ಆ್ಯಪ್ನಗರ

ಮಾಜಿ ಡಿಸಿಎಂ ಆಪ್ತ ರಮೇಶ್‌ ಅಂತ್ಯಸಂಸ್ಕಾರ

ಮಾಜಿ ಡಿಸಿಎಂ ಡಾ.ಜಿ.ಪರ ಮೇ ಶ್ವರ್‌ ಆಪ್ತ ಸಹಾಯಕ ರಮೇಶ್‌ ಅಂತ್ಯಸಂಸ್ಕಾರ, ಹುಟ್ಟೂರು ತಾಲೂಕಿನ ಮೇಳೆಹಳ್ಳಿಯಲ್ಲಿ ಭಾನುವಾರ ನೆರವೇರಿತು.

Vijaya Karnataka 14 Oct 2019, 5:00 am
ರಾಮನಗರ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಆಪ್ತ ಸಹಾಯಕ ರಮೇಶ್‌ ಅಂತ್ಯಸಂಸ್ಕಾರ, ಹುಟ್ಟೂರು ತಾಲೂಕಿನ ಮೇಳೆಹಳ್ಳಿಯಲ್ಲಿ ಭಾನುವಾರ ನೆರವೇರಿತು.
Vijaya Karnataka Web funeral of deputy chief minister parameshwara personal secretary ramesh
ಮಾಜಿ ಡಿಸಿಎಂ ಆಪ್ತ ರಮೇಶ್‌ ಅಂತ್ಯಸಂಸ್ಕಾರ


ಮಾಜಿ ಡಿಸಿಎಂ ಪರ ಮೇಶ್ವರ್‌ ಸೇರಿ ಹಲವು ರಾಜ ಕೀಯ ನಾಯಕರು, ಅಂತ್ಯ ಸಂಸ್ಕಾರ ವಿಧಿ ವಿಧಾನದಲ್ಲಿ ಭಾಗಿಯಾದರು. ಒಕ್ಕಲಿಗರ ಸಂಪ್ರದಾಯದಂತೆ ರಮೇಶ್‌ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಮಗ ಮೋಹಿತ್‌ ತಂದೆಯ ಪಾರ್ಥಿವ ಶರೀರಕ್ಕೆ ಆಗ್ನಿ ಸ್ಪರ್ಶಮಾಡಿದನು.

ಮುಗಿಲು ಮುಟ್ಟಿದ ಆಕ್ರಂದನ: ಶನಿವಾರ ರಾತ್ರಿ ವೇಳೆಗೆ ರಮೇಶ್‌ ಮೃತದೇಹ ಆತನ ಹುಟ್ಟೂರು ಮೆಳೇಹಳ್ಳಿಗೆ ಬಂದ ವೇಳೆ ಹಾಜರಿದ್ದ ನೂರಾರು ಗ್ರಾಮಸ್ಥರು ಕಣ್ಣೀರಿಟ್ಟರು. ಸಂಬಂಧಿಕರ ರೋಧನೆ ಮನಕಲುಕುವಂತಿತ್ತು. ಭಾನುವಾರ ಬೆಳಗ್ಗೆ 11 ಗಂಟೆಯವರೆಗೆ ಗ್ರಾಮಸ್ಥರು, ಸಂಬಂಧಿಕರು, ಸ್ನೇತರು, ಕಾಂಗ್ರೆಸ್‌ ಕಾರ್ಯ ಕರ್ತ ರು ಹೀಗೆ ನೂರಾರು ಜನ ಆಗಮಿಸಿ ರಮೇಶ್‌ ಅಂತಿಮ ದರ್ಶನ ಪಡೆದುಕೊಂಡರು. ನಂತರ ಕುಟುಂಬಕ್ಕೆ ಸೇರಿದ ಹತ್ತಿರದ ಜಮೀನಿನಲ್ಲಿಅಂತ್ಯ ಸಂಸ್ಕಾರ ಮಾಡಲಾಯಿತು. ಇದಕ್ಕೂ ಮುನ್ನ ಶವಯಾತ್ರೆ ನಡೆಯಿತು.

ಐಟಿ ಇಲಾಖೆ ಬಗ್ಗೆ ಕೆಂಡ: ಈ ವೇಳೆ ಮಾತನಾಡಿದ ರಮೇಶ್‌ ಸಹೋದರ ಸತೀಶ್‌, ಐಟಿ ನೀಡುವ ಹಿಂಸೆಗೆ ತುಂಬ ಜನ ಬಲಿ ಯಾಗಿದ್ದಾರೆ. ಇವರಿಗೆ ಮುಂದೆ ತಕ್ಕ ಪಾಠ ಕಲಿಸಿದರೆ ಒಳ್ಳೆಯದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ