ಆ್ಯಪ್ನಗರ

ಅಜ್ಜನಹಳ್ಳಿ ಪಿಡಿಒ ಮೇಲೆ ಗ್ರಾಪಂ ಸದಸ್ಯ ಹಲ್ಲೆ

ನರೇಗಾ ಯೋಜನೆಯ ಎನ್‌ಎಂಆರ್‌ ತೆಗೆಯಲಿಲ್ಲ ಎಂದು ಗ್ರಾಪಂ ಸದಸ್ಯನೊಬ್ಬ ಪಿಡಿಒ ಮೇಲೆ ಹಲ್ಲೆ ನಡೆಸಿರುವ ಘಟನೆ ಅಜ್ಜನಹಳ್ಳಿ ಗ್ರಾಪಂ ಕಚೇರಿಯಲ್ಲಿ ನಡೆದಿದೆ.

Vijaya Karnataka 8 Jun 2019, 4:21 pm
ಮಾಗಡಿ: ನರೇಗಾ ಯೋಜನೆಯ ಎನ್‌ಎಂಆರ್‌ ತೆಗೆಯಲಿಲ್ಲ ಎಂದು ಗ್ರಾಪಂ ಸದಸ್ಯನೊಬ್ಬ ಪಿಡಿಒ ಮೇಲೆ ಹಲ್ಲೆ ನಡೆಸಿರುವ ಘಟನೆ ಅಜ್ಜನಹಳ್ಳಿ ಗ್ರಾಪಂ ಕಚೇರಿಯಲ್ಲಿ ನಡೆದಿದೆ.
Vijaya Karnataka Web grama panchayat member attack on ajjanahalli pdo officer
ಅಜ್ಜನಹಳ್ಳಿ ಪಿಡಿಒ ಮೇಲೆ ಗ್ರಾಪಂ ಸದಸ್ಯ ಹಲ್ಲೆ


ತಾಲೂಕಿನ ಮಾಡಬಾಳ್‌ ಹೋಬಳಿಯ ಅಜ್ಜನಹಳ್ಳಿ ಗ್ರಾಪಂ ವ್ಯಾಪ್ತಿಯ ಹೊಸದೊಡ್ಡಿ ವಾರ್ಡ್‌ನ ಸದಸ್ಯ ರಂಗಸ್ವಾಮಿ ನರೇಗಾ ಯೋಜನೆಯಡಿಯಲ್ಲಿ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದ್ದು, ಅಜ್ಜನಹಳ್ಳಿ ಪಿಡಿಒ ಶಿವಸ್ವಾಮಿ 75 ಸಾವಿರ ರೂ. ಎನ್‌ಎಂಆರ್‌ ತೆಗೆದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ರಂಗಸ್ವಾಮಿ, 1.25 ಲಕ್ಷ ರೂ. ಎನ್‌ಎಂಆರ್‌ ತೆಗೆಯುವಂತೆ ಒತ್ತಾಯಿಸಿದ್ದರು. ಕಾಮಗಾರಿ ಮುಗಿದಿರುವಷ್ಟಕ್ಕೆ ಎನ್‌ಎಂಆರ್‌ ತೆಗೆದಿದ್ದು, ಹೆಚ್ಚಿನ ಹಣಕ್ಕೆ ತೆಗೆಯುತ್ತಿಲ್ಲವೇಕೆ ಎಂದು ಪಿಡಿಒ ಶಿವಸ್ವಾಮಿ ಅವರ ಮೇಲೆ ಸದಸ್ಯ ರಂಗಸ್ವಾಮಿ ಕಚೇರಿಯಲ್ಲಿಯೇ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಪಿಡಿಒ ಅವರನ್ನು ಮಾಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಶಿವಸ್ವಾಮಿ ಅವರ ಭುಜಕ್ಕೆ ಹಾಗೂ ಇತರೆಡೆಗಳಲ್ಲಿ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಮನಗರ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮಾಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ಬಗ್ಗೆ ಗಾಯಾಳು ಪಿಡಿಒ ಶಿವಸ್ವಾಮಿ ಮಾತನಾಡಿ, ''ಹೊಸದೊಡ್ಡಿ ವಾರ್ಡ್‌ನ ಸದಸ್ಯ ರಂಗಸ್ವಾಮಿ ನರೇಗಾ ಯೋಜನೆಯಡಿ ಕಾಮಗಾರಿಯನ್ನು ನಡೆಸುತ್ತಿದ್ದು, ಕೆಲಸ ಪೂರ್ಣಗೊಳಿಸದೇ ಎನ್‌ಎಂಆರ್‌ ತೆಗೆಯುವಂತೆ ಒತ್ತಾಯಿಸುತ್ತಾರೆ. ಇದೇ ರೀತಿ ಈ ಹಿಂದೆ ಅಜ್ಜನಹಳ್ಳಿ ಗ್ರಾಪಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಯ್ಯ, ಮುತ್ತುರಾಜ್‌ ಎಂಬುವವರ ಮೇಲೆಯೂ ಸದಸ್ಯ ರಂಗಸ್ವಾಮಿ ಹಲ್ಲೆ ನಡೆಸಿದ್ದು, ಈ ಬಗ್ಗೆ ದೂರು ಸಹ ದಾಖಲಾಗಿದೆ. ರೌಡಿ ವರ್ತನೆ ತೋರುತ್ತಿರುವ ಸದಸ್ಯ ರಂಗಸ್ವಾಮಿ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕು,'' ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ