ಆ್ಯಪ್ನಗರ

ಹಂದಿಗುಂದಿ ಬೆಟ್ಟದ ಪಕ್ಕದ ಮಾವಿನ ತೋಪಿಗೆ ಬೆಂಕಿ

ಕಿಡಿಗೇಡಿಗಳ ಕುಕೃತ್ಯದಿಂದ ಹಂದಿಗುಂದಿ ಬೆಟ್ಟದ ಪಕ್ಕದ ಮಾವಿನ ತೋಪು ಭಸ್ಮಗೊಂಡ ಘಟನೆ ಸೋಮವಾರ ಮಧ್ಯಾಹ್ನ ಜರುಗಿದೆ...

Vijaya Karnataka 26 Feb 2019, 5:00 am
ರಾಮನಗರ: ಕಿಡಿಗೇಡಿಗಳ ಕುಕೃತ್ಯದಿಂದ ಹಂದಿಗುಂದಿ ಬೆಟ್ಟದ ಪಕ್ಕದ ಮಾವಿನ ತೋಪು ಭಸ್ಮಗೊಂಡ ಘಟನೆ ಸೋಮವಾರ ಮಧ್ಯಾಹ್ನ ಜರುಗಿದೆ.
Vijaya Karnataka Web fire to the mangrove groove beside the hill of piggundi
ಹಂದಿಗುಂದಿ ಬೆಟ್ಟದ ಪಕ್ಕದ ಮಾವಿನ ತೋಪಿಗೆ ಬೆಂಕಿ


ಹಂದಿಗೊಂದಿ ಅರಣ್ಯದ ಪಕ್ಕದ ಸರ್ವೆ ನಂಬರ್‌. 300 ಮತ್ತು 301ರಲ್ಲಿದ್ದ ಸುಮಾರು 5 ಎಕರೆಗೂ ಹೆಚ್ಚು ಮಾವಿನ ತೋಟ ಸಂಪೂರ್ಣ ನಾಶಗೊಂಡಿದ್ದು, ಇದರಲ್ಲಿ ಹುಲುಸಾಗಿ ಬೆಳೆದು ನಿಂತಿದ್ದ ಮಾವಿನ ಫಸಲು ನಾಶವಾಗಿದೆ.

ಲಕ್ಷಾಂತರ ನಷ್ಟ: ಕಿಡಿಗೇಡಿಗಳ ಕೃತ್ಯದಿಂದ ಹತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಮಾವಿನ ತೋಪನ್ನು ಸಂಪೂರ್ಣವಾಗಿ ವ್ಯಾಪಿಸಿಕೊಂಡಿತು. ಇದರಿಂದಾಗಿ ಮಾವು ಬೆಳೆಗಾರರಿಗೆ ಲಕ್ಷಾಂತರ ಮೌಲ್ಯ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿ ಶಾಮಕ ದಳ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ‍್ಯದಲ್ಲಿ ತೊಡಗಿದರು. ಬೆಂಕಿ ನಂದಿಸುವ ಕಾರ‍್ಯ ತಡವಾಗಿದ್ದರೂ, ಹಂದಿಗುಂದಿ ಬೆಟ್ಟದ ಅರಣ್ಯಕ್ಕೆ ಬೆಂಕಿ ತಗಲುವ ಸಾಧ್ಯತೆ ಹೆಚ್ಚಾಗಿತ್ತು ಎಂಬುದು ಸ್ಥಳೀಯ ಅಭಿಪ್ರಾಯವಾಗಿದೆ.

ಕಿಡಿಗೇಡಿಗಳು ಬೆಂಕಿ ಹತ್ತಿಸಿದ್ದಾರೆ. ಗಾಳಿಯ ವೇಗಕ್ಕೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬೆಂಕಿ ಹಬ್ಬಿದೆ. ನಮ್ಮ ಮಾವಿನ ತೋಟಕ್ಕೂ ಬೆಂಕಿ ತಗುಲಿದೆ. ಅಂದಾಜು 5 ಲಕ್ಷಕ್ಕೂ ಹೆಚ್ಚಿನ ನಷ್ಟ ಉಂಟಾಗಿದೆ.
-ಖಲೀಲ್‌, ತೋಟದ ಮಾಲೀಕ, ರಾಮನಗರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ