ರಾಮನಗರ: ರಾಮನಗರದಲ್ಲಿಪ್ರಸಿದ್ಧ ಜಾನಪದ ಲೋಕ ಇದೆ. ಆದರೆ, ಸರಕಾರ ರಚಿಸಿದ ಜಾನಪದ ಅಕಾಡೆಮಿಯಲ್ಲಿಒಬ್ಬರೇ ಒಬ್ಬರು ಸದಸ್ಯರಾಗಿ ಆಯ್ಕೆಗೆ ಪರಿಣಗಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಳೆದ ಮೂರು ದಿನಗಳ ಹಿಂದೆ ಸರಕಾರ 15ಕ್ಕೂ ಹೆಚ್ಚು ಅಕಾಡಮಿಗಳ ಅಧ್ಯಕ್ಷರ ಹಾಗೂ ಸದಸ್ಯರ ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಈ ಅಕಾಡೆಮಿಗಳ ಪೈಕಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ನೃತ್ಯಗಾರ ಸುಜೇಂದ್ರ ಬಾಬು ಆಯ್ಕೆ ಮಾಡಿರುವುದೇ ಸಮಾಧಾನದ ವಿಷಯ. ಭೌಗೋಳಿಕವಾಗಿ ರಾಮನಗರ ಜಿಲ್ಲೆಯ ಸಣ್ಣದಿದ್ದರೂ, ಜಾನಪದ ಸಂಸ್ಕೃತಿಯಲ್ಲಿಹೆಚ್ಚು ಹೆಸರು ಸಂಪಾದಿಸಿದೆ. ಅದರಲ್ಲೂ1994ರಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿನಾಡೋಜ ನಾಗೇಗೌಡರು ಜಾನಪದ ಲೋಕವನ್ನು ನಿರ್ಮಿಸಿ, ಕಲೆ ಉಳಿಯುವಿಕೆಗೆ ಹೆಚ್ಚು ತೊಡಗಿಸಿಕೊಂಡಿದ್ದರು. ಡೊಳ್ಳು ಕುಣಿತ, ವೀರಗಾಸೆ, ಪಟ ಹಾಗೂ ಪೂಜಾ ಕುಣಿತ, ಚಿಲಿಪಿಲಿ ಗೊಂಬೆಗಳು ಜಿಲ್ಲೆಯ ಪ್ರಮುಖ ಜಾನಪದ ಕಲೆಗಳು. ರಾಜ್ಯದಲ್ಲೇ ಅತೀ ಹೆಚ್ಚು 1ಸಾವಿರಕ್ಕೂ ಹೆಚ್ಚು ಕಲಾವಿದರು ವಾಸವಾಗಿದ್ದಾರೆ. ಇಂತಹ ಜಾನಪದ ಕಲೆಗಳ ಕೊಡುಗೆ ನೀಡಿದ್ದ ಜಿಲ್ಲೆಗೆ ಅಕಾಡೆಮಿಗೆ ಒಬ್ಬರಿಗೂ ಸದಸ್ಯ ಸ್ಥಾನ ನೀಡದಿರುವುದು ಜನತೆ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆದ ಬಾರಿ ಇಬ್ಬರು ನೇಮಕ: ಜಿಲ್ಲೆಯಿಂದ ಇಬ್ಬರು ಜಾನಪದ ಕಲಾವಿದರನ್ನು ನಾನಾ ಅಕಾಡೆಮಿಗಳಿಗೆ ರಾಜ್ಯ ಸರಕಾರ ಆಯ್ಕೆ ಮಾಡಲಾಗಿತ್ತು. ತೊಗಲುಗೊಂಬೆ ಕಲಾವಿದೆ ಗೌರಮ್ಮ ಅವರನ್ನು ಬಯಲಾಟ ಅಕಾಡಮಿಗೆ, ಜಾನಪದ ಕಲಾವಿದ ಕಾಳಯ್ಯ ಅವರನ್ನು ಜಾನಪದ ಅಕಾಡೆಮಿಗೆ ಸದಸ್ಯರನ್ನಾಗಿ ಪರಿಗಣಿಸಲಾಗಿತ್ತು. ಈ ಬಾರಿ ಅದಕ್ಕೂ ಕತ್ತರಿ ಪ್ರಯೋಗವಾಗಿದೆ. ಜಿಲ್ಲೆಯಲ್ಲಿಸಾಕಷ್ಟು ಮಂದಿ ಪ್ರಸಿದ್ಧ ಸಾಹಿತಿಗಳು, ರಂಗಭೂಮಿ ಕಲಾವಿದರು, ಜಾನಪದ ಕಲಾವಿದರು, ಕಲಾಸಕ್ತರು ಇದ್ದಾರೆ. ಆದರೆ, ಸಾಹಿತ್ಯ ಅಕಾಡೆಮಿಗಾಗಲಿ ನಾಟಕ ಅಕಾಡೆಮಿಗಾಗಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಯಾವುದಕ್ಕೂ ಜಿಲ್ಲೆಯವರನ್ನು ಪರಿಗಣಿಸಿಲ್ಲ.
ಈ ಕಡೆಗಣನೆಯಿಂದ ಆಯಾ ಕ್ಷೇತ್ರಗಳಲ್ಲಿಜಿಲ್ಲೆಯನ್ನು ಪ್ರತಿನಿಧಿಸುವವರಿಲ್ಲದೆ ಅನ್ಯಾಯವಾಗಲಿದೆ. ಆಯಾ ಅಕಾಡೆಮಿ, ಪ್ರಾಧಿಕಾರದ ವ್ಯಾಪ್ತಿಯ ಕಾರ್ಯಕ್ರಮಗಳಿಗೆ ಜಿಲ್ಲೆಯ ಪರಿಗಣಿಸುವ ಸಾಧ್ಯತೆ ಇರಲಿದೆ. ರಾಮನಗರ ರಾಜಧಾನಿ ಪಕ್ಕದ ಜಿಲ್ಲೆಯಾಗಿರುವ ಕಾರಣ ಹೆಚ್ಚಿನ ಆದ್ಯತೆ ನೀಡಬೇಕಾಗಿತ್ತು ಎಂಬ ಕೂಗು ಸಾಂಸ್ಕೃತಿಕ ವಲಯದಲ್ಲಿದಟ್ಟವಾಗಿ ಕೇಳಿ ಬರುತ್ತಿದೆ. ಜಾನಪದ ಅಕಾಡೆಮಿಯಲ್ಲಿಸ್ಥಾನ ಕೊಡಿಸುವಲ್ಲಿನಮ್ಮ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷವೂ ಕಾರಣ ಎಂಬ ವಾದ ವ್ಯಕ್ತವಾಗುತ್ತಿದೆ. ನಾನಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಸದಸ್ಯರನ್ನು ಆಯ್ಕೆ ಮಾಡಿಸುವಲ್ಲಿ ಜನಪ್ರತಿನಿಧಿಗಳು ಮುತುವರ್ಜಿ ವಹಿಸಲ್ಲ ಎಂಬ ಕಾರಣ ನೀಡಲಾಗುತ್ತಿದೆ. ನೃತ್ಯ ಅಕಾಡೆಮಿಗೆ ಸುಜೇಂದ್ರಬಾಬು ಸಂಗೀತ ಹಾಗೂ ನೃತ್ಯ ಅಕಾಡೆಮಿಯ ಸದಸ್ಯರಾಗಿ ಚನ್ನಪಟ್ಟಣ ತಾಲೂಕಿನ ಪ್ರಸಿದ್ಧ ನೃತ್ಯಪಟು ಸುಜೇಂದ್ರ ಬಾಬು ಅವರನ್ನು ಆಯ್ಕೆ ಮಾಡಲಾಗಿದೆ. ಕಳೆದ ಹಲವು ವರ್ಷಗಳಿಂದ ಭರತನಾಟ್ಯದಲ್ಲಿಪ್ರವೀಣರಾಗಿರುವ ಇರುವ ತಾವು ಕಲಿತ ವಿದ್ಯೆಯನ್ನು ಇತರೆ ಹಂಚುವ ಕಾಯಕದಲ್ಲಿತೊಡಗಿದ್ದಾರೆ. ಬೆಂಗಳೂರು ಸೇರಿದಂತೆ ಹಲವೆಡೆ ಇವರ ನೃತ್ಯ ಶಾಲೆಗಳು ಇವೆ. ಇವರನ್ನು ಸಂಗೀತ ಹಾಗೂ ನೃತ್ಯ ಅಕಾಡೆಮಿಗೆ ಪರಿಗಣಿಸಿರುವುದು ಜಿಲ್ಲೆಯ ಜನತೆಗೆ ಸಮಾಧಾನ ತರಿಸಿದೆ. ನಾನಾ ಅಕಾಡೆಮಿಗಳ ಅಧ್ಯಕ್ಷರ ಹಾಗೂ ಸದಸ್ಯರ ಆಯ್ಕೆಯಲ್ಲಿರಾಜ್ಯ ಸರಕಾರ ಜಿಲ್ಲೆಯನ್ನು ಕಡೆಗಣಿಸಿದೆ. ಮಲತಾಯಿ ಧೋರಣೆ ಅನುಸರಿಸುತ್ತಿದೆ. ಚನ್ನಪಟ್ಟಣ ತಾಲೂಕಿನಲ್ಲೇ ಅತಿ ಹೆಚ್ಚು ಜಾನಪದ ಕಲಾವಿದರು ಇದ್ದಾರೆ. ಇವರನ್ನು ಪರಿಗಣಿಸಬಹುದಾಗಿತ್ತು. -ಸಿಂಲಿಂ. ನಾಗರಾಜು, ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್
ರಾಮನಗರ ರಾಮನಗರ ತಾಲೂಕಿನಲ್ಲೂಉತ್ತಮ ಜಾನಪದ ಕ್ಷೇತ್ರದಲ್ಲಿಸಾಧನೆ ಮಾಡಿರುವ ಹಲವು ಸಾಧಕರಿದ್ದಾರೆ. ಇವರನ್ನು ಪರಿಗಣಿಸಬಹುದಾಗಿತ್ತು. ಲಾಭಿ ಮಾಡುವವರನ್ನು ಹೊರತುಪಡಿಸಿ ಅರ್ಹರನ್ನು ಪರಿಗಣಿಸಲಿ. -ಪ್ರೊ.ಶಿವನಂಜಯ್ಯ, ಸಾಹಿತಿ, ರಾಮನಗರ ಈ ಬಾರಿಯ ಜಾನಪದ ಅಕಾಡೆಮಿಗೆ ಸದಸ್ಯರನ್ನಾಗಿಸಲು ನನ್ನ ಹೆಸರು ಕೂಡಾ ಶಿಫಾರಸ್ಸು ಮಾಡಲಾಗಿತ್ತು. ಆದರೆ, ಅಂತಿಮ ಘಳಿಗೆಯಲ್ಲಿನನ್ನನ್ನು ಕೈಬಿಡಲಾಗಿದೆ. ರಾಮನಗರ ತಾಲೂಕಿನಲ್ಲಿಉತ್ತಮ ಸಾಧಕರಿದ್ದರು., ಅವರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.
-ಅಂಕನಹಳ್ಳಿ ಶಿವಣ್ಣ, ಪೂಜಾ ಕುಣಿತ ಕಲಾವಿದ
ಕಳೆದ ಮೂರು ದಿನಗಳ ಹಿಂದೆ ಸರಕಾರ 15ಕ್ಕೂ ಹೆಚ್ಚು ಅಕಾಡಮಿಗಳ ಅಧ್ಯಕ್ಷರ ಹಾಗೂ ಸದಸ್ಯರ ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಈ ಅಕಾಡೆಮಿಗಳ ಪೈಕಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ನೃತ್ಯಗಾರ ಸುಜೇಂದ್ರ ಬಾಬು ಆಯ್ಕೆ ಮಾಡಿರುವುದೇ ಸಮಾಧಾನದ ವಿಷಯ. ಭೌಗೋಳಿಕವಾಗಿ ರಾಮನಗರ ಜಿಲ್ಲೆಯ ಸಣ್ಣದಿದ್ದರೂ, ಜಾನಪದ ಸಂಸ್ಕೃತಿಯಲ್ಲಿಹೆಚ್ಚು ಹೆಸರು ಸಂಪಾದಿಸಿದೆ. ಅದರಲ್ಲೂ1994ರಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿನಾಡೋಜ ನಾಗೇಗೌಡರು ಜಾನಪದ ಲೋಕವನ್ನು ನಿರ್ಮಿಸಿ, ಕಲೆ ಉಳಿಯುವಿಕೆಗೆ ಹೆಚ್ಚು ತೊಡಗಿಸಿಕೊಂಡಿದ್ದರು. ಡೊಳ್ಳು ಕುಣಿತ, ವೀರಗಾಸೆ, ಪಟ ಹಾಗೂ ಪೂಜಾ ಕುಣಿತ, ಚಿಲಿಪಿಲಿ ಗೊಂಬೆಗಳು ಜಿಲ್ಲೆಯ ಪ್ರಮುಖ ಜಾನಪದ ಕಲೆಗಳು. ರಾಜ್ಯದಲ್ಲೇ ಅತೀ ಹೆಚ್ಚು 1ಸಾವಿರಕ್ಕೂ ಹೆಚ್ಚು ಕಲಾವಿದರು ವಾಸವಾಗಿದ್ದಾರೆ. ಇಂತಹ ಜಾನಪದ ಕಲೆಗಳ ಕೊಡುಗೆ ನೀಡಿದ್ದ ಜಿಲ್ಲೆಗೆ ಅಕಾಡೆಮಿಗೆ ಒಬ್ಬರಿಗೂ ಸದಸ್ಯ ಸ್ಥಾನ ನೀಡದಿರುವುದು ಜನತೆ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆದ ಬಾರಿ ಇಬ್ಬರು ನೇಮಕ: ಜಿಲ್ಲೆಯಿಂದ ಇಬ್ಬರು ಜಾನಪದ ಕಲಾವಿದರನ್ನು ನಾನಾ ಅಕಾಡೆಮಿಗಳಿಗೆ ರಾಜ್ಯ ಸರಕಾರ ಆಯ್ಕೆ ಮಾಡಲಾಗಿತ್ತು. ತೊಗಲುಗೊಂಬೆ ಕಲಾವಿದೆ ಗೌರಮ್ಮ ಅವರನ್ನು ಬಯಲಾಟ ಅಕಾಡಮಿಗೆ, ಜಾನಪದ ಕಲಾವಿದ ಕಾಳಯ್ಯ ಅವರನ್ನು ಜಾನಪದ ಅಕಾಡೆಮಿಗೆ ಸದಸ್ಯರನ್ನಾಗಿ ಪರಿಗಣಿಸಲಾಗಿತ್ತು. ಈ ಬಾರಿ ಅದಕ್ಕೂ ಕತ್ತರಿ ಪ್ರಯೋಗವಾಗಿದೆ. ಜಿಲ್ಲೆಯಲ್ಲಿಸಾಕಷ್ಟು ಮಂದಿ ಪ್ರಸಿದ್ಧ ಸಾಹಿತಿಗಳು, ರಂಗಭೂಮಿ ಕಲಾವಿದರು, ಜಾನಪದ ಕಲಾವಿದರು, ಕಲಾಸಕ್ತರು ಇದ್ದಾರೆ. ಆದರೆ, ಸಾಹಿತ್ಯ ಅಕಾಡೆಮಿಗಾಗಲಿ ನಾಟಕ ಅಕಾಡೆಮಿಗಾಗಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಯಾವುದಕ್ಕೂ ಜಿಲ್ಲೆಯವರನ್ನು ಪರಿಗಣಿಸಿಲ್ಲ.
ಈ ಕಡೆಗಣನೆಯಿಂದ ಆಯಾ ಕ್ಷೇತ್ರಗಳಲ್ಲಿಜಿಲ್ಲೆಯನ್ನು ಪ್ರತಿನಿಧಿಸುವವರಿಲ್ಲದೆ ಅನ್ಯಾಯವಾಗಲಿದೆ. ಆಯಾ ಅಕಾಡೆಮಿ, ಪ್ರಾಧಿಕಾರದ ವ್ಯಾಪ್ತಿಯ ಕಾರ್ಯಕ್ರಮಗಳಿಗೆ ಜಿಲ್ಲೆಯ ಪರಿಗಣಿಸುವ ಸಾಧ್ಯತೆ ಇರಲಿದೆ. ರಾಮನಗರ ರಾಜಧಾನಿ ಪಕ್ಕದ ಜಿಲ್ಲೆಯಾಗಿರುವ ಕಾರಣ ಹೆಚ್ಚಿನ ಆದ್ಯತೆ ನೀಡಬೇಕಾಗಿತ್ತು ಎಂಬ ಕೂಗು ಸಾಂಸ್ಕೃತಿಕ ವಲಯದಲ್ಲಿದಟ್ಟವಾಗಿ ಕೇಳಿ ಬರುತ್ತಿದೆ. ಜಾನಪದ ಅಕಾಡೆಮಿಯಲ್ಲಿಸ್ಥಾನ ಕೊಡಿಸುವಲ್ಲಿನಮ್ಮ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷವೂ ಕಾರಣ ಎಂಬ ವಾದ ವ್ಯಕ್ತವಾಗುತ್ತಿದೆ. ನಾನಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಸದಸ್ಯರನ್ನು ಆಯ್ಕೆ ಮಾಡಿಸುವಲ್ಲಿ ಜನಪ್ರತಿನಿಧಿಗಳು ಮುತುವರ್ಜಿ ವಹಿಸಲ್ಲ ಎಂಬ ಕಾರಣ ನೀಡಲಾಗುತ್ತಿದೆ. ನೃತ್ಯ ಅಕಾಡೆಮಿಗೆ ಸುಜೇಂದ್ರಬಾಬು ಸಂಗೀತ ಹಾಗೂ ನೃತ್ಯ ಅಕಾಡೆಮಿಯ ಸದಸ್ಯರಾಗಿ ಚನ್ನಪಟ್ಟಣ ತಾಲೂಕಿನ ಪ್ರಸಿದ್ಧ ನೃತ್ಯಪಟು ಸುಜೇಂದ್ರ ಬಾಬು ಅವರನ್ನು ಆಯ್ಕೆ ಮಾಡಲಾಗಿದೆ. ಕಳೆದ ಹಲವು ವರ್ಷಗಳಿಂದ ಭರತನಾಟ್ಯದಲ್ಲಿಪ್ರವೀಣರಾಗಿರುವ ಇರುವ ತಾವು ಕಲಿತ ವಿದ್ಯೆಯನ್ನು ಇತರೆ ಹಂಚುವ ಕಾಯಕದಲ್ಲಿತೊಡಗಿದ್ದಾರೆ. ಬೆಂಗಳೂರು ಸೇರಿದಂತೆ ಹಲವೆಡೆ ಇವರ ನೃತ್ಯ ಶಾಲೆಗಳು ಇವೆ. ಇವರನ್ನು ಸಂಗೀತ ಹಾಗೂ ನೃತ್ಯ ಅಕಾಡೆಮಿಗೆ ಪರಿಗಣಿಸಿರುವುದು ಜಿಲ್ಲೆಯ ಜನತೆಗೆ ಸಮಾಧಾನ ತರಿಸಿದೆ. ನಾನಾ ಅಕಾಡೆಮಿಗಳ ಅಧ್ಯಕ್ಷರ ಹಾಗೂ ಸದಸ್ಯರ ಆಯ್ಕೆಯಲ್ಲಿರಾಜ್ಯ ಸರಕಾರ ಜಿಲ್ಲೆಯನ್ನು ಕಡೆಗಣಿಸಿದೆ. ಮಲತಾಯಿ ಧೋರಣೆ ಅನುಸರಿಸುತ್ತಿದೆ. ಚನ್ನಪಟ್ಟಣ ತಾಲೂಕಿನಲ್ಲೇ ಅತಿ ಹೆಚ್ಚು ಜಾನಪದ ಕಲಾವಿದರು ಇದ್ದಾರೆ. ಇವರನ್ನು ಪರಿಗಣಿಸಬಹುದಾಗಿತ್ತು. -ಸಿಂಲಿಂ. ನಾಗರಾಜು, ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್
ರಾಮನಗರ ರಾಮನಗರ ತಾಲೂಕಿನಲ್ಲೂಉತ್ತಮ ಜಾನಪದ ಕ್ಷೇತ್ರದಲ್ಲಿಸಾಧನೆ ಮಾಡಿರುವ ಹಲವು ಸಾಧಕರಿದ್ದಾರೆ. ಇವರನ್ನು ಪರಿಗಣಿಸಬಹುದಾಗಿತ್ತು. ಲಾಭಿ ಮಾಡುವವರನ್ನು ಹೊರತುಪಡಿಸಿ ಅರ್ಹರನ್ನು ಪರಿಗಣಿಸಲಿ. -ಪ್ರೊ.ಶಿವನಂಜಯ್ಯ, ಸಾಹಿತಿ, ರಾಮನಗರ ಈ ಬಾರಿಯ ಜಾನಪದ ಅಕಾಡೆಮಿಗೆ ಸದಸ್ಯರನ್ನಾಗಿಸಲು ನನ್ನ ಹೆಸರು ಕೂಡಾ ಶಿಫಾರಸ್ಸು ಮಾಡಲಾಗಿತ್ತು. ಆದರೆ, ಅಂತಿಮ ಘಳಿಗೆಯಲ್ಲಿನನ್ನನ್ನು ಕೈಬಿಡಲಾಗಿದೆ. ರಾಮನಗರ ತಾಲೂಕಿನಲ್ಲಿಉತ್ತಮ ಸಾಧಕರಿದ್ದರು., ಅವರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.
-ಅಂಕನಹಳ್ಳಿ ಶಿವಣ್ಣ, ಪೂಜಾ ಕುಣಿತ ಕಲಾವಿದ