ಆ್ಯಪ್ನಗರ

ಕನ್ನಡ ರಾಜ್ಯೋತ್ಸವದಂದು ಪುನೀತ್ ರಾಜ್‍ಕುಮಾರ್ ಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಚಾರ: ಸಚಿವ ಅಶ್ವತ್ಥ್ ನಾರಾಯಣ್

ಪಂಚರತ್ನ ಯೋಜನೆ ಬಗ್ಗೆ ಮಾತನಾಡಿದ ಸಚಿವ ಅಶ್ವತ್ಥ್ ನಾರಾಯಣ್, ಎಚ್ಡಿಕೆ ಉದ್ಯೋಗ, ಶಿಕ್ಷಣ, ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದಾರೆ‌. ಅದರಲ್ಲಿ ಮೂರು ಕೆಲಸ ನಾನೇ ಮಾಡುತ್ತಿದ್ದೇನೆ. ಯಾರೇ ಒಳ್ಳೆ ಕೆಲಸ ಮಾಡಿದರೂ ಸಂತೋಷ. ಅವರು ನಮ್ಮ ಕೆಲಸವನ್ನು ಅವರು ಮಾತನಾಡುತ್ತಿದ್ದಾರೆ. ಕೆಲಸದ ಬಗ್ಗೆ ಎಲ್ಲರೂ ಮಾತನಾಡಲಿ ಎಂದು ಶುಭ ಹಾರೈಸಿದರು. ನವೆಂಬರ್ 30ರೊಳಗೆ ನೂತನ ಜಿಲ್ಲಾಸ್ಪತ್ರೆ ಉದ್ಘಾಟನೆಯಾಗಲಿದೆ.ರಾಜೀವ್ ಗಾಂಧಿ ವಿವಿ ಸಂಬಂಧ ಆಡಳಿತಾತ್ಮಕ ಅನುಮೋದನೆ ದೊರೆಯಬೇಕು. ಇದಕ್ಕಾಗಿ ಕಾಯುತ್ತಿದ್ದೇವೆ‌.

Vijaya Karnataka Web 1 Nov 2022, 11:53 am

ಹೈಲೈಟ್ಸ್‌:

  • ಕೆಂಪೇಗೌಡರ ಗೌರವಾರ್ಥವಾಗಿ ಮೃತ್ತಿಕೆ ಸಂಗ್ರಹಣೆ
  • ಪ್ರತಿಮೆಯ ಗೋಪುರಕ್ಕೆ ಈ‌ ಮಣ್ಣನ್ನು ಬಳಸಲಾಗುವುದು
  • ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಹೇಳಿಕೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Ashwath Narayan
ರಾಮನಗರ: ನಟ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ನೀಡಿ ಗೌರವಿಸುತ್ತಿದ್ದೇವೆ. ಅವರ ತಂದೆಗೆ ಸಹ ಇದೇ ಪ್ರಶಸ್ತಿ ನೀಡಲಾಗಿತ್ತು. ರಾಜ್ಯೋತ್ಸವದಂದು ಈ ಪ್ರಶಸ್ತಿ ನೀಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಹೇಳಿದ್ರು.
ಕನ್ನಡ ರಾಜೋತ್ಸವ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಮಾತನಾಡಿದ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್, ಮೃತ್ತಿಕೆ ಸಂಗ್ರಹಣೆ ಎಲ್ಲೆಡೆ ಭಾವನಾತ್ಮಕವಾಗಿ ನಡೆಯುತ್ತಿದೆ. ಕೆಂಪೇಗೌಡರ ಗೌರವಾರ್ಥವಾಗಿ ನಡೆಯುತ್ತಿದೆ. 8 ರಂದು ಜಿಲ್ಲಾ ಕಚೇರಿಗಳಿಗೆ ಪೂಜೆ ಮಾಡಿ, ಬೆಂಗಳೂರಿಗೆ ಮೃತ್ತಿಕೆಯನ್ನು ಕಳುಹಿಸಲಾಗುತ್ತದೆ. ಪ್ರತಿಮೆಯ ಸುತ್ತಲಿನ ನಾಲ್ಕು ವಿಭಾಗಗಳಿಗೆ ಹಾಗೂ ಗೋಪುರಕ್ಕೆ ಈ‌ ಮಣ್ಣನ್ನು ಬಳಸಲಾಗುವುದು ಎಂದರು.

ಡಿ.ಕೆ.ಶಿವಕುಮಾರ್ ಮಾನಸಿಕ ಅಸ್ವಸ್ಥರಂತೆ ಮಾತನಾಡುತ್ತಾರೆ: ಡಾ.ಅಶ್ವತ್ಥ್ ನಾರಾಯಣ
ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಪ್ರತಿಭೆಗಳನ್ನು ನೀಡಲು ರಾಜ್ಯ ಸಜ್ಜಾಗಿದೆ. ನಮ್ಮ ರಾಜ್ಯದಲ್ಲಿ ಅತೀ ಕಡಿಮೆ ನಿರುದ್ಯೋಗಿಗಳಿದ್ದಾರೆ. ಅಮೃತ ಕಾಲವಾಗಿ ರಾಜ್ಯ ಹೊರಹೊಮ್ಮಲಿದೆ. ಎಂಟಿಬಿ ನಾಗರಾಜ್ ಆಡಿಯೋ ಸಂಬಂಧ ಇಲ್ಲದ ಬಣ್ಣ ಕಟ್ಟುವುದು ಸೂಕ್ತವಲ್ಲ. ಪೊಲೀಸ್ ಅಧಿಕಾರಿ ಸಾವಿನ ಸಂಬಂಧ ತನಿಖೆಗೆ ಸಿಎಂ ಆದೇಶಿಸಿದ್ದಾರೆ. ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಸಂಬಂಧ ತನಿಖೆ ನಡೆಯುತ್ತಿದೆ. ಮುಕ್ತವಾಗಿ ತನಿಖೆ ನಡೆಯುತ್ತಿದೆ ಎಂದು ಹೇಳಿದ್ರು.

ಇನ್ನು ಮತಾಂತರ ಸಂಬಂಧ ಪರದಾರ್ಶಕವಾಗಿ ಅವಕಾಶ ನೀಡಿ, ಕಾನೂನು ಜಾರಿ ತರಲಾಗಿದೆ. ಮತಾಂತರಿಗಳಿಗೆ ಕಾನೂನಿನ ಮೂಲಕ ಬಿಸಿ ಮುಟ್ಟಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ರು.

ಯುವಿಸಿಇ ಆಡಳಿತ ಮಂಡಳಿಗೆ ಸದಸ್ಯರ ನೇಮಕ; ಸಡಗೋಪನ್, ಬಿ.ವಿ.ಜಗದೀಶ್ ಗೆ ಸ್ಥಾನ
ಪಂಚರತ್ನ ಯೋಜನೆ ಬಗ್ಗೆ ಮಾತನಾಡಿದ ಸಚಿವರು, ಎಚ್ಡಿಕೆ ಉದ್ಯೋಗ, ಶಿಕ್ಷಣ, ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದಾರೆ‌. ಅದರಲ್ಲಿ ಮೂರು ಕೆಲಸ ನಾನೇ ಮಾಡುತ್ತಿದ್ದೇನೆ. ಯಾರೇ ಒಳ್ಳೆ ಕೆಲಸ ಮಾಡಿದರೂ ಸಂತೋಷ. ಅವರು ನಮ್ಮ ಕೆಲಸವನ್ನು ಅವರು ಮಾತನಾಡುತ್ತಿದ್ದಾರೆ. ಕೆಲಸದ ಬಗ್ಗೆ ಎಲ್ಲರೂ ಮಾತನಾಡಲಿ ಎಂದು ಶುಭ ಹಾರೈಸಿದರು.

ನವೆಂಬರ್ 30ರೊಳಗೆ ನೂತನ ಜಿಲ್ಲಾಸ್ಪತ್ರೆ ಉದ್ಘಾಟನೆಯಾಗಲಿದೆ. ರಾಜೀವ್ ಗಾಂಧಿ ವಿವಿ ಸಂಬಂಧ ಆಡಳಿತಾತ್ಮಕ ಅನುಮೋದನೆ ದೊರೆಯಬೇಕು. ಇದಕ್ಕಾಗಿ ಕಾಯುತ್ತಿದ್ದೇವೆ‌. ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡದಿರಲು ನಾನು ಯಾವುದೇ ಸೂಚನೆ ನೀಡಿಲ್ಲ. ನಾನು ಬೆನ್ನು ತಟ್ಟಲು ಹೇಳುತ್ತೆನೆ. ಕನ್ನಡ ಭವನಕ್ಕೆ ಸೂಕ್ತ ಜಾಗ ನೀಡಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ