ಕಲ್ಲುಸಕ್ಕರೆ ಸವಿದು ರಥ ಎಳೆಯುವ ಪ್ರತೀತಿ | ವಿಜಯನಗರ ಸಾಮ್ರಾಜ್ಯದರಸರ ದೇಗುಲವಿದು
ಮಾಗಡಿ ಗ್ರಾಮಾಂತರ: ಕ್ರಿ.ಶ. 700 ವರ್ಷಗಳ ಹಿಂದೆ ಮಾದ್ಗಲ್ಯ ಋುಷಿಮುನಿ ತಪಗೈದು ಸಾಲಿಗ್ರಾಮ ಸ್ಥಾಪಿಸಿದ ಪುಣ್ಯಕ್ಷೇತ್ರ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯ ದೊಡ್ಡಮುದುಗುರೆ ಜಗನ್ಮೋಹಕ ರಂಗನಾಥ ಸ್ವಾಮಿಯ ಹೋಳಿಹುಣ್ಣಿಮೆ ರಥೋತ್ಸವ ಸಹಸ್ರಾರು ಭಕ್ತಕೋಟಿ ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಪುರಾತನ ಮುದುಗೆರೆ ರಂಗನಾಥ ಸ್ವಾಮಿ ದೇವಾಲಯ ತಾಲೂಕಿನ ಪ್ರಾಚೀನ ದೇವಾಲಯಗಳಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ.
ಬ್ರಹ್ಮ ರಥೋತ್ಸವ: ಪ್ರತಿವರ್ಷ ಬೇಸಿಗೆಯ ಆರಂಭದ ಮುನ್ನ ಬರುವ ಹೋಳಿಹುಣ್ಣಿಮೆಯಂದು ರಂಗನಾಥಸ್ವಾಮಿ ದೇವರ ಬ್ರಹ್ಮ ರಥೋತ್ಸವ ನೆರವೇರುವ ಸುದಿನ.
ರಥೋತ್ಸವಕ್ಕೆ ಮುನ್ನ್ನ 2 ದಿನ ಮುಂಚಿತವಾಗಿ ದೇವಾಲಯದಲ್ಲಿ ಆಗಮಿಕರು ಬೀಡು ಬಿಟ್ಟು ಧಾರ್ಮಿಕ ಪೂಜಾ ಕೈಕಂರ್ಯಗಳಾದ ಯಾಗಪೂಜೆ, ಪ್ರಕರಾಥೋತ್ಸವ, ಗಜೇಂದ್ರ ಮೋಕ್ಷ , ಕಲ್ಯಾಣೋತ್ಸವ ಮುಂತಾದ ಕಾರ್ಯಕ್ರಮಗಳನ್ನು ನೆರವೇರಿಸಿದರು.
ರಥೋತ್ಸವಕ್ಕೆ ಚಾಲನೆ: ರಥೋತ್ಸವ ದಿನದಂದು ರಂಗನಾಥಸ್ವಾಮಿಗೆ ಅಭಿಷೇಕ ನೆರವೇರಿಸಿ ವಿಶೇಷ ವಜ್ರಾಂಗಿ ಧಾರಣೆ ಮಾಡಿ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ 2.15 ರವೇಳೆಗೆ ಶ್ರೀದೇವಿ, ಭೂದೇವಿ ಸಮೇತನಾದ ರಂಗನಾಥಸ್ವಾಮಿಯ ಮೆರವಣಿಗೆ ವಿಗ್ರಹಕ್ಕೆ ಪುರೋಹಿರು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಸಾವಿರಾರು ಸಂಖ್ಯೆಯಲ್ಲಿದ್ದ ಭಕ್ತರು ರಥದ ಗಾಲಿಯನ್ನು ನೂಕುನುಗ್ಗಲಿನಲ್ಲಿ ಮುಗಿಬಿದ್ದು ಎಳೆದರು. ಬಾಳೆಹಣ್ಣು, ದವನ ಸೇರಿಸಿ ರಥಕ್ಕೆ ಹಣ್ಣನ್ನು ಬೀರುವ ಮೂಲಕ ಭಕ್ತರು ತಮ್ಮ ಭಕ್ತಿ ಪ್ರದರ್ಶಿಸಿದರು.
ಅರವಂಟಿಕೆ ಸೇವೆ: ರಥೋತ್ಸವ ಆರಂಭವಾದ ಬಳಿಕ ಅರವಂಟಿಗೆಗಳಲ್ಲಿ ಬಿಸಿಲಿನ ದಾಹ ತಣಿಸಲು ರಥೋತ್ಸವದಲ್ಲಿ ನೆರೆದಿದ್ದ ಭಕ್ತರಿಗೆ ನೀರು ಮಜ್ಜಿಗೆ, ಪಾನಕ, ಹೆಸರುಬೇಳೆ, ರಸಾಯನ ನೀಡಿ ತಮ್ಮ ಭಕ್ತಿಯನ್ನು ಸರ್ಮಿಸಿದರು.
ದೇವಾಲಯದ ಬಳಿಯಿರುವ ಅನ್ನಛತ್ರದಲ್ಲಿ ರಥೋತ್ಸವದ ಬಳಿಯ ಅನ್ನದಾಸೋಹ ಕಾರ್ಯಕ್ರಮವೂ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ವೇಳೆ ದೇವಾಲಯ ಜೀರ್ಣೋದ್ಧಾರ ಸಮಿತಿಯ ಗಿರಿಗೌಡರು, ಪ್ರಧಾನ ಅರ್ಚಕ ಗೋಪಿನಾಥ್, ಆಗಮಿಕ ವೇಣುಗೋಪಾಲ್, ತಿಪ್ಪಸಂದ್ರದ ತಿರುಮಲಾಚಾರ್, ಜಗದೀಶ್, ಶಿಕ್ಷ ಕರಾದ ರಂಗೇಗೌಡರು, ದೊಡ್ಡಮುದುಗೆರೆ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಸುತ್ತ ಮುತ್ತಲ ಗ್ರಾಮಗಳಾದ ಕೋಡಿಪಾಳ್ಯ, ಚಿಕ್ಕಮುದುಗೆರೆ, ತಿಪ್ಪಸಂದ್ರ, ರಘುನಾಥಪುರ, ಮಾಚೋಹಳ್ಳಿ, ಸಿದ್ದಾಪುರ, ತಾಳೆಕೆರೆ, ಕೆಂಪಾಪುರ, ಸೊಳ್ಳಾಪುರ, ಅಂಗಜನಹಳ್ಳಿ, ಜಾನಗೆರೆ, ದೊಡ್ಡಸೋಮನಹಳ್ಳಿಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ದೇವಾಲಯದ ಇತಿಹಾಸ: ಸುಮಾರು 700 ವರ್ಷಗಳ ಈ ದೇವಾಲಯ ಚೋಳರು, ಗಂಗರು ನಂತರ ವಿಜಯನಗರದ ಕೃಷ್ಣದೇವರಾಯನ ಕಾಲದ ಸಾಮಂತರಾಜರು ದೊಡ್ಡಮುದುಗೆರೆ ರಂಗನಾಥಸ್ವಾಮಿ ದೇವಲಯವನ್ನು ಪೋಷಿಸಿಕೊಂಡು ಬರುತ್ತಿದ್ದರು. ನಂತರ ನಾಡಪ್ರಭು ಕೆಂಪೇಗೌಡರು ಈ ದೇವಾಲಯದ ಭಕ್ತರಾಗಿ ಗುರುತಿಸಿಕೊಂಡಿದ್ದರು. ಕೆಂಪೇಗೌಡರ ಸಮಾಧಿ ದೊರೆತಿರುವ ತಿಪ್ಪಸಂದ್ರ ಹೋಬಳಿ ಕೆಂಪಾಪುರ ಗ್ರಾಮದಿಂದ 2 ಕಿ.ಮೀ ದೂರಲ್ಲಿದೆ ಮುದುಗೆರೆ ರಂಗನಾಥಸ್ವಾಮಿ ದೇವಾಲಯ.
ಕಲ್ಲುಸಕ್ಕರೆ ದಾನ ಇಲ್ಲಿನ ಪ್ರತೀತಿ: ರಂಗನಾಥಸ್ವಾಮಿ ರಥೋತ್ಸವಕ್ಕೂ ಮುನ್ನ ಕಲ್ಲುಸಕ್ಕರೆ ದಾನ ಮಾಡುವುದು ಇಲ್ಲಿ ಅನಾದಿಕಾಲದಿಂದಲೂ ನಡೆದು ಬಂದಿರುವ ಪ್ರತೀತಿ. ಕೆಂಪು, ಬಿಳಿ ಕಲ್ಲುಸಕ್ಕರೆ ತುಂಬಿರುವ ಪಾತ್ರೆ ಹಿಡಿದು ತೇರು ನೋಡಲು ಸೇರಿರುವ ಎಲ್ಲ ಭಕ್ತರಿಗೆ ಕಲ್ಲುಸಕ್ಕರೆ ನೀಡಿ ಬಾಯಿ ಸಿಹಿಮಾಡಿ ಆನಂತರ ತೇರು ಎಳೆಯುವುದು ಇಲ್ಲಿ ಸಂಪ್ರದಾಯವಾಗಿದೆ.
ಮಾಗಡಿ ಗ್ರಾಮಾಂತರ: ಕ್ರಿ.ಶ. 700 ವರ್ಷಗಳ ಹಿಂದೆ ಮಾದ್ಗಲ್ಯ ಋುಷಿಮುನಿ ತಪಗೈದು ಸಾಲಿಗ್ರಾಮ ಸ್ಥಾಪಿಸಿದ ಪುಣ್ಯಕ್ಷೇತ್ರ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯ ದೊಡ್ಡಮುದುಗುರೆ ಜಗನ್ಮೋಹಕ ರಂಗನಾಥ ಸ್ವಾಮಿಯ ಹೋಳಿಹುಣ್ಣಿಮೆ ರಥೋತ್ಸವ ಸಹಸ್ರಾರು ಭಕ್ತಕೋಟಿ ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಪುರಾತನ ಮುದುಗೆರೆ ರಂಗನಾಥ ಸ್ವಾಮಿ ದೇವಾಲಯ ತಾಲೂಕಿನ ಪ್ರಾಚೀನ ದೇವಾಲಯಗಳಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ.
ಬ್ರಹ್ಮ ರಥೋತ್ಸವ: ಪ್ರತಿವರ್ಷ ಬೇಸಿಗೆಯ ಆರಂಭದ ಮುನ್ನ ಬರುವ ಹೋಳಿಹುಣ್ಣಿಮೆಯಂದು ರಂಗನಾಥಸ್ವಾಮಿ ದೇವರ ಬ್ರಹ್ಮ ರಥೋತ್ಸವ ನೆರವೇರುವ ಸುದಿನ.
ರಥೋತ್ಸವಕ್ಕೆ ಮುನ್ನ್ನ 2 ದಿನ ಮುಂಚಿತವಾಗಿ ದೇವಾಲಯದಲ್ಲಿ ಆಗಮಿಕರು ಬೀಡು ಬಿಟ್ಟು ಧಾರ್ಮಿಕ ಪೂಜಾ ಕೈಕಂರ್ಯಗಳಾದ ಯಾಗಪೂಜೆ, ಪ್ರಕರಾಥೋತ್ಸವ, ಗಜೇಂದ್ರ ಮೋಕ್ಷ , ಕಲ್ಯಾಣೋತ್ಸವ ಮುಂತಾದ ಕಾರ್ಯಕ್ರಮಗಳನ್ನು ನೆರವೇರಿಸಿದರು.
ರಥೋತ್ಸವಕ್ಕೆ ಚಾಲನೆ: ರಥೋತ್ಸವ ದಿನದಂದು ರಂಗನಾಥಸ್ವಾಮಿಗೆ ಅಭಿಷೇಕ ನೆರವೇರಿಸಿ ವಿಶೇಷ ವಜ್ರಾಂಗಿ ಧಾರಣೆ ಮಾಡಿ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ 2.15 ರವೇಳೆಗೆ ಶ್ರೀದೇವಿ, ಭೂದೇವಿ ಸಮೇತನಾದ ರಂಗನಾಥಸ್ವಾಮಿಯ ಮೆರವಣಿಗೆ ವಿಗ್ರಹಕ್ಕೆ ಪುರೋಹಿರು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಸಾವಿರಾರು ಸಂಖ್ಯೆಯಲ್ಲಿದ್ದ ಭಕ್ತರು ರಥದ ಗಾಲಿಯನ್ನು ನೂಕುನುಗ್ಗಲಿನಲ್ಲಿ ಮುಗಿಬಿದ್ದು ಎಳೆದರು. ಬಾಳೆಹಣ್ಣು, ದವನ ಸೇರಿಸಿ ರಥಕ್ಕೆ ಹಣ್ಣನ್ನು ಬೀರುವ ಮೂಲಕ ಭಕ್ತರು ತಮ್ಮ ಭಕ್ತಿ ಪ್ರದರ್ಶಿಸಿದರು.
ಅರವಂಟಿಕೆ ಸೇವೆ: ರಥೋತ್ಸವ ಆರಂಭವಾದ ಬಳಿಕ ಅರವಂಟಿಗೆಗಳಲ್ಲಿ ಬಿಸಿಲಿನ ದಾಹ ತಣಿಸಲು ರಥೋತ್ಸವದಲ್ಲಿ ನೆರೆದಿದ್ದ ಭಕ್ತರಿಗೆ ನೀರು ಮಜ್ಜಿಗೆ, ಪಾನಕ, ಹೆಸರುಬೇಳೆ, ರಸಾಯನ ನೀಡಿ ತಮ್ಮ ಭಕ್ತಿಯನ್ನು ಸರ್ಮಿಸಿದರು.
ದೇವಾಲಯದ ಬಳಿಯಿರುವ ಅನ್ನಛತ್ರದಲ್ಲಿ ರಥೋತ್ಸವದ ಬಳಿಯ ಅನ್ನದಾಸೋಹ ಕಾರ್ಯಕ್ರಮವೂ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ವೇಳೆ ದೇವಾಲಯ ಜೀರ್ಣೋದ್ಧಾರ ಸಮಿತಿಯ ಗಿರಿಗೌಡರು, ಪ್ರಧಾನ ಅರ್ಚಕ ಗೋಪಿನಾಥ್, ಆಗಮಿಕ ವೇಣುಗೋಪಾಲ್, ತಿಪ್ಪಸಂದ್ರದ ತಿರುಮಲಾಚಾರ್, ಜಗದೀಶ್, ಶಿಕ್ಷ ಕರಾದ ರಂಗೇಗೌಡರು, ದೊಡ್ಡಮುದುಗೆರೆ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಸುತ್ತ ಮುತ್ತಲ ಗ್ರಾಮಗಳಾದ ಕೋಡಿಪಾಳ್ಯ, ಚಿಕ್ಕಮುದುಗೆರೆ, ತಿಪ್ಪಸಂದ್ರ, ರಘುನಾಥಪುರ, ಮಾಚೋಹಳ್ಳಿ, ಸಿದ್ದಾಪುರ, ತಾಳೆಕೆರೆ, ಕೆಂಪಾಪುರ, ಸೊಳ್ಳಾಪುರ, ಅಂಗಜನಹಳ್ಳಿ, ಜಾನಗೆರೆ, ದೊಡ್ಡಸೋಮನಹಳ್ಳಿಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ದೇವಾಲಯದ ಇತಿಹಾಸ: ಸುಮಾರು 700 ವರ್ಷಗಳ ಈ ದೇವಾಲಯ ಚೋಳರು, ಗಂಗರು ನಂತರ ವಿಜಯನಗರದ ಕೃಷ್ಣದೇವರಾಯನ ಕಾಲದ ಸಾಮಂತರಾಜರು ದೊಡ್ಡಮುದುಗೆರೆ ರಂಗನಾಥಸ್ವಾಮಿ ದೇವಲಯವನ್ನು ಪೋಷಿಸಿಕೊಂಡು ಬರುತ್ತಿದ್ದರು. ನಂತರ ನಾಡಪ್ರಭು ಕೆಂಪೇಗೌಡರು ಈ ದೇವಾಲಯದ ಭಕ್ತರಾಗಿ ಗುರುತಿಸಿಕೊಂಡಿದ್ದರು. ಕೆಂಪೇಗೌಡರ ಸಮಾಧಿ ದೊರೆತಿರುವ ತಿಪ್ಪಸಂದ್ರ ಹೋಬಳಿ ಕೆಂಪಾಪುರ ಗ್ರಾಮದಿಂದ 2 ಕಿ.ಮೀ ದೂರಲ್ಲಿದೆ ಮುದುಗೆರೆ ರಂಗನಾಥಸ್ವಾಮಿ ದೇವಾಲಯ.
ಕಲ್ಲುಸಕ್ಕರೆ ದಾನ ಇಲ್ಲಿನ ಪ್ರತೀತಿ: ರಂಗನಾಥಸ್ವಾಮಿ ರಥೋತ್ಸವಕ್ಕೂ ಮುನ್ನ ಕಲ್ಲುಸಕ್ಕರೆ ದಾನ ಮಾಡುವುದು ಇಲ್ಲಿ ಅನಾದಿಕಾಲದಿಂದಲೂ ನಡೆದು ಬಂದಿರುವ ಪ್ರತೀತಿ. ಕೆಂಪು, ಬಿಳಿ ಕಲ್ಲುಸಕ್ಕರೆ ತುಂಬಿರುವ ಪಾತ್ರೆ ಹಿಡಿದು ತೇರು ನೋಡಲು ಸೇರಿರುವ ಎಲ್ಲ ಭಕ್ತರಿಗೆ ಕಲ್ಲುಸಕ್ಕರೆ ನೀಡಿ ಬಾಯಿ ಸಿಹಿಮಾಡಿ ಆನಂತರ ತೇರು ಎಳೆಯುವುದು ಇಲ್ಲಿ ಸಂಪ್ರದಾಯವಾಗಿದೆ.