ಆ್ಯಪ್ನಗರ

ಮದ್ಯದ ನಶೆಯಲ್ಲಿ ಹೊಡೆದಾಟ; ಸಾವಿನಲ್ಲಿ ಅಂತ್ಯ

ಕುಡಿದ ಮತ್ತಿನಲ್ಲಿ ಶುರುವಾರ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವ ಪ್ರಕರಣ ರಾಮನಗರ ತಾಲೂಕಿನ ನಾಗೋನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ...

Vijaya Karnataka 27 Feb 2019, 5:00 am
ರಾಮನಗರ: ಕುಡಿದ ಮತ್ತಿನಲ್ಲಿ ಶುರುವಾರ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವ ಪ್ರಕರಣ ರಾಮನಗರ ತಾಲೂಕಿನ ನಾಗೋನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
Vijaya Karnataka Web fighting in alcoholism end of death
ಮದ್ಯದ ನಶೆಯಲ್ಲಿ ಹೊಡೆದಾಟ; ಸಾವಿನಲ್ಲಿ ಅಂತ್ಯ


ನಾಗೋನಹಳ್ಳಿ ಗ್ರಾಮದಲ್ಲಿನ ಮಾವಿನ ತೋಟವನ್ನು ಕಾಯುತ್ತಿದ್ದ ಮುನಿಯ (30) ಹತ್ಯೆಗೀಡಾಗಿದ್ದರೆ, ಆರೋಪಿ ಮಾದೇವ (55)ಪೊಲೀಸರ ಅತಿಥಿಯಾಗಿದ್ದಾನೆ.

ಏನಿದು ಪ್ರಕರಣ? : ಗಲಾಟೆ ಮಾಡಿಕೊಂಡವರಿಬ್ಬರೂ ಸಂಬಂಧಿಕರೇ. ನಾಗೋನಹಳ್ಳಿ ಗ್ರಾಮದಲ್ಲಿನ ಅಕ್ಕಪಕ್ಕದ ಮಾವಿನ ತೋಟ ಕಾಯುತ್ತಿದ್ದ ಈ ಇಬ್ಬರು ಸೋಮವಾರ ರಾತ್ರಿ ಕಂಠಪೂರ್ತಿ ಕುಡಿದು ಜಗಳವಾಡಿದ್ದಾರೆ. ಮಾತಿಗೆ ಮಾತು ಬೆಳೆದು ಆರೋಪಿ ಮಾದೇವ ಕೊಲಿನಿಂದ ಹೊಡೆದು ಮುನಿಯನನ್ನು ಸಾಯಿಸಿದ್ದಾನೆ. ಮುನಿಯ ಪ್ರಾಣ ಕಳೆದುಕೊಳ್ಳುತ್ತಿದ್ದಂತೆ ಹೆದರಿದ ಮಾದೇವ ಸ್ಥಳದಿಂದ ಪರಾರಿಯಾಗಿದ್ದಾನೆ. ಮಂಗಳವಾರ ಬೆಳಗ್ಗೆ ಮೃತ ಶರೀರವನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ