ಆ್ಯಪ್ನಗರ

ಕಾರ್ಖಾನೆಗಳಿಂದ ತೆರಿಗೆ ವಸೂಲಿಗೆ ಗ್ರಾಪಂ ಸಭೆ ನಿರ್ಣಯ

ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಕಾರ‍್ಯನಿರ್ವಹಿಸುತ್ತಿರುವ 66 ಕಾರ್ಖಾನೆಗಳಿಂದ ಬಾಕಿಯಾಗಿರುವ ತೆರಿಗೆ ಹಣವನ್ನು ವಸೂಲಿ ಮಾಡಲು ಗ್ರಾಮ ಸಭೆಯಲ್ಲಿನಿರ್ಣಯ ಕೈಗೊಳ್ಳಲಾಯಿತು.

Vijaya Karnataka 31 Aug 2019, 4:23 pm
ಹಾರೋಹಳ್ಳಿ (ಕನಕಪುರ ತಾ.): ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಕಾರ‍್ಯನಿರ್ವಹಿಸುತ್ತಿರುವ 66 ಕಾರ್ಖಾನೆಗಳಿಂದ ಬಾಕಿಯಾಗಿರುವ ತೆರಿಗೆ ಹಣವನ್ನು ವಸೂಲಿ ಮಾಡಲು ಗ್ರಾಮ ಸಭೆಯಲ್ಲಿನಿರ್ಣಯ ಕೈಗೊಳ್ಳಲಾಯಿತು.
Vijaya Karnataka Web grapham assembly decision on tax evasion from factories
ಕಾರ್ಖಾನೆಗಳಿಂದ ತೆರಿಗೆ ವಸೂಲಿಗೆ ಗ್ರಾಪಂ ಸಭೆ ನಿರ್ಣಯ


ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್‌.ಲಕ್ಷತ್ರ್ಮಣ್‌ರವರ ಅಧ್ಯಕ್ಷತೆಯಲ್ಲಿಶುಕ್ರವಾರ ಹೊನ್ನಾಲಗನದೊಡ್ಡಿ ಗ್ರಾಮದಲ್ಲಿಜರುಗಿದ ಗ್ರಾಮಸಭೆಯಲ್ಲಿ, ತೆರಿಗೆ ವಂಚಿಸುತ್ತಿರುವ ಕಾರ್ಖಾನೆಗಳಿಂದ ಕಂದಾಯ ವಸೂಲಿಗೆ ಆಗ್ರಹಿಸಲಾಯಿತು.

ರಸ್ತೆ ಹಾಳು: ಕಾರ್ಖಾನೆಗಳಿಂದ ಗ್ರಾಮದ ರಸ್ತೆಗಳು ಹಾಳಾಗುತ್ತಿವೆ. ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಇದನ್ನು ಸರಿಪಡಿಸಲು ಜನರ ತೆರಿಗೆ ಹಣ ಭಾರೀ ಪ್ರಮಾಣದಲ್ಲಿಪೋಲಾಗುತ್ತಿದೆ. ಕಾರ್ಖಾನೆಗಳಿಂದ ತೆರಿಗೆ ವಸೂಲಿ ಸಂಬಂಧ ಕೆ.ಐ.ಎ.ಡಿ.ಬಿ.ಗೆ ಪತ್ರ ಬರೆದು ತೆರಿಗೆ ವಸೂಲಿ ಮಾಡಲು ಸಭೆ ನಿರ್ಣಯ ಕೈಗೊಂಡಿತು.

ವಸತಿ ಯೋಜನೆ ವಿಫಲ:
ಕೆಲ ವರ್ಷಗಳ ಹಿಂದೆ ವಸತಿ ಯೋಜನೆಯಡಿ ಬಡವರಿಗೆ ಮನೆ ಹಂಚಲು ನಿರ್ಧರಿಸಿದ್ದರೂ ಕೂಡ ಮನೆ ಪಡೆಯಲು ಯಾರೂ ಮುಂದೆ ಬಾರದ ಕಾರಣ ವಸತಿ ಯೋಜನೆಯ ಕಟ್ಟಡಗಳು ಹಾಳು ಬಿದ್ದಿವೆ. ಹಿಂದೆ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಈ ಸಂಬಂಧ ನೋಟಿಸ್‌ ಜಾರಿ ಮಾಡಿ, ಮನೆ ಅಗತ್ಯ ಇರುವವರಿಗೆ ಹಂಚಲು ನಿರ್ಧರಿಸಲಾಯಿತು.

ನರೇಗಾ ಸದ್ಭಳಕೆಗೆ ವಿಫಲ: ಸಭೆಯಲ್ಲಿಜಿಲ್ಲಾಪಂಚಾಯತಿ ಸದಸ್ಯ ಹೆಚ್‌.ಕೆ.ನಾಗರಾಜು ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ಹಾಗು ರೈತರ ಶ್ರೇಯೋಭಿವೃದ್ಧಿಗೆ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿದ್ದರೂ, ಈ ಯೋಜನೆಯ ಸದ್ಬಳಕೆಯನ್ನು ಸಮರ್ಪಕವಾಗಿ ಬಳಸಿಕೊಂಡು ಮೂಲಭೂತ ಸೌಕರ್ಯಗಳನ್ನು ಪಡೆಯಲು ವಿಳಂಬವಾಗುತ್ತಿದೆ. ಕೂಡಲೇ ಈ ಯೋಜನೆ ಹಾಗು ಸರಕಾರದ ಸವಲತ್ತುಗಳನ್ನು ಪಡೆದುಕೊಂಡು ಜನರು ಪ್ರಗತಿ ಸಾಧಿಸುವಂತೆ ಕರೆ ನೀಡಿದರು.

ಸೌಲಭ್ಯಕ್ಕೆ ಹೆಸರು ನೋಂದಾಯಿಸಲು ಮನವಿ:
ಪಿಡಿಒ ದೊಡ್ಡಲಿಂಗೇಗೌಡ ಮಾತನಾಡಿ, ಕಳೆದ ಸಾಲಿನ ಕ್ರಿಯಾಯೋಜನೆಗಳಿಗೆ ಅನುಮೋದನೆಯನ್ನು ಪಡೆದು ಮುಂದಿನ ವಸತಿ ಫಲಾನುಭವಿಗಳ ಪಟ್ಟಿ, 2019-20ನೇ ಸಾಲಿನ ನರೇಗಾ ಯೋಜನೆ ನಿರ್ವಹಿಸಲು ವೈಯಕ್ತಿಕ ಹಾಗು ಸಮುದಾಯಿಕ ಕಾಮಗಾರಿ ಪಟ್ಟಿ ಆಯ್ಕೆ, ವಿವಿಧ ವಸತಿ ಯೋಜನೆಗಳ ಫಲಾನುಭವಗಳ ಪಟ್ಟಿ, ಕಾಮಗಾರಿಗಳ ಪಟ್ಟಿ ತಯಾರಿಸುವುದು ಮತ್ತು ಹೆಚ್ಚಿನ ಸವಲತ್ತು ಪಡೆದುಕೊಳ್ಳಲು ಪಂಚಾಯತಿಯಲ್ಲಿತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.

ಸವಲತ್ತು ಪಡೆಯಲು ಸಲಹೆ: ನೂಡಲ್‌ ಅಧಿಕಾರಿಯಾಗಿದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಧಾಕೃಷ್ಣ, ಕೃಷಿ ಇಲಾಖೆಯ ಸವಲತ್ತುಗಳನ್ನು ಪಡೆದುಕೊಳ್ಳಲು ತಿಳಿಸಿದರು. ಪಶು, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಮ್ಮ ಸವಲತ್ತುಗಳ ಬಗ್ಗೆ ತಿಳಿಸಿಕೊಟ್ಟರು. ಜಿ.ಪಂ. ಇಂಜಿನಿಯರ್‌ ಚಂದ್ರಶೇಖರ್‌, ಗ್ರಾ.ಪಂ. ಉಪಾಧ್ಯಕ್ಷೆ ಲಲಿತನಾರಾಯಣ್‌, ಸದಸ್ಯರಾದ ಶಿವನಂಜಪ್ಪ, ಹರೀಶ್‌, ಅರುಣ್‌, ಕರಿಯಪ್ಪ, ಶ್ರೀನಿವಾಸ್‌, ಮಂಜುನಾಥ್‌ ಸೇರಿದಂತೆ ಗ್ರಾಮಸ್ಥರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ