ಮಾಗಡಿ: ದೇವರು ಅಂತರಂಗದ ಶಕ್ತಿ ತೋರಿಸುವ ಕನ್ನಡಿ ಇದ್ದಂತೆ ಎಂದು ಜಡೇದೇವರಮಠದ ಇಮ್ಮಡಿ ಬಸವರಾಜ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ಪಟ್ಟಣದ ಬಸವೇಶ್ವರ ದೇವಾಲಯದ ಪುನರ್ ಜೀರ್ಣೋದ್ಧಾರ, ರೇಣುಕಾಚಾರ್ಯ, ಬಸವೇಶ್ವರ, ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿ,''ದೇವರನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ನೂತನ ದೇವಾಲಯವನ್ನು ನಿರ್ಮಿಸುವುದಕ್ಕಿಂತ ಹಳೆಯ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದರೆ ನೂರು ಹೊಸ ದೇವಾಲಯಗಳನ್ನು ನಿರ್ಮಿಸಿದಷ್ಟು ಪುಣ್ಯ ಬರುತ್ತದೆ,''ಎಂದು ತಿಳಿಸಿದರು.
ಕೈ ಮುಗಿಯುವವರ ಹೃದಯ: ''ದೇಗುಲ ಜೀರ್ಣೋದ್ಧಾರ ಭಕ್ತಿಯ ಪ್ರತೀಕ. ದೇಹಕ್ಕೆ ಹೊಸಬಟ್ಟೆ ಧರಿಸಿದಂತೆ ದೇಗುಲದ ಜೀರ್ಣೋದ್ಧಾರ ಮಾಡಿಸಬೇಕು. ಭಕ್ತಿ, ಜ್ಞಾನ, ವೈರಾಗ್ಯದಿಂದ ಭಗವಂತಹ ಧ್ಯಾನ ಮಾಡಿದರೆ ಮೋಕ್ಷ ದೊರೆಯುತ್ತದೆ. ಆತ್ಮಾವಲೋಕನದಿಂದ ಅಂತರಂಗ ಶುದ್ಧಿ ಸಾಧ್ಯ. ಕೈ ಮುಗಿಯುವವರ ಹೃದಯವೇ ದೇವರ ಅವಾಸಸ್ಥಾನ ಎಂಬುದು ಜ್ಞಾನಿಗಳ ನಂಬುಗೆ,'' ಎಂದು ಹೇಳಿದರು.
ಪಟ್ಟಣದ ವೀರಶೈವ ಮಂಡಲಿ ಅಧ್ಯಕ್ಷ ರುದ್ರಮೂರ್ತಿ ಮಾತನಾಡಿ,'' ಪಟ್ಟಣದ ಅರಳೇಪೇಟೆಯಲ್ಲಿ 1948 ರ ಸುಮಾರಿಗೆ ಬಸವಣ್ಣನ ದೇವಾಲಯವನ್ನು ನಮ್ಮ ಹಿರಿಯರು ನಿರ್ಮಿಸಿದ್ದರು. ಈ ದೇಗುಲದಲ್ಲಿ ವೀರಶೈವ ಸಮಾಜದವರು ವರ್ಷಪೂರ್ತಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ದೇವಾಲಯದ ಕಟ್ಟಡದ ಕೆಲವು ಭಾಗಗಳು ಶಿಥಿಲಗೊಂಡಿದ್ದರಿಂದ ದಾನಿಗಳ ನೆರವಿನಿಂದ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಗಿದೆ,''ಎಂದು ನುಡಿದರು.
ಟಿವಿ, ಮೊಬೈಲ್ಗೆ ಸಮಯ: ವೀರಶೈವ ಮುಖಂಡ ಪೊಲೀಸ್ ವಿಜಯ್ಕುಮಾರ್ ಮಾತನಾಡಿ,''ಬಸವಣ್ಣನ ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಸಮಾಜದ ಎಲ್ಲರೂ ಭಾಗವಹಿಸಬೇಕು. ಇಂದಿನ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗಿಂತ ಟಿವಿ, ಮೊಬೈಲ್ಗಳಲ್ಲಿ ಹೆಚ್ಚಿನ ಸಮಯವನ್ನು ಮೀಸಲಿಡಲಿಡುತ್ತಿರುವುದು ಬೇಸರ ಸಂಗತಿ. ಇದರಿಂದ ಮನಸ್ಸಿಗೆ ಆಶಾಂತಿ ಉಂಟಾಗುತ್ತದೆಯೇ ಹೊರತು ಶಾಂತಿ, ನೆಮ್ಮದಿ ದೂರವಾಗುತ್ತವೆ. ಸಮಾಜದ ಬಂಧುಗಳು ದಿನಕ್ಕೆ ಒಂದು ಬಾರಿಯಾದರೂ ದೇವಾಲಯಕ್ಕೆ ಬಂದು ಪೂಜೆ ಪುನಸ್ಕಾರದಲ್ಲಿ ತೊಡಗಿಸಿಕೊಳ್ಳಬೇಕು,'' ಎಂದು ಮನವಿ ಮಾಡಿದರು.
ವೀರಶೈವ ಮಂಡಳಿ ಉಪಾಧ್ಯಕ್ಷ ಎಂ.ಆರ್.ಶಿವಕುಮಾರ್, ಗೌರವಾಧ್ಯಕ್ಷ ಎಂ.ಬಿ.ಶಿವಾನಂದ್, ಕಾರ್ಯದರ್ಶಿ ವಿ.ಪಿ.ಲೋಕೇಶ್, ನಿರ್ದೇಶಕರಾದ ರವಿಶಂಕರ್, ಎಸ್.ನಟರಾಜು, ಪ್ರದೀಪ್, ಎಂ.ಜೆ.ವಿಜಯ್ಕುಮಾರ್, ವಿನಯ್, ಶರತ್, ಪುರಸಭಾ ಸದಸ್ಯೆ ಶಿವರುದ್ರಮ್ಮ ಹಾಗೂ ಅಕ್ಕನ ಬಳಗದ ಸದಸ್ಯೆಯರು ಭಾಗವಹಿಸಿದ್ದರು.
ಪಟ್ಟಣದ ಬಸವೇಶ್ವರ ದೇವಾಲಯದ ಪುನರ್ ಜೀರ್ಣೋದ್ಧಾರ, ರೇಣುಕಾಚಾರ್ಯ, ಬಸವೇಶ್ವರ, ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿ,''ದೇವರನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ನೂತನ ದೇವಾಲಯವನ್ನು ನಿರ್ಮಿಸುವುದಕ್ಕಿಂತ ಹಳೆಯ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದರೆ ನೂರು ಹೊಸ ದೇವಾಲಯಗಳನ್ನು ನಿರ್ಮಿಸಿದಷ್ಟು ಪುಣ್ಯ ಬರುತ್ತದೆ,''ಎಂದು ತಿಳಿಸಿದರು.
ಕೈ ಮುಗಿಯುವವರ ಹೃದಯ: ''ದೇಗುಲ ಜೀರ್ಣೋದ್ಧಾರ ಭಕ್ತಿಯ ಪ್ರತೀಕ. ದೇಹಕ್ಕೆ ಹೊಸಬಟ್ಟೆ ಧರಿಸಿದಂತೆ ದೇಗುಲದ ಜೀರ್ಣೋದ್ಧಾರ ಮಾಡಿಸಬೇಕು. ಭಕ್ತಿ, ಜ್ಞಾನ, ವೈರಾಗ್ಯದಿಂದ ಭಗವಂತಹ ಧ್ಯಾನ ಮಾಡಿದರೆ ಮೋಕ್ಷ ದೊರೆಯುತ್ತದೆ. ಆತ್ಮಾವಲೋಕನದಿಂದ ಅಂತರಂಗ ಶುದ್ಧಿ ಸಾಧ್ಯ. ಕೈ ಮುಗಿಯುವವರ ಹೃದಯವೇ ದೇವರ ಅವಾಸಸ್ಥಾನ ಎಂಬುದು ಜ್ಞಾನಿಗಳ ನಂಬುಗೆ,'' ಎಂದು ಹೇಳಿದರು.
ಪಟ್ಟಣದ ವೀರಶೈವ ಮಂಡಲಿ ಅಧ್ಯಕ್ಷ ರುದ್ರಮೂರ್ತಿ ಮಾತನಾಡಿ,'' ಪಟ್ಟಣದ ಅರಳೇಪೇಟೆಯಲ್ಲಿ 1948 ರ ಸುಮಾರಿಗೆ ಬಸವಣ್ಣನ ದೇವಾಲಯವನ್ನು ನಮ್ಮ ಹಿರಿಯರು ನಿರ್ಮಿಸಿದ್ದರು. ಈ ದೇಗುಲದಲ್ಲಿ ವೀರಶೈವ ಸಮಾಜದವರು ವರ್ಷಪೂರ್ತಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ದೇವಾಲಯದ ಕಟ್ಟಡದ ಕೆಲವು ಭಾಗಗಳು ಶಿಥಿಲಗೊಂಡಿದ್ದರಿಂದ ದಾನಿಗಳ ನೆರವಿನಿಂದ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಗಿದೆ,''ಎಂದು ನುಡಿದರು.
ಟಿವಿ, ಮೊಬೈಲ್ಗೆ ಸಮಯ: ವೀರಶೈವ ಮುಖಂಡ ಪೊಲೀಸ್ ವಿಜಯ್ಕುಮಾರ್ ಮಾತನಾಡಿ,''ಬಸವಣ್ಣನ ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಸಮಾಜದ ಎಲ್ಲರೂ ಭಾಗವಹಿಸಬೇಕು. ಇಂದಿನ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗಿಂತ ಟಿವಿ, ಮೊಬೈಲ್ಗಳಲ್ಲಿ ಹೆಚ್ಚಿನ ಸಮಯವನ್ನು ಮೀಸಲಿಡಲಿಡುತ್ತಿರುವುದು ಬೇಸರ ಸಂಗತಿ. ಇದರಿಂದ ಮನಸ್ಸಿಗೆ ಆಶಾಂತಿ ಉಂಟಾಗುತ್ತದೆಯೇ ಹೊರತು ಶಾಂತಿ, ನೆಮ್ಮದಿ ದೂರವಾಗುತ್ತವೆ. ಸಮಾಜದ ಬಂಧುಗಳು ದಿನಕ್ಕೆ ಒಂದು ಬಾರಿಯಾದರೂ ದೇವಾಲಯಕ್ಕೆ ಬಂದು ಪೂಜೆ ಪುನಸ್ಕಾರದಲ್ಲಿ ತೊಡಗಿಸಿಕೊಳ್ಳಬೇಕು,'' ಎಂದು ಮನವಿ ಮಾಡಿದರು.
ವೀರಶೈವ ಮಂಡಳಿ ಉಪಾಧ್ಯಕ್ಷ ಎಂ.ಆರ್.ಶಿವಕುಮಾರ್, ಗೌರವಾಧ್ಯಕ್ಷ ಎಂ.ಬಿ.ಶಿವಾನಂದ್, ಕಾರ್ಯದರ್ಶಿ ವಿ.ಪಿ.ಲೋಕೇಶ್, ನಿರ್ದೇಶಕರಾದ ರವಿಶಂಕರ್, ಎಸ್.ನಟರಾಜು, ಪ್ರದೀಪ್, ಎಂ.ಜೆ.ವಿಜಯ್ಕುಮಾರ್, ವಿನಯ್, ಶರತ್, ಪುರಸಭಾ ಸದಸ್ಯೆ ಶಿವರುದ್ರಮ್ಮ ಹಾಗೂ ಅಕ್ಕನ ಬಳಗದ ಸದಸ್ಯೆಯರು ಭಾಗವಹಿಸಿದ್ದರು.