ಆ್ಯಪ್ನಗರ

ರಾಮನಗರ: ಅರ್ಕಾವತಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವಿದ್ಯಾರ್ಥಿಯನ್ನು ರಕ್ಷಿಸಿದ ಸ್ಥಳೀಯರು

ಬೆಳಗ್ಗೆ ಶಾಲೆಗೆ ಹೋದ ಸಮಯದಲ್ಲಿ ನೀರು ಕಡಿಮೆ ಇದ್ದ ಕಾರಣ ಸೇತುವೆ ಮೇಲೆ ಶಾಲೆಗೆ ಹೋಗಿದ್ದಾರೆ. ಜಯಂತಿ ಮುಗಿಸಿ ಮನೆಗೆ ವಾಪಸಾಗುವ ವೇಳೆ ಅರ್ಕಾವತಿ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿತು. ವಿದ್ಯಾರ್ಥಿಗಳು ಸೈಕಲ್ ತಳ್ಳಿಕೊಂಡು ನದಿ ದಾಟಲು ಪ್ರಯತ್ನಿಸಿದ್ದಾರೆ.

Vijaya Karnataka Web 22 Nov 2021, 9:09 pm
ರಾಮನಗರ: ಶಾಲೆಯಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮ ಮುಗಿಸಿ, ಮನೆಗೆ ಹೊರಟ್ಟಿದ್ದ ವಿದ್ಯಾರ್ಥಿಯೊಬ್ಬ ತುಂಬಿ ಹರಿಯುತ್ತಿದ್ದ ಅರ್ಕಾವತಿ ನದಿಯಲ್ಲಿ ಕೊಚಿಹೋಗುತ್ತಿದ್ದ. ಆದರೆ, ಸ್ಥಳೀಯರು ಈ ಅವಘಡವನ್ನು ತಪ್ಪಿಸಿದ್ದಾರೆ.
Vijaya Karnataka Web ರಾಮನಗರ
ರಾಮನಗರ


ರಾಮನಗರ ತಾಲೂಕಿನ ಕೆ.ಪಿ ದೊಡ್ಡಿ ಗ್ರಾಮದ ಪ್ರಜ್ವಲ್ ಎಂಬ 8ನೇ ತರಗತಿ ವಿದ್ಯಾರ್ಥಿ ಕೂನಗಲ್ ಶಾಲೆಯಲ್ಲಿ ಸೋಮವಾರ ನಡೆದ ಕನಕ ಜಯಂತಿ ಕಾರ್ಯಕ್ರಮಕ್ಕೆ ತನ್ನ ಸಹಪಾಠಿಗಳ ಜತೆ ಶಾಲೆಗೆ ಹೋಗಿದ್ದಾನೆ. ಕಾರ್ಯಕ್ರಮ ಮನನ ಮುಗಿಸಿ ಮನೆಗೆ ಹಿಂತಿರುವಾಗ ಈ ಘಟನೆ ನಡೆದಿದೆ.

ಹೆದ್ದಾರಿಯಲ್ಲಿ ಅಪಘಾತ: ಮಾನವೀಯತೆ ಮೆರೆದ ಸಂಸದ ಪ್ರತಾಪ್‌ ಸಿಂಹ

ಬೆಳಗ್ಗೆ ಶಾಲೆಗೆ ಹೋದ ಸಮಯದಲ್ಲಿ ನೀರು ಕಡಿಮೆ ಇದ್ದ ಕಾರಣ ಸೇತುವೆ ಮೇಲೆ ಶಾಲೆಗೆ ಹೋಗಿದ್ದಾರೆ. ಜಯಂತಿ ಮುಗಿಸಿ ಮನೆಗೆ ವಾಪಸಾಗುವ ವೇಳೆ ಅರ್ಕಾವತಿ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿತು. ಇದನ್ನು ಕಂಡರೂ ಸಹ ವಿದ್ಯಾರ್ಥಿಗಳು ಸೈಕಲ್ ತಳ್ಳಿಕೊಂಡು ನದಿ ದಾಟಲು ಪ್ರಯತ್ನಿಸಿದ್ದಾರೆ.

ಸೇತುವೆ ಮಧ್ಯ ಭಾಗಕ್ಕೆ ಬಂದ ವೇಳೆ ಪ್ರಜ್ವಲ್ ಎಂಬ ವಿದ್ಯಾರ್ಥಿ ನೀರಿನ ಸೆಳೆತಕ್ಕೆ ಸಿಲುಕಿ ಸೈಕಲ್ ಸಮೇತ ನದಿಯಲ್ಲಿ ಜಾರಿದ್ದಾನೆ. ನದಿಯಲ್ಲಿ ಸಿಲುಕುತ್ತಿರುವುದನ್ನು ಕಂಡ ಸ್ಥಳೀಯರು ಓಡಿ ಬಂದು ವಿದ್ಯಾರ್ಥಿ ಪ್ರಜ್ವಲ್‌ನನ್ನು ಅಪಾಯದಿಂದ ಪಾರು ಮಾಡಿದ್ದಾರೆ.

ರೇಷ್ಮೆ ಸೀರೆ, ಚನ್ನಪಟ್ಟಣ ಆಟಿಕೆಗಳ ಪ್ರದರ್ಶನ; ಪ್ರವಾಸೋದ್ಯಮ ಇಲಾಖೆಯಿಂದ ವಿನೂತನ ಟ್ರಿಪ್‌!

ಈ ವಿಡಿಯೋ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಗ್ರಾಮದ ವಾಸಿಗಳು ಒಂದು ಕ್ಷಣ ತಡ ಮಾಡಿದ್ದರೂ, ವಿದ್ಯಾರ್ಥಿ ನೀರು ಪಾಲಾಗುತ್ತಿದ್ದ.

ಆದರೆ ಸ್ಥಳೀಯರು ಕೂಡಲೇ ಕಾರ್ಯಪ್ರವೃತ್ತರಾಗಿ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಚಿಕ್ಕಮಣ್ಣುಗುಡ್ಡೆ ಅರಣ್ಯದ ಆನೆಗಳಿಂದ ಬೆಳೆ ಹಾನಿ

ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಿಂದ ಬಂದ ಐದು ಆನೆಗಳ ಗುಂಪು ಭಾನುವಾರ ರಾತ್ರಿ ಚಿಕ್ಕೇನಹಳ್ಳಿ ಗ್ರಾಮದ ಆಸುಪಾಸಿನಲ್ಲಿಓಡಾಡಿ ಬೈರಶೆಟ್ಟಿ ಎಂಬುವರ ಭತ್ತದ ಗದ್ದೆ, ಚಿಕ್ಕಬೋರಯ್ಯ, ಗುರುಲಿಂಗಯ್ಯ, ಗಣೇಶ್‌ಸಿಂಗ್‌ ಎಂಬುವರ ರಾಗಿ ಹೊಲ, ಬೋರ ಶೆಟ್ಟಿ, ಚಂದ್ರಪ್ಪ ಎಂಬುವರ ಭತ್ತ, ರಾಗಿ ಹೊಲಗಳನ್ನು ಹೆಚ್ಚಿನ ಪ್ರಮಾಣದಲ್ಲಿನಾಶಡಿಸಿವೆ. ಇದರಿಂದ ರೈತರಿಗೆ ಅಪಾರ ನಷ್ಟವಾಗಿದ್ದು ಜೀವನ ಕಷ್ಟಕರವಾಗಿದೆ.

ವರ್ಷಾನುಗಟ್ಟಲೆ ಕಷ್ಟಪಟ್ಟು ಸಾವಿರಾರು ರೂ. ಖರ್ಚುಮಾಡಿ ಲಾಭ ತರುವ ಜೀವನ ನಿರ್ವಹಣೆಗೆ ಇರುವ ಫಸಲು ಆನೆಗಳಿಂದ ನಾಶವಾಗುತ್ತಿವೆ. ಕೂಡಲೇ ಅರಣ್ಯ ಇಲಾಖೆ ಆಗಿರುವ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ