ಆ್ಯಪ್ನಗರ

ಕಾವೇರಿ ವನ್ಯ ಜೀವಿಧಾಮಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳ ಬಂಧನ

ಕಾವೇರಿ ವನ್ಯ ಜೀವಿಧಾಮದ ಮುತ್ತತ್ತಿ ಪ್ರವಾಸಿಗರ ತಾಣವಾಗಿದ್ದು, ಈ ಆರೋಪಿಗಳು ಮುತ್ತತ್ತಿಗೆ ಪ್ರವಾಸ ಹೋಗಿದ್ದು, ಸಾತನೂರಿಗೆ ಹಿಂದಿರುವಾಗ ಮುತ್ತತ್ತಿಯ ಪಾದಧರೆಯ ಬಳಿ ತಮ್ಮ ಬೈಕನ್ನು ನಿಲ್ಲಿಸಿ ವನ್ಯ ಜೀವಿಧಾಮಕ್ಕೆ ಬೆಂಕಿ ಹಚ್ಚಿದ್ದಾರೆ.

Vijaya Karnataka 9 Mar 2019, 7:55 pm
ಸಾತನೂರು: ಕನಕಪುರ ತಾಲೂಕು ಸಾತನೂರು ಹೋಬಳಿ ಕಾವೇರಿ ವನ್ಯ ಜೀವಿಧಾಮದ ಸಂಗಮ ವಲಯದ ಮುತ್ತತ್ತಿಯ ಪಾದಧರೆಯ ಬಳಿ ವನ್ಯ ಜೀವಿಧಾಮಕ್ಕೆ ಬೆಂಕಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುತ್ತತ್ತಿಗೆ ಪ್ರವಾಸಕ್ಕೆ ಬಂದಿದ್ದ, ಕನಕಪುರ ತಾಲೂಕಿನ ಐನೋರ್‌ ಗೊಲ್ಲಳ್ಳಿಯ ರುದ್ರ(45) ಮತ್ತು ಟಿ.ನರಸಿಪುರದ ಶಂಕರ್‌ (38) ಎಂಬ ಆರೋಪಿಗಳನ್ನು ಸಂಗಮ ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
Vijaya Karnataka Web Fire


ಕಾವೇರಿ ವನ್ಯ ಜೀವಿಧಾಮದ ಮುತ್ತತ್ತಿ ಪ್ರವಾಸಿಗರ ತಾಣವಾಗಿದ್ದು, ಈ ಆರೋಪಿಗಳು ಮುತ್ತತ್ತಿಗೆ ಪ್ರವಾಸ ಹೋಗಿದ್ದು, ಸಾತನೂರಿಗೆ ಹಿಂದಿರುವಾಗ ಮುತ್ತತ್ತಿಯ ಪಾದಧರೆಯ ಬಳಿ ತಮ್ಮ ಬೈಕನ್ನು ನಿಲ್ಲಿಸಿ ವನ್ಯ ಜೀವಿಧಾಮಕ್ಕೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ವೀಕ್ಷಣಾ ಗೋಪುರದ ಮೇಲೆ ಕುಳಿತಿದ್ದ ಅರಣ್ಯಾ ಸಿಬ್ಬಂದಿ ತಮ್ಮ ವೀಕ್ಷ ಣಾ ಉಪಕರಣದಿಂದ ಪಾದಧರೆಯ ಬಳಿ ಅನಿಲ್‌ಕುಮಾರ್‌ ಅವರಿಗೆ ತಮ್ಮ ವಾಕೀಟಾಕಿ ಮೂಲಕ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರೌವೃತ್ತರಾದ ಅನಿಲ್‌ಕುಮಾರ್‌ ಮತ್ತು ತಂಡ ಸ್ಥಳಕ್ಕೆ ಆಗಮಿಸಿ ವನ್ಯಜೀವಿಧಾಮಕ್ಕೆ ಬೆಂಕಿ ಇಟ್ಟು ಬೈಕಿನಲ್ಲಿ ತಪ್ಪಿಸಿಕೊಂಡು ಹೋಗುತ್ತಿದ್ದ ಶಂಕರ್‌ ಮತ್ತು ರುದ್ರ ಆರೋಪಿಗಳನ್ನು ಬೈಕ್‌ ಸಮೇತ ವಶಕ್ಕೆ ಪಡೆದು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಕಾವೇರಿ ವನ್ಯಜೀವಿಧಾಮದ ಸಹಾಯಕ ಸಂರಕ್ಷ ಣಾ ಅರಣ್ಯಾಧಿಕಾರಿ ರಾಜು ಮತ್ತು ವಲಯಾಧಿಕಾರಿ ಕಿರಣ್‌ಕುಮಾರ್‌ ಆಗಮಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವನ್ಯಜೀವಿ ಕಾಯ್ದೆ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗಿದೆ. ಆರೋಪಿಗಳನ್ನು ಜಿಲ್ಲಾ ಕೇಂದ್ರ ಕಾರಾಗೃಹÜಕ್ಕೆ ಕಳಿಸಲಾಯಿತು.

ಆರೋಪಿಗಳು ಹಲಗೂರು ಮಾರ್ಗವಾಗಿ ಮುತ್ತತ್ತಿಗೆ ಹೋಗಿ ಅಲ್ಲಿ ಊಟ ಮುಗಿಸಿ ಸಾತನೂರಿನ ಕಡೆಗೆ ಬರುವ ಸಂದರ್ಭದಲ್ಲಿ ಪಾದಧರೆ ಬಳಿ ವನ್ಯಜೀವಿಧಾಮಕ್ಕೆ ಬೆಂಕಿ ಇಟ್ಟಿದ್ದಾರೆ. ಅವರನ್ನು ಬಂಧಿಸಿ ಕಚೇರಿಯಲ್ಲಿ ವಿಚಾರಣೆ ಮಾಡಿ ವನ್ಯ ಜೀವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ರಾಜು, ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ಕಾವೇರಿ ವನ್ಯ ಜೀವಿಧಾಮ ಕನಕಪುರ.

ಆರೋಪಿಗಳು ಬೆಂಕಿಯನ್ನು ಇಟ್ಟ ಸಂದರ್ಭದಲ್ಲಿ ನಮ್ಮ ಸಿಬ್ಬಂದಿ ವೀಕ್ಷ ಣಾ ಗೋಪುರದಿಂದ ವೀಕ್ಷಿಸಿ ಬೆಂಕಿಯನ್ನು ನಂದಿಸಲು ಗಸ್ತುವಿನಲ್ಲಿ ಇದ್ದ ನಮ್ಮ ಉಪವಲಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಆರೋಪಿಗಳನ್ನು ಬಂಧಿಸಲಾಗಿದೆ.
ಕಿರಣ್‌ ಕುಮಾರ್‌, ವಲಯ ಅರಣ್ಯಾಧಿಕಾರಿಗಳು ಸಂಗಮ ವಲಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ