ಆ್ಯಪ್ನಗರ

ಧಾರ್ಮಿಕ ಆಚರಣೆಗಳಲ್ಲಿ ಆರೋಗ್ಯಕಾರಿ ಅಂಶ

ಧಾರ್ಮಿಕ ಆಚರಣೆಗಳಿಂದಲೂ ಸಾಂಕ್ರಾಮಿಕ ರೋಗಗಳನ್ನು ದೂರವಿಡಬಹುದು ಎಂಬುದಕ್ಕೆ ಹಳ್ಳಿಯ ಜಾತ್ರೆಗಳೇ ನಿದರ್ಶನಗಳಾಗಿವೆ ಎಂದು ವಿರುಪಾಪುರ ಗ್ರಾಮದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ವಿ.ಕೆ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು. ಮಾಗಡಿಯ ವೀರುಪಾಪುರ ಗ್ರಾಮದ ಹೊನ್ನಾಪುರ ಲಕ್ಷ್ಮಿ, ಹುಲಿಕಲ್‌ ಮನೆದೇವಿಯಮ್ಮ ದೇವತೆಗಳ ಜಾತ್ರಾ ಮಹೋತ್ಸವದಲ್ಲಿ ಅವರು ದೇವಿಗೆ ಪೂಜೆಸಲ್ಲಿಸಿ ಮಾತನಾಡಿದರು. ​

Vijaya Karnataka 1 Jun 2019, 5:00 am
Vijaya Karnataka Web healthy element in religious practices virupapura honnapura lakshmidevi jatre
ಧಾರ್ಮಿಕ ಆಚರಣೆಗಳಲ್ಲಿ ಆರೋಗ್ಯಕಾರಿ ಅಂಶ

ಮಾಗಡಿ ಗ್ರಾಮಾಂತರ
ಧಾರ್ಮಿಕ ಆಚರಣೆಗಳಿಂದಲೂ ಸಾಂಕ್ರಾಮಿಕ ರೋಗಗಳನ್ನು ದೂರವಿಡಬಹುದು ಎಂಬುದಕ್ಕೆ ಹಳ್ಳಿಯ ಜಾತ್ರೆಗಳೇ ನಿದರ್ಶನಗಳಾಗಿವೆ ಎಂದು ವಿರುಪಾಪುರ ಗ್ರಾಮದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ವಿ.ಕೆ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಮಾಗಡಿಯ ವೀರುಪಾಪುರ ಗ್ರಾಮದ ಹೊನ್ನಾಪುರ ಲಕ್ಷ್ಮಿ, ಹುಲಿಕಲ್‌ ಮನೆದೇವಿಯಮ್ಮ ದೇವತೆಗಳ ಜಾತ್ರಾ ಮಹೋತ್ಸವದಲ್ಲಿ ಅವರು ದೇವಿಗೆ ಪೂಜೆಸಲ್ಲಿಸಿ ಮಾತನಾಡಿದರು.

ಔಷಧೀಯ ಗುಣಗಳು:
ಬೇವಿನ ಸೊಪ್ಪಿನಲ್ಲಿ ಔಷಧಿ ಗುಣವಿದೆ. ಅಂತಹ ಸೊಪ್ಪಿನಿಂದ ದೇವಿಗೆ ಪೂಜೆಸಲ್ಲಿಸುತ್ತಾರೆ. ಜತೆಗೆ ಹಬ್ಬದ ನಿಮಿತ್ತ ಗ್ರಾಮವನ್ನೂ ಸ್ವಚ್ಛಮಾಡುತ್ತಾರೆ. ಅಲ್ಲದೆ ಗಂಜಲ, ಸಗಣಿಯಂತಹ ಶಾಸ್ತ್ರಬದ್ಧವಾದ ದ್ರವ್ಯಗಳ ಪ್ರೋಕ್ಷ ಣೆಯಿಂದ ಮನೆ, ಊರಿನ ಅಂಗಳವನ್ನು ಶುದ್ಧೀಕರಿಸಿ ಸ್ವಚ್ಛತೆಯನ್ನು ಕಾಪಾಡುವ ಕೆಲಸ ಹಾಗೂ ದೇವಿಯನ್ನು ಪೂಜಿಸಿದರೆ ಯಾವುದೇ ರೋಗರುಜಿನ ಬಾರದು ಎಂಬ ಧೈರ್ಯ ಮನಸ್ಸಿನಲ್ಲಿ ಮನೆ ಮಾಡಿಸುವ ಆಚರಣೆಗಳು ಜಾತ್ರೆಯ ಹೆಸರಿನಲ್ಲಿ ನಡೆಯುತ್ತವೆ. ಆದ್ದರಿಂದ ಜಾತ್ರೆಗಳು ಆರೋಗ್ಯ ಪಾಲನೆ ಮತ್ತು ಭಾವೈಕ್ಯತೆ ಕೊಂಡಿಯಾಗಿವೆ ಎಂದರು.

ಜಾತ್ರೆಗೆ ನೆರೆಹೊರೆ ಊರದೇವರು :
ವಿರುಪಾಪುರ ಜಾತ್ರೆಯ ವಿಶೇಷತೆಯೆಂದರೆ ಅಕ್ಕಪಕ್ಕದ ಊರಿನ ಶಕ್ತಿದೇವತೆರಾದ ಹೊನ್ನಾಪುರ ಗ್ರಾಮದಲ್ಲಿ ನೆಲಸಿರುವ ಲಕ್ಷ್ಮೀದೇವಿ ಮತ್ತು ಹುಲಿಕಲ್‌ನಲ್ಲಿ ನೆಲೆಸಿರುವ ಮನೆದೇವಿಯಮ್ಮ ವಿಗ್ರಹವನ್ನು ವಿರುಪಾಪುರ ಗ್ರಾಮಕ್ಕೆ ಕರೆತಂದು ಊರಗುಡಿಯೊಂದರಲ್ಲಿ ಉತ್ಸವಮೂರ್ತಿಗಳನ್ನಿಟ್ಟು ಕೊಂಡೋತ್ಸವ ಆಯೋಜಿಸಿ. ಆನಂತರ ಮೆರವಣಿಗೆ, ನಾರಿಯರಿಂದ ಆರತಿಪೂಜೆ ಮುಂತಾದ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುತ್ತಾರೆ.

ಜನ ಜಾತ್ರೆ:
ಈ ಬಾರಿ ವಿರುಪಾಪುರ ಜಾತ್ರೆಯಲ್ಲಿ ನಿರೀಕ್ಷೆಗೂ ಮೀರಿ ಅಕ್ಕಪಕ್ಕದ ಗ್ರಾಮಗಳಿಂದ ಜನರು ಆಗಮಿಸಿದ್ದರು. ಉತ್ಸವ ಮೂರ್ತಿಯ ಮೆರವಣಿಗೆ ಸಮಯದಲ್ಲಿ ಅರೆ, ತಮಟೆ ಸದ್ದಿಗೆ ಯುವಕರು ನೃತ್ಯಮಾಡಿ ಗಮನಸೆಳೆದರು.ಜಾತ್ರಾ ಮಹೋತ್ಸವದಲ್ಲಿ ನಂಜುಂಡಯ್ಯ, ಗೋವಿಂದಪ್ಪ, ಮಾಕಣ್ಣ, ಜ್ಞಾನಜೋತಿ, ದೇವೇಂದ್ರಕುಮಾರ್‌, ಜಯ್ಯಣ್ಣ, ಅರ್ಚಕರಾದ ಗೋಪಾಲ್‌, ಶಿಕ್ಷ ಕರಾದ ಕುಮಾರಸ್ವಾಮಿ, ಮಹೇಶ್‌, ತಾಲೂಕು ಎಸ್‌ಡಿಎಂಸಿ ಸಮಿತಿ ಸದಸ್ಯ ಅಶೋಕ್‌ ಹಾಗೂ ವಿರುಪಾಪುರ, ಹೊನ್ನಾಪುರ ಗ್ರಾಮದ ಜನರು ಜಾತ್ರೆಯಲ್ಲಿ ಭಾಗಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ