ಆ್ಯಪ್ನಗರ

ಹೆಚ್ಚಿನ ಬೆಲೆಗೆ ಚಿಕಿತ್ಸೆ: ಸಾರ್ವಜನಿಕರಿಂದ ಪ್ರತಿಭಟನೆ

ನೇತ್ರ ಚಿಕಿತ್ಸೆಯ ನಂತರ ಕನ್ನಡಕ ಮಾರಾಟ ನೆಪದಲ್ಲಿ ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ನಗರದ ಶ್ರೀವೆಂಕಟೇಶ್ವರ ನೇತ್ರಾಲಯ ಕಣ್ಣಿನ ಆಸ್ಪತ್ರೆ ಮತ್ತು ಕನ್ನಡಕ ಮಳಿಗೆಯನ್ನು ಬಂದ್‌ ಮಾಡಿಸಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

Vijaya Karnataka 12 Jun 2019, 4:41 pm
ರಾಮನಗರ : ನೇತ್ರ ಚಿಕಿತ್ಸೆಯ ನಂತರ ಕನ್ನಡಕ ಮಾರಾಟ ನೆಪದಲ್ಲಿ ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ನಗರದ ಶ್ರೀವೆಂಕಟೇಶ್ವರ ನೇತ್ರಾಲಯ ಕಣ್ಣಿನ ಆಸ್ಪತ್ರೆ ಮತ್ತು ಕನ್ನಡಕ ಮಳಿಗೆಯನ್ನು ಬಂದ್‌ ಮಾಡಿಸಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
Vijaya Karnataka Web high price treatment protest from the public
ಹೆಚ್ಚಿನ ಬೆಲೆಗೆ ಚಿಕಿತ್ಸೆ: ಸಾರ್ವಜನಿಕರಿಂದ ಪ್ರತಿಭಟನೆ


ಕನ್ನಡಕಕ್ಕೆ ಅಧಿಕ ಹಣವನ್ನು ರೋಗಿಗಳಿಂದ ವಸೂಲಿ ಮಾಡುತ್ತಿದ್ದಾರೆ. ಜಿಎಸ್‌ಟಿ ಇಲ್ಲದ ಅನಧಿಕೃತ ಕೈ ಬರಹದ ರಶೀದಿಗಳನ್ನು ನೀಡಿ ವಂಚಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ರೋಗಿಗಳೊಂದಿಗೆ ಕೇವಲವಾಗಿ ಮಾತನಾಡುತ್ತಾರೆ. ಯಾವುದಕ್ಕೂ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಿಲ್ಲ ಎಂದು ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅವೇರಹಳ್ಳಿ ಶಿವಲಿಂಗೇಗೌಡ ಮಾತನಾಡಿ, ''ಕಳೆದ 8 ತಿಂಗಳ ಹಿಂದೆ ಸಣ್ಣ ಪ್ರಮಾಣದ ದೃಷ್ಟಿದೋಷ, ತಲೆ ನೋವು ಇದ್ದ ಕಾರಣ ಮೂವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜನತೆಗೆ ನನ್ನ ಹಲವು ಸ್ನೇಹಿತರು ಇಲ್ಲಿ ಚಿಕಿತ್ಸೆ ಪಡೆದಿದ್ದರು. ತಪಾಸಣೆ ವೇಳೆ ವೈದ್ಯಕೀಯ ವರದಿ ಆಧಾರದ ಮೇಲೆ ಕನ್ನಡಕವನ್ನು ಇಲ್ಲಿಯೇ 4000 ರೂ. ನೀಡಿ ಖರೀದಿಸದ್ದೇನೆ. ನಂತರ ಮತ್ತೆ ಸಮಸ್ಯೆ ಎದುರಾಯಿತು. ಹೊರಗಿನ ಕನ್ನಡಕ ಮಳಿಗೆಯಲ್ಲಿ ಪರೀಕ್ಷಿಸಿದಾಗ ಇದು ಸಾಮಾನ್ಯ ಕನ್ನಡಕ, ಕೇವಲ 2000ಕ್ಕೆ ದೊರೆಯಲಿದೆ ಎಂಬುದು ಅರಿವಿಗೆ ಬಂತು,'' ಎಂದು ಹೇಳಿದರು.

''ಮತ್ತೊಮ್ಮೆ ಇಲ್ಲೆ ತಪಾಸಣೆ ಮಾಡಿಸಿದಾಗ ಕನ್ನಡಕ ಬದಲಿಸಬೇಕು ಎಂದು ವೈದ್ಯರು ಹೇಳಿದ್ದಾರೆ. ವೈದ್ಯಕೀಯ ವರದಿ ಮಾತ್ರ ಕೊಡಿ, ಕನ್ನಡಕವನ್ನು ತಮಗೆ ತಿಳಿದಿರುವ ಮಳಿಗೆಯಲ್ಲಿ ಖರೀದಿಸುತ್ತೇವೆ ಎಂದರೆ ಇದಕ್ಕೆ ನಿರಾಕರಿಸಿರುವ ವೈದ್ಯರು ಮನಬಂದಂತೆ ಮಾತನಾಡಿದರು,'' ಎಂದು ಹೇಳಿದರು.

''ಸಾಮಾನ್ಯ ಕನ್ನಡಕಕ್ಕೆ ಎರಡು ಪಟ್ಟು, ಮೂರು ಪಟ್ಟು ಹೆಚ್ಚು ಬೆಲೆಯನ್ನು ವಿಧಿಸುತ್ತಿದ್ದಾರೆ. ಅಲ್ಲದೆ ಇವರು ಜಿಎಸ್‌ಟಿ ಬಿಲ್‌ಗಳನ್ನು ನೀಡುತ್ತಿಲ್ಲ. ಕೈ ಬರಹದ ಚೀಟಿಯನ್ನು ಮಾತ್ರ ವಿತರಿಸುತ್ತಿದ್ದು, ಸರಕಾರಕ್ಕೆ ತೆರಿಗೆ ವಂಚಿಸುತ್ತಿದ್ದಾರೆ. ವೈದ್ಯಕೀಯ ಸೇವೆಯ ದರಪಟ್ಟಿಯನ್ನೂ ಸಹ ಆಸ್ಪತ್ರೆಯಲ್ಲಿ ನಮೂದಿಸಿಲ್ಲ,'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

''ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಇದರಿಂದ ಬಡ ರೋಗಿಗಳಿಗೆ ಆಗುತ್ತಿರುವ ವಂಚನೆ ಮುಕ್ತಿಮಾಡಬೇಕು,'' ಮನವಿ ಮಾಡಿದರು.

ಈ ವೇಳೆ ಕೆ.ಎನ್‌.ವೀರಭದ್ರಸ್ವಾಮಿ, ಚನ್ನಮಾನಹಳ್ಳಿ ರಾಜು, ಬೆಂಕಿ ಮಹದೇವು, ನಾಗರಾಜು, ಎನ್‌ಎಸ್‌ಯುಐನ ಪ್ರಜ್ವಲ್‌, ಸಿದ್ದಪ್ಪ, ಪನೀತ್‌ ಧನರಾಜು, ಶಿವರಾಜು ಪ್ರತಿಭಟನೆಯಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ