟ್ರೋಲಿಯಂನ ಗ್ಯಾಸ್ ರಿಫಿಲ್ಲಿಂಗ್ ಘಟಕದಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವರು ಕೆಲಸ ಹಾಗೂ ವಿಶ್ರಾಂತಿ ವೇಳೆ ಸಾಮಾಜಿಕ ಅಂತರ ಪಾಲಿಸುತ್ತಿಲ್ಲ, ಸ್ಯಾನಿಟೈಸರ್ ಸೇರಿದಂತೆ ಸೋಂಕು ನಿರೋಧಕ ಕ್ರಮಗಳನ್ನು ಅನುಸರಿಸುತ್ತಿಲ್ಲ. ಅಷ್ಟೇ ಅಲ್ಲ, ರಿಫಿಲ್ಲಿಂಗ್ ಆದ ಸಿಲಿಂಡರ್ಗಳನ್ನು ಕ್ರಿಮಿನಾಶಕ ಸಿಂಪಡಿಸಿ ಸ್ವಚ್ಛಗೊಳಿಸುವ ಕೆಲಸವೂ ನಡೆಯುತ್ತಿಲ್ಲ.
ಗ್ಯಾಸ್ ರಿಫಿಲ್ಲಿಂಗ್ ಘಟಕಕ್ಕೆ ಕೊರೊನಾ ಸೋಂಕು ಹೆಚ್ಚಿರುವ ಕೇರಳದ ಕೊಚ್ಚಿನ್ ಹಾಗೂ ಮಂಗಳೂರಿನಿಂದ ನಿತ್ಯ 30ಕ್ಕೂ ಅಧಿಕ ಟ್ಯಾಂಕರ್ಗಳು ಗ್ಯಾಸ್ ಪೂರೈಸುತ್ತಿವೆ. ಈ ಲಾರಿಗಳಲ್ಲಿ ಬರುವ ಚಾಲಕರು ಕೂಡ ಸೋಂಕು ಹೆಚ್ಚಿರುವ ಕೇರಳ, ಮಹಾರಾಷ್ಟ್ರ,ಗೋವಾಕ್ಕೆ ಸೇರಿದ್ದು, ಯಾವುದೇ ಮುನ್ನೆಚ್ಚರಿಕೆ ಅಥವಾ ತಪಾಸಣೆಗೊಳಪಡದೇ ಘಟಕದ ಕೆಲಸಗಾರರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದಾರೆ.
90 ಲಕ್ಷ ಕುಟುಂಬಗಳಿಗೆ ಸೋಂಕಿನ ಭೀತಿ
ಇದೇ ಘಟಕದಿಂದ ದಿನವೂ 100ರಿಂದ 150 ಲಾರಿಗಳು ಗ್ಯಾಸ್ ತುಂಬಿದ ಸಿಲಿಂಡರ್ಗಳನ್ನು ತುಂಬಿಕೊಂಡು ಬೆಂಗಳೂರು ನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ ಜಿಲ್ಲೆಗಳಿಗೆ ನಿತ್ಯ ಸಿಲಿಂಡರ್ ಪೂರೈಸುತ್ತಿವೆ ಅಲ್ಲಿಂದ ರಾಜ್ಯದ ಸುಮಾರು 90 ಲಕ್ಷ ಮನೆಗಳಿಗೆ ಸಿಲಿಂಡರ್ ಪೂರೈಕೆಯಾಗುತ್ತಿದೆ. ಅಪ್ಪಿತಪ್ಪಿ ಈ ಘಟಕದಲ್ಲಿ ಯಾರಾದರೂ ಒಬ್ಬರಿಗೆ ಸೋಂಕು ತಗುಲಿದರೂ, ಅದು 90 ಲಕ್ಷ ಮನೆಗಳಿಗೆ ವ್ಯಾಪಿಸುವುದು ಖಚಿತ.
ಕೊರೊನಾ ವೈರಸ್ ಮತ್ತು ಲಾಕ್ಡೌನ್ ಕಲಿಸಿದ ಬದುಕಿನ ಪಾಠ, ನೆನಪಾಗುತ್ತಿರುವ ಹಿರಿಯರ ಉಪದೇಶ!
ಚಾಲಕರ ಅಶಿಸ್ತು
ಕೊರೊನಾ ತಡೆಗೆ ಸ್ವಚ್ಛತೆ ಕಾಪಾಡಿಕೊಳ್ಳುವುದು ತುಂಬಾ ಅಗತ್ಯವಾಗಿದ್ದರೂ, ಗ್ಯಾಸ್ ತುಂಬಿಕೊಂಡು ಬರುವ ಟ್ಯಾಂಕರ್ಗಳ ಚಾಲಕರು, ಪಾನ್ ಜಿಗಿದು ಎಲ್ಲೆಂದರಲ್ಲಿ ಉಗುಳುವ ಜತೆಗೆ ಬೀಡಿ ಸೇದಿ ಎಲ್ಲೆಡೆ ಎಸೆಯುತ್ತಿದ್ದಾರೆ. ಗುಂಪಾಗಿ ಕುಳಿತು ಊಟ ಮಾಡುತ್ತಿದ್ದಾರೆ. ಕೊರೊನಾ ಸೋಂಕು ತೀವ್ರವಾಗಿರುವ ಕೇರಳದಲ್ಲೂ ಇವರು ಇದೇ ರೀತಿ ವರ್ತಿಸಿ ಸೋಂಕನ್ನು ಎಲ್ಲೆಡೆ ಹರಡುವ ಭೀತಿ ಇದೆ.
ಒಂದೇ ಮನೆಯಲ್ಲಿ 35 ಜನ
ಹೊರ ರಾಜ್ಯಗಳಿಂದ ಟ್ಯಾಂಕರ್ಗಳೊಂದಿಗೆ ಬಂದ ಚಾಲಕರ ತಂಗಲು ಏಜೆನ್ಸಿಗಳು ಬಾಡಿಗೆ ಮನೆ ವ್ಯವಸ್ಥೆ ಮಾಡಿದ್ದು, ಇಕ್ಕಟ್ಟಾದ ಮನೆಯಲ್ಲಿ 35ಕ್ಕೂ ಹೆಚ್ಚು ಮಂದಿ ಮಲಗುತ್ತಿದ್ದಾರೆ.
ಲಾಕ್ಡೌನ್ ಸಂಕಷ್ಟದ ನಡುವೆ ಪರಿಹಾರವಾಗಿ ಬಂದ ಪಡಿತರ ಅಕ್ಕಿಯಲ್ಲೂ ಮಾಡ್ತಿದ್ದಾರೆ ಮೋಸ!
ಪಂಚಾಯತ್ ಎಚ್ಚರಿಕೆ
ಸೋಲೂರು ಗ್ರಾಮಪಂಚಾಯಿತಿ ಅಧ್ಯಕ್ಷ ರಾಜೇಶ್ ಮತ್ತು ಪಿಡಿಒ ಈಗಾಲೇ ಘಟಕಕ್ಕೆ ಭೇಟಿ ನೀಡಿ, ಘಟಕದಲ್ಲಿರುವ ಅವ್ಯವಸ್ಥೆ ಬಗ್ಗೆ ಘಟಕದ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಅವರು ಘಟಕದ ಸಿಬ್ಬಂದಿಯ ಹೊಣೆಯಷ್ಟೇ ನಮ್ಮದು, ಚಾಲಕರಿಗೆ ನಾವೇನೂ ಹೇಳಲಾಗದು ಎಂದು ನುಣುಚಿಕೊಳ್ಳುತ್ತಿದ್ದಾರೆ.
ಗ್ಯಾಸ್ ಸಿಲಿಂಡರ್ ತುಂಬಿಸುವ ಘಟಕದಲ್ಲಿ ಅವ್ಯವಸ್ಥೆ ಮನೆ ಮಾಡಿದೆ. ಈ ಕುರಿತು ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಘಟಕದ ಮ್ಯಾನೇಜರ್ಗೂ ತಿಳಿಸಿದ್ದೇವೆ. ಮುಂಜಾಗ್ರತೆ ವಹಿಸಲು ಇಂಧನ ಇಲಾಖೆ ಮಿನಮೇಷ ಎಣಿಸುತ್ತಿರುವುದು ಸರಿಯಲ್ಲ.
- ನಾಜಿಯಾ ಖಾನಂ ಜವಹಾರ್, ಜಿಪಂ ಸದಸ್ಯೆ ಸೋಲೂರು.
ಬಿಸಿಲ ತಾಪಕ್ಕೆ ಉದುರುತ್ತಿವೆ ಮಾವಿನ ಹೂವು-ಹೀಚು, ಬೇಡಿಕೆಯಿದೆ ಇಳುವರಿಯಿಲ್ಲ!