ಆ್ಯಪ್ನಗರ

ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷ ಣ ನೀಡಬೇಕು

ವಿದ್ಯೆ ಎಂಬ ಆಸ್ತಿಯನ್ನು ಯಾರೂ ಸಹ ಕದಿಯಲೂ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಕೃಷಿಕ ಸಮಾಜದ ದೆಹಲಿ ಪ್ರತಿನಿಧಿ ಬೆಳಗವಾಡಿ ಸತೀಶ್‌ ಅಭಿಪ್ರಾಯಪಟ್ಟರು...

Vijaya Karnataka 18 Jun 2019, 5:00 am
ಮಾಗಡಿ: ವಿದ್ಯೆ ಎಂಬ ಆಸ್ತಿಯನ್ನು ಯಾರೂ ಸಹ ಕದಿಯಲೂ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಕೃಷಿಕ ಸಮಾಜದ ದೆಹಲಿ ಪ್ರತಿನಿಧಿ ಬೆಳಗವಾಡಿ ಸತೀಶ್‌ ಅಭಿಪ್ರಾಯಪಟ್ಟರು.
Vijaya Karnataka Web government school students should be punished
ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷ ಣ ನೀಡಬೇಕು


ವಿಶ್ವ ಪಠ್ಯ ಪುಸ್ತಕ ದಿನಾಚರಣೆ ಪ್ರಯುಕ್ತ ತಾಲೂಕಿನ ಬೆಳಗವಾಡಿ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ಶ್ರದ್ಧೆಯಿಂದ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ, ಪೋಷಕರಿಗೆ ಹಾಗೂ ತಮಗೆ ಕಲಿಸಿದ ಗುರುವಿಗೆ ಹೆಸರು ತರಬೇಕು. ಹಾಗೆಯೇ ಶಿಕ್ಷ ಕರು ಸಹ ಸದಾ ಅಧ್ಯಯನಶೀಲರಾಗಿದ್ದು, ಹೊಸ ಹೊಸ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ ಹೆಚ್ಚು ಅಂಕಗಳನ್ನು ತೆಗೆಯಲು ಸಹಕರಿಯಾಗಬೇಕು. ಸರಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡ ವಿದ್ಯಾರ್ಥಿಗಳೇ ದಾಖಲಾಗುವುದರಿಂದ ಅವರ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷ ಕರು ಎಲ್ಲಾ ರೀತಿಯ ಸಹಕಾರ, ನೆರವು ನೀಡಬೇಕು ಎಂದು ಸತೀಶ್‌ ಮನವಿ ಮಾಡಿದರು.

ಬೆಳಗವಾಡಿ ಸರಕಾರಿ ಪ್ರಾಥಮಿಕ ಪಾಠ ಶಾಲೆಯ ಸುಮಾರು 100 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಸತೀಶ್‌ ವಿತರಿಸಿದರು. ಶಿಕ್ಷ ಕರಾದ ಮಾಯಣ್ಣ, ಉಮೇಶ್‌, ವೆಂಕಟೇಶ್‌, ಗಂಗಾಧರ, ಸಂತೋಷ್‌, ವೆಂಕಟೇಶ್‌, ರೇಖಾ, ಭಾರತಿ, ಕೃಷ್ಣಮೂರ್ತಿ, ಬೆಟ್ಟಸ್ವಾಮಿ, ಲೋಕೇಶ್‌, ಬಸವರಾಜು, ತಿಮ್ಮಯ್ಯ, ರಂಗಸ್ವಾಮಿ, ಎಸ್‌ಡಿಎಂಸಿ ಸದಸ್ಯರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ