ಆ್ಯಪ್ನಗರ

ಲಂಚದ ಹಾವಳಿಗೆ ಬೇಸತ್ತು ಗ್ರಾಪಂ ಸದಸ್ಯೆ ರಾಜೀನಾಮೆ

ಗ್ರಾಮ ಪಂಚಾಯಿತಿಯಲ್ಲಿವ್ಯಾಪಕವಾಗಿ ಬೇರುಬಿಟ್ಟಿರುವ ಲಂಚಾವತಾರಕ್ಕೆ ಬೇಸತ್ತು ಗ್ರಾಪಂ ಸದಸ್ಯೆಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Vijaya Karnataka 29 Aug 2019, 3:56 pm
ಖಾತೆ ಮಾಡಲು, ಆಶ್ರಯ ಮನೆ ಮಂಜೂರಿಗೆ, ನರೇಗಾ ಸವಲತ್ತು ಪಡೆಯಲು ಲಂಚ ನೀಡುವುದು ಅನಿವಾರ‍್ಯ
Vijaya Karnataka Web grapam member resignation due to fed up of bribing
ಲಂಚದ ಹಾವಳಿಗೆ ಬೇಸತ್ತು ಗ್ರಾಪಂ ಸದಸ್ಯೆ ರಾಜೀನಾಮೆ


ಕನಕಪುರ: ಗ್ರಾಮ ಪಂಚಾಯಿತಿಯಲ್ಲಿವ್ಯಾಪಕವಾಗಿ ಬೇರುಬಿಟ್ಟಿರುವ ಲಂಚಾವತಾರಕ್ಕೆ ಬೇಸತ್ತು ಗ್ರಾಪಂ ಸದಸ್ಯೆಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಗ್ರಾಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುÊ Üಟಿ.ಬೇಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪಲತಾ ರವಿಕುಮಾರ್‌, ತಮ್ಮ ರಾಜೀನಾಮೆ ಪತ್ರದಲ್ಲಿಲಂಚಾವತಾರ ತೆರೆದಿಟ್ಟಿರುವುದು ವಿಶೇಷ.

ಎಲ್ಲದಕ್ಕೂ ಲಂಚ:


ಮನೆಯ ಖಾತೆ ಮಾಡಿಕೊಡಲು ಲಂಚ, ಆಶ್ರಯ ಮನೆ ಕೇಳಿದರೆ ಲಂಚ, ನರೇಗಾದ ಕುರಿಶೆಡ್ಡು, ಕೊಟ್ಟಿಗೆ, ಕೃಷಿಹೊಂಡ ಸೇರಿದಂತೆ ಯಾವುದೇ ಸವಲತ್ತು ಕೆಳಿದರೂ ಲಂಚ, ಇದರಿಂದಾಗಿ ನನಗೆ ಮತ ಹಾಕಿದ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ತೀವ್ರ ಮನನೊಂದು ಗ್ರಾಮಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪುಷ್ಪಲತಾ ತಿಳಿಸಿದ್ದಾರೆ.

ಅಧ್ಯಕ್ಷರಾಗಿದ್ದರು:

ರಾಜೀನಾಮೆ ನೀಡಿದ ಪುಷ್ಪಲತಾ ಯಾರೋ ಸಾಮಾನ್ಯ ಹೆಣ್ಣು ಮಗಳಲ್ಲ. ಟಿ.ಬೇಕುಪ್ಪೆ ಗ್ರಾಮಪಂಚಾಯಿತಿಯಲ್ಲಿಕಳೆದ ಸಾಲಿನ ಗ್ರಾ.ಪಂ. ಅಧ್ಯಕ್ಷರಾಗಿ 28 ತಿಂಗಳ ಅಧಿಧಿಕಾರ ನಡೆಸಿದ್ದರು. ಮತ್ತೊಬ್ಬರಿಗೆ ಅವಕಾಶ ನೀಡಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರಿಗೇ ಲಂಚ ನೀಡಿದೇ ಚಿಕ್ಕ ಕೆಲಸವೂ ಆಗುತ್ತಿಲ್ಲವಂತೆ.

ಅಷ್ಟೊಂದು ಹಣ ಎಲ್ಲಿಂದ ತರುವುದು!:

ಗ್ರಾಮಪಂಚಾಯಿತಿ ವ್ಯಾಪ್ತಿಯ ಮನೆಗಳ ಖಾತೆ ಬದಲಾವಣೆ ಮಾಡಿಕೊಡಲು ಕೇಳಿದರೆ 10 ರಿಂದ 15 ಸಾವಿರ ಲಂಚ ಕೇಳುತ್ತಾರೆ, ಇನ್ನು ಬಡವರಿಗಾಗಿ ಮೀಸಲಿರುವ ಆಶ್ರಯ ಮನೆ ಕೇಳಲು ಹೋದರೆ 10 ಸಾವಿರ ಲಂಚ ಕೇಳುತ್ತಾರೆ. ಈ ಬಗ್ಗೆ ಅಧಿಧಿಕಾರಿಗಳಿಗೆ ದೂರಿದರೂ ಯಾವುದೇ ಪ್ರಯೋಜನವಾಗಿಲ್ಲಎಂದು ತಿಳಿಸಿದ್ದಾರೆ.

ಗದರಿ ಕಳಿಸುತ್ತಾರೆ:

ಜನ ಸಾಮಾನ್ಯರು ಕೆಲಸಕ್ಕೆ ಹೋದರೆ ಲಂಚ ಕೇಳುತ್ತಾರೆ. ಲಂಚ ಏಕೆ ಕೇಳುತ್ತೀರಿ ಎಂದು ನಾವು ಪ್ರಶ್ನಿಸಿದರೆ, ನಿಮಗೇಕೆ ಇಲ್ಲದ ಉಸಾಬರಿ ಎಂದು ಗದರಿ ಕಳಿಸುತ್ತಾರೆ. ಸ್ಥಳೀಯ ಮುಖಂಡರೊಬ್ಬರು ನನಗೆ ಬೆದರಿಕೆಯನ್ನೂ ಹಾಕುತ್ತಿದ್ದಾರೆ. ಜನರ ಚಿಕ್ಕ ಕೆಲಸ ಮಾಡಿಸಿಕೊಡಲಾಗದ ಮೇಲೆ ನಾನೇಕೆ ಸದಸ್ಯೆಯಾಗಿರಬೇಕು ಎಂದು ಪುಷ್ಪಲತಾ ಪ್ರಶ್ನಿಸಿದ್ದಾರೆ.

ಇದೇನು ಹೊಸದಲ್ಲ:

ಪುಷ್ಪಲತಾ ಅವರ ಪತಿ ಕೂಟ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದು, ತಾಪಂ ಇಒ ಶಿವರಾಮು ಮತ್ತು ಟಿ.ಬೇಕುಪ್ಪೆ ಗ್ರಾಪಂ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಗಲಾಟೆ ಬಳಿಕ ಹಲವು ಕಾಮಗಾರಿಗಳ ಹಣ ಮಂಜೂರಾಗಿತ್ತು ಎಂಬುದು ವಿಶೇಷ. ಮತ್ತೆ ಗ್ರಾಪಂ ಸದಸ್ಯೆಯೊಬ್ಬರು ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿರುವುದು ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ