ಆ್ಯಪ್ನಗರ

ಜಿಜಿಎಂಎಸ್‌ ಶಾಲೆಯಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಪಾಕಿಸ್ತಾನ ಬೆಂಬಲಿತ ಜೈಷೆ ಮೊಹಮದ್‌ ಸಂಘಟನೆ ಪ್ರಚೊದಿತ ಆತ್ಮಾಹುತಿ ಬಾಂಬ್‌ ದಾಳಿಯಿಂದಾಗಿ ನಮ್ಮ 42 ವೀರಯೋಧರು ಹುತಾತ್ಮರಾಗಿರುವುದು ಅತ್ಯಂತ ನೋವಿನ ...

Vijaya Karnataka 16 Feb 2019, 5:00 am
ಮಾಗಡಿ: ಪಾಕಿಸ್ತಾನ ಬೆಂಬಲಿತ ಜೈಷೆ ಮೊಹಮದ್‌ ಸಂಘಟನೆ ಪ್ರಚೊದಿತ ಆತ್ಮಾಹುತಿ ಬಾಂಬ್‌ ದಾಳಿಯಿಂದಾಗಿ ನಮ್ಮ 42 ವೀರಯೋಧರು ಹುತಾತ್ಮರಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಜಿಜಿಎಂಎಸ್‌ ಶಾಲೆಯ ಮುಖ್ಯ ಶಿಕ್ಷ ಕಿ ಮಾಲತಮ್ಮ ನುಡಿದರು.
Vijaya Karnataka Web greet martyrs in ggms school
ಜಿಜಿಎಂಎಸ್‌ ಶಾಲೆಯಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ


ಪಟ್ಟಣದ ಜಿಜಿಎಂಎಸ್‌ ಶಾಲೆಯಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ''ಜೀವ ವಿರೋಧಿ ಚಟುವಟಿಕೆ ನಡೆಸುವುದರಲ್ಲಿ ಪಾಕಿಸ್ತಾನ ಅತ್ಯಂತ ಮುಂಚೂಣಿಯಲ್ಲಿದೆ. ತನ್ನ ಒಡಲಿನ ಬೆಂಕಿ ತನ್ನನ್ನೇ ಸುಡುತ್ತದೆ. ಈ ವಿಚಾರದಲ್ಲಿ ವಿಶ್ವಸಂಸ್ಥೆ ಮುಂದೆ ಬಂದು ಉಗ್ರರ ಬುಡವನ್ನು ಬುಡ ಸಮೇತ ಕೀಳಬೇಕು,'' ಎಂದು ಹೇಳಿದರು.

ಶಾಲೆಯ ಸಹ ಶಿಕ್ಷ ಕಿಯರಾದ ಮಾಧವಿ, ಉಮಾದೇವಿ, ವಿಜಯಲಕ್ಷ್ಮೀ, ಅಕ್ಷ ರ ಚಿಕ್ಕವೀರಯ್ಯ, ದೊಡ್ಡಸ್ವಾಮಿ, ವಿದ್ಯಾರ್ಥಿನಿಯರಾದ ರಕ್ಷಿತ, ದಿವ್ಯ, ಭಾನು, ದೀಪಿಕ, ರಾಕೇಶ್‌, ಹೇಮಂತ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ