ಆ್ಯಪ್ನಗರ

ಗುಡಿಸಲಿನಲ್ಲೂ ತಂಗಿದ್ದೇನೆ, ಪಂಚತಾರಾ ಹೋಟೆಲ್‍ನಲ್ಲೂ ಉಳಿದುಕೊಂಡಿದ್ದೇನೆ: ಅಶ್ವಥ್ ನಾರಾಯಣ್ ವಿರುದ್ಧ ಹೆಚ್ಡಿಕೆ ಕಿಡಿ

ತಾನು ಗುಡಿಸಲಿನಲ್ಲೂ ತಂಗಿದ್ದೇನೆ, ಪಂಚತಾರಾ ಹೋಟೆಲ್ ನಲ್ಲೂ ತಂಗಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಕಿಡಿಕಾರಿದ್ದಾರೆ. ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, “ತಮ್ಮನ್ನು ಪಂಚತಾರ ಹೋಟೆಲ್‌‍ನಲ್ಲಿ ಉಳಿದುಕೊಳ್ಳುತ್ತಾರೆ ಅಂತಾರೆ. ಈಗ ದೆಹಲಿಯಿಂದ ಬರುವ ಅಮಿಶ್ ಶಾ, ನಡ್ಡಾ, ಅರುಣ್ ಸಿಂಗ್ ಎಲ್ಲಿ ಉಳಿದುಕೊಳ್ತಾರೆ..? ಅವರೆಲ್ಲಾ ದೊಡ್ಡ-ದೊಡ್ಡ ಹೋಟೆಲ್ ನಲ್ಲಿ ಉಳಿದುಕೊಳ್ಳಬಹುದು.. ಕುಮಾರಸ್ವಾಮಿ ಹೋದ್ರೆ ತಪ್ಪೇ..? ಎಂದು ಪ್ರಶ್ನಿಸಿದ್ದಾರೆ. ತಾನು ಗುಡಿಸಲಿನಲ್ಲೂ ಮಲಗಿದ್ದೇನೆ. ಪಂಚತಾರಾ ಹೋಟೆಲ್ ನಲ್ಲೂ ಉಳಿದಿದ್ದೇನೆ. ಇವರಿಂದ ತಾನು ಪಾಠ ಕಲಿಯಬೇಕಾಗಿಲ್ಲ” ಎಂದು ಗುಡುಗಿದ್ದಾರೆ.

Vijaya Karnataka Web 11 Aug 2022, 3:06 pm
ರಾಮನಗರ:ತಾನು ಗುಡಿಸಲಿನಲ್ಲೂ ತಂಗಿದ್ದೇನೆ, ಪಂಚತಾರಾ ಹೋಟೆಲ್ ನಲ್ಲೂ ತಂಗಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಕಿಡಿಕಾರಿದ್ದಾರೆ.
Vijaya Karnataka Web Hd Kumaraswamy.
ಸಾಂದರ್ಭಿಕ ಚಿತ್ರ


ಯಾವುದೇ ದಾಖಲೆ ಇಲ್ಲದೆ ಆರೋಪ ಮಾಡಿ ಕುಮಾರಸ್ವಾಮಿ ಹಿಟ್ ಆಂಡ್ ರನ್ ಮಾಡ್ತಾರೆ ಎಂಬ ಅಶ್ವಥ್ ನಾರಾಯಣ್ ಟ್ವೀಟ್ ವಿಚಾರಕ್ಕೆ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, “ತಮ್ಮನ್ನು ಪಂಚತಾರ ಹೋಟೆಲ್‌‍ನಲ್ಲಿ ಉಳಿದುಕೊಳ್ಳುತ್ತಾರೆ ಅಂತಾರೆ. ಈಗ ದೆಹಲಿಯಿಂದ ಬರುವ ಅಮಿಶ್ ಶಾ, ನಡ್ಡಾ, ಅರುಣ್ ಸಿಂಗ್ ಎಲ್ಲಿ ಉಳಿದುಕೊಳ್ತಾರೆ..? ಅವರೆಲ್ಲಾ ದೊಡ್ಡ-ದೊಡ್ಡ ಹೋಟೆಲ್ ನಲ್ಲಿ ಉಳಿದುಕೊಳ್ಳಬಹುದು.. ಕುಮಾರಸ್ವಾಮಿ ಹೋದ್ರೆ ತಪ್ಪೇ..? ಎಂದು ಪ್ರಶ್ನಿಸಿದ್ದಾರೆ. ತಾನು ಗುಡಿಸಲಿನಲ್ಲೂ ಮಲಗಿದ್ದೇನೆ. ಪಂಚತಾರಾ ಹೋಟೆಲ್ ನಲ್ಲೂ ಉಳಿದಿದ್ದೇನೆ. ಇವರಿಂದ ತಾನು ಪಾಠ ಕಲಿಯಬೇಕಾಗಿಲ್ಲ” ಎಂದು ಗುಡುಗಿದ್ದಾರೆ.

ನಾನು ಅವರಂಗೆ ಕಿಡ್ನ್ಯಾಪ್‌ ಮಾಡಿಸಿಲ್ಲ, ಲೂಟಿ ಹೊಡೆದಿಲ್ಲ! ಡಿಕೆ ಸುರೇಶ್‌ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿ
“ಸಿದ್ದರಾಮಯ್ಯ ಅವರು ಸರ್ಕಾರಿ ಬಂಗಲೆ ಬಿಟ್ಟುಕೊಡಲಿಲ್ಲ. ತಾನು ಬೆಂಗಳೂರಿನಲ್ಲಿದ್ದಾಗ ವಿಶ್ರಾಂತಿ ತೆಗೆದುಕೊಳ್ಳಲು ಜಾಗ ಇರಲಿಲ್ಲ. 2ನೇ ಬಾರಿ ಸಿಎಂ ಆದಾಗ ಸರ್ಕಾರಿ ಬಂಗಲೆ, ವಾಹನ, ಪೆಟ್ರೋಲ್ ಹಣ, ಮನೆ ಬಾಡಿಗೆ ತೆಗೆದುಕೊಂಡಿಲ್ಲ. ಸ್ವಾಭಿಮಾನದಿಂದ ಬದುಕಿದ್ದೇನೆ. ಆದರೆ, ಇವರೆಲ್ಲಾ ಹೋಟೆಲ್ ನಲ್ಲೇ ಸಭೆ ನಡೆಸುತ್ತಿದ್ರು. ಇವರು ಯಾಕೆ ಅಲ್ಲಿ ಸೇರುತ್ತಾರೆ?” ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇನ್ನು “ತಾನು ಹೇಳಿದ ನಕಲಿ ಸರ್ಟಿಫಿಕೇಟ್ ವಿಚಾರದ ಬಗ್ಗೆ ಅಶ್ವಥ್ ನಾರಾಯಣ್ ಉತ್ತರ ಕೊಟ್ರಾ? 2010 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ, ಕಾರ್ಪೊರೇಷನ್‌ನ 15 ಸಾವಿರ ಕೋಟಿ ರೂ. ಕಾಮಗಾರಿಯ ದಾಖಲೆ ಕೊಠಡಿಗೆ ಬೆಂಕಿ ಇಟ್ಟು ಹಗಲು ದರೋಡೆ ಮಾಡಲು ಹೊರಟಿದ್ರು. ಆ ಹಗಲು ದರೋಡೆ ವಿಷಯ ಕೆದಕ್ಕಿದ್ದು ಜೆಡಿಎಸ್. ಆದರೆ, ಈವರೆಗೂ ಕೂಡ ಅದರ ಬಗ್ಗೆ ತನಿಖೆ ನಡೆದಿಲ್ಲ” ಎಂದು ಕುಮಾರಸ್ವಾಮಿ ಆರೋಪಿಸಿದ್ರು.

ಯಡಿಯೂರಪ್ಪ ಕಾಲದಲ್ಲಿ ಸಾವಿರಾರು ಪ್ರಕರಣ ದಾಖಲೆ ಸಮೇತ ಜನತೆ ಮುಂದೆ ಇಟ್ಟಿದ್ದು ಇದೇ ಕುಮಾರಸ್ವಾಮಿ. ತಾನು ಯಾವತ್ತೂ ಹಿಟ್ ಆಂಡ್ ರನ್ ಮಾಡಲ್ಲ. ತಾನು ಗಾಳಿಯಲ್ಲಿ ಗುಂಡು ಹಾರಿಸುವವನಲ್ಲ ಎಂದು ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ