ಆ್ಯಪ್ನಗರ

ಎಚ್ಡಿಕೆ ಕಣ್ಣೀರಿಗೆ ಕರಿಗಿದ ನೀರಾವರಿ: ಸಿಪಿವೈ

ಎಚ್‌ಡಿಕೆ ಕಣ್ಣೀರಿಗೆ ನಾವು ಮಾಡಿದ ನೀರಾವರಿ ಯೋಜನೆ ಕೊಚ್ಚಿ ಹೋಗಿದೆ. ಸಮಗ್ರ ನೀರಾವರಿ ಜತೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರೂ ನಮ್ಮ ಉದಾಸೀನತೆ ಸೋಲಲು ಕಾರಣವಾಯಿತು ಎಂದು ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್‌ ಹೇಳಿದರು.

Vijaya Karnataka 4 Jun 2018, 2:59 pm
ಚನ್ನಪಟ್ಟಣ: ಎಚ್‌ಡಿಕೆ ಕಣ್ಣೀರಿಗೆ ನಾವು ಮಾಡಿದ ನೀರಾವರಿ ಯೋಜನೆ ಕೊಚ್ಚಿ ಹೋಗಿದೆ. ಸಮಗ್ರ ನೀರಾವರಿ ಜತೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರೂ ನಮ್ಮ ಉದಾಸೀನತೆ ಸೋಲಲು ಕಾರಣವಾಯಿತು ಎಂದು ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್‌ ಹೇಳಿದರು.
Vijaya Karnataka Web frozen irrigation to cure tears cpy
ಎಚ್ಡಿಕೆ ಕಣ್ಣೀರಿಗೆ ಕರಿಗಿದ ನೀರಾವರಿ: ಸಿಪಿವೈ


ಪಟ್ಟಣದ ದೊಡ್ಡಮಳೂರು ಬಳಿಯ ಶ್ರೀಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪಕ್ಷ ದ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು,' ನನ್ನ ಕೊನೆಯ ಆಸೆಯಾಗಿದ್ದ ಕಣ್ವಕ್ಕೆ ನೇರವಾಗಿ ನೀರು ತುಂಬಿಸುವ ಕೆಲಸ. ನಾನು ಸೋತಿದ್ದೇನೆ. ಈಗ ಅಧಿಕಾರದಲ್ಲಿ ಇರುವ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್‌ ತಾಲೂಕಿನ ಕಣ್ವ ನದಿಗೆ ಕೆಆರ್‌ಎಸ್‌ ನಿಂದ ನೇರವಾಗಿ ಹೇಗೆ ನೀರು ತರುತ್ತಾರೋ ನೋಡೋಣ,' ಎಂದು ಸವಾಲು ಹಾಕಿದರು.

ಕ್ಷೇತ್ರದ ಸಂಬಂಧ: 'ಮೀನು ಮತ್ತು ನೀರಿಗೆ ಇರುವ ಸಂಬಂಧವೇ ನನಗೂ ಕ್ಷೇತ್ರಕ್ಕೂ ಇರುವ ಸಂಬಂಧ. ಅಧಿಕಾರ ಇರಲಿ, ಬಿಡಲಿ ಕ್ಷೇತ್ರ ಬಿಟ್ಟು ನನಗೆ ಬದುಕಲು ಸಾಧ್ಯವಿಲ್ಲ. ನಾನು ರಾಮನಗರ ಕ್ಷೇತ್ರದ ಚುನಾವಣೆಯಲ್ಲಿ ಸ್ವರ್ಧೆ ಮಾಡುವುದಿಲ್ಲ,'ಎಂದು ಸ್ಪಷ್ಟಪಡಿಸಿದರು.

ಪ್ರನಾಳ ಶಿಶುವಲ್ಲ: 'ರಾಜ್ಯದಲ್ಲಿ ಯಾವುದೇ ಪಕ್ಷ ಕ್ಕೆ ಈ ಬಾರಿ ಬಹುಮಾತ ನೀಡಿಲ್ಲ. ಅತಿ ದೊಡ್ಡ ಪಕ್ಷ ವಾಗಿ ಬಿಜೆಪಿ ಗೆದ್ದಿದ್ದರೂ ಸರಕಾರ ರಚಿಸಿ, ಬಹುಮಾತ ಸಾಬೀತು ಮಾಡಲು ಆಗಿಲ್ಲ. ಹೀಗಾಗಿ ಸದ್ಯ ಜೆಡಿಎಸ್‌ನ ಸಮ್ಮಿಶ್ರ ಸರಕಾರ ಹೆಚ್ಚು ದಿನ ಇರುವುದಿಲ್ಲ. ಇದು ಪ್ರನಾಳ ಶಿಶು ಅಲ್ಲ. ದೇವೇಗೌಡರ ಮಂತ್ರದಂಡದಿಂದ ಹುಟ್ಟುಹಾಕಿದ ಪ್ರನಾಳ ಶಿಶು. ಲೋಕಸಭಾ ಚುನಾವಣೆಯವರೆಗೆ ಮಾತ್ರ ಬದಕಲು ಸಾಧ್ಯ. ಸರಕಾರ ರಚನೆ ಮಾಡಿರುವ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಅಸಮಾಧಾನವಿದೆ,'ಎಂದು ಟೀಕಿಸಿದರು.

ಎಲ್ಲಿದೆ ರಾಮರಾಜ್ಯ..?: 'ಎರಡು ಪಕ್ಷ ದವರಿಗೆ ಅಧಿಕಾರದ ಆಸೆಯಿಂದ ಮಂತ್ರಿ ಮಂಡಲು ರಚನೆ ಮಾಡಲು ಇದುವರೆಗೂ ಸಾಧ್ಯವಾಗುತ್ತಿಲ್ಲ. ಎ. ಟೀಮ್‌, ಬಿ.ಟೀಮ್‌ಗಳ ಆಟ ಶುರುವಾಗಿದೆ. ಇನ್ನೂ ಮುಖ್ಯ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಪ್ರಮುಖವಾಗಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸ್ತ್ರೀಶಕ್ತಿ ಗುಂಪುಗಳ ಮತ್ತು ಜತೆಗೆ ಕೈಸಾಲ, ವೃದ್ಧಾಪ್ಯ ವೇತನ ಹಾಗೂ ರೈತರ ಎಲ್ಲ ರೀತಿ ಸಾಲ ಮನ್ನ ಮತ್ತು ಈಡೇರಿಸಲು ಸಾಧ್ಯವಾಗದೆ, ಬಹುಮತವಿಲ್ಲದೆ ಸಾಲ ಮನ್ನ ಮಾಡಲು ಕಾಲವಾಕಾಶ ನೀಡಿ ಎಂದು ಇಲ್ಲ ಸಲ್ಲದ ಕಾರಣ ನೀಡಿ ದಿನದೂಡುವ ಕೆಲಸ ಮಾಡುತ್ತಿದ್ದಾರೆ. ರಾಮರಾಜ್ಯ ಮಾಡುತ್ತೇನೆ ಎಂದು ಹೇಳಿದ ಮಾತು ಹುಸಿಯಾಗುತ್ತಿದೆ,' ಎಂದು ಸರಕಾರ ವಿರುದ್ಧ ವಾಗ್ಧಾಳಿ ಮಾಡಿದರು.

ಜೆಡಿಎಸ್‌ಗೆ ಜನತೆ ಬೆಂಬಲ: 'ಕ್ಷೇತ್ರದ ಜನತೆ ನಮ್ಮನ್ನು ತಿರಸ್ಕೃರಿಸಿದ್ದಾರೆ. ನನ್ನ ಅಭಿವೃದ್ಧಿಗಿಂತ ಹೆಚ್ಚಾಗಿ ಕುಮಾರಸ್ವಾಮಿ ಸಿಎಂ ಅಭ್ಯರ್ಥಿ ಗೆಲ್ಲಿಸಿದ್ದಾರೆ. ನಾವು ಜನರ ಬಳಿ ಹೋಗಿ ಕೆಲಸ ಮಾಡುವ ಬದಲು ತಾಳ್ಮೆಯಿಂದ ಕಾಯೋಣ. ಸೋತೆ ಎಂದು ದುಃಖ ಪಡದೇ ಕ್ಷೇತ್ರದಿಂದ ಗೆದ್ದು ಮುಖ್ಯ ಮಂತ್ರಿಯಾಗಿರುವ ಕುಮಾರಸ್ವಾಮಿ ಅಭಿವೃದ್ಧಿಯ ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ ನೀಡುವ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು ಕಿಚ್ಚು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸರಕಾರದಲ್ಲಿ ಒಕ್ಕಲಿಗರ ವಿರೋಧಿ ಎಂದು ಅವರ ವಿರುದ್ಧ ಮತ ಚಲಾಯಿಸಿ ಜೆಡಿಎಸ್‌ಗೆ ಬೆಂಬಲ ನೀಡಿದ್ದಾರೆ. ಕುಮಾರಸ್ವಾಮಿ ಗೆದ್ದಿರುವುದು ಖುಷಿಯ ವಿಚಾರ, ಚನ್ನಪಟ್ಟಣ ಮುಖ್ಯ ಮಂತ್ರಿ ಕ್ಷೇತ್ರವಾಗಿದೆ. ಇದು ಹೆಚ್ಚು ದಿನ ನಡೆಯಲ್ಲ. ದೇವೇಗೌಡ ಮತ್ತು ಡಿ.ಕೆ. ಶಿವಕುಮಾರ ಅವರಿಗೆ ರಾಜಕೀಯವಾಗಿ ಶರಣಾಗುವ ಪ್ರಶ್ನೇಯೇ ಇಲ್ಲ,'ಎಂದು ಕಿಡಿಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ